ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಾಹನವನ್ನು ಪ್ರತಿಭಟನಾಕಾರರು ತಡೆಯುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವರೊಬ್ಬರಿಗೆ ನೀಡುವ ಗೌರವವಿದು ಎಂದು ವಿಡಿಯೊವನ್ನು ಬಿಂಬಿಸಲಾಗಿದೆ. ಬಿಜೆಪಿ ನಾಯಕರಿಗೆ ಈ ರೀತಿಯ ಅವಮಾನ ಮಾಡುತ್ತಿರುವುದನ್ನು ನೋಡಿ ಹಿಂದೂಗಳಿಗೆ ಬೇಸರವಾಗುತ್ತಿಲ್ಲವೇ? ಇಂಥ ದಿನವನ್ನು ನಾವು ನೋಡಬಾರದಿತ್ತು.ಬಿಜೆಪಿ ನಾಯಕರನ್ನು ಈ ರೀತಿ ಏಕೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಕುರಿತು ಚಿಂತನೆ ನಡೆಯಬೇಕು ಎಂದು ವಿಡಿಯೊಗೆ ಅಡಿಬರಹ ಬರೆಯಲಾಗಿದೆ.