ಪಾಕಿಸ್ತಾನದ ಅಬುಧಾಬಿ ಕಾಲೊನಿಯಲ್ಲಿ ಒಂದೇ ಕುಟುಂಬದ ಐವರು ಹಿಂದೂಗಳನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಜಿಹಾದಿ ಹಂತಕರು ಈ ಕೃತ್ಯ ಎಸಗಿದ್ದಾರೆ ಎಂದು ಹಲವು ಆನ್ಲೈನ್ ಸುದ್ದಿ ವಾಹಿನಿಗಳು ಸುದ್ದಿ ಪ್ರಕಟಿಸಿವೆ. ಪೋಸ್ಟ್ಕಾರ್ಡ್ ಸೇರಿದಂತೆ ಕನ್ನಡದ ಹಲವು ಫೇಸ್ಬುಕ್ ಪುಟಗಳು ಹಂಚಿಕೊಂಡಿವೆ. ಬಿಜೆಪಿ ನಾಯಕ ಸುರೇಂದ್ರ ಪುನಿಯಾ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮತ್ತು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಇದನ್ನು ಸಿಎಎ ವಿರೋಧಿಗಳು ಪ್ರತಿಭಟಿಸುವುದಿಲ್ಲ ಎಂದು ಈ ಪೋಸ್ಟ್ಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.