ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರು ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮನ್ನು ತೆರವುಗೊಳಿಸುವಂತೆ ವಿಡಿಯೊ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಅಂತಹ ಒಂದು ವಿಡಿಯೊ ಸಂದೇಶ ಈಗ ವೈರಲ್ ಆಗಿದೆ. ವೈಶಾಲಿ ಯಾದವ್ ಎಂಬ ವಿದ್ಯಾರ್ಥಿನಿಯು ತಮ್ಮನ್ನೂ ಸೇರಿ ಇತರ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ವಿಡಿಯೊ ಮೂಲಕ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿದ್ಯಾರ್ಥಿನಿಯು ಸಮಾಜವಾದಿ ಪಕ್ಷದ ಮುಖಂಡ ಮಹೇಂದ್ರ ಯಾದವ್ ಅವರ ಮಗಳು. ಆಕೆ ಉಕ್ರೇನ್ನಲ್ಲಿ ಇಲ್ಲ. ಮೋದಿ ನೇತೃತ್ವದ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ತಮ್ಮ ಮನೆಯಿಂದಲೇ ಈ ವಿಡಿಯೊ ಮಾಡಿದ್ದಾರೆ ಎಂದು ವಿಡಿಯೊವನ್ನು ಬಿಂಬಿಸಲಾಗುತ್ತಿದೆ.