ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಹಾಗೂ ಆಲ್ಟ್ ನ್ಯೂಸ್, ವೈರಲ್ ಫೊಟೊ ಬಗ್ಗೆ ಪರಿಶೀಲನೆ ನಡೆಸಿವೆ. ಈ ಚಿತ್ರವು ತ್ರಿಪುರಾದ್ದಲ್ಲ ಎಂದು ಖಚಿತಪಡಿಸಿವೆ. ಇತ್ತೀಚೆಗೆ ದೆಹಲಿಯ ರೋಹಿಂಗ್ಯಾ ನಿರಾಶ್ರಿತರ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಪುಸ್ತಕಗಳು ಬೆಂಕಿಗಾಹುತಿಯಾಗಿವೆ. ತ್ರಿಪುರಾ ಹಿಂಸಾಚಾರಕ್ಕೂ, ಧಾರ್ಮಿಕ ಗ್ರಂಥಗಳು ಸುಟ್ಟಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೆಬ್ಸೈಟ್ಗಳು ಅಭಿಪ್ರಾಯಪಟ್ಟಿವೆ.