ಈ ಚಿತ್ರದ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಕ್ವಿಂಟ್’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ತಮಿಳುನಾಡಿನ ‘ಮೈಂಡ್ ಎಸ್ಕೇಪ್ಸ್ ಕ್ಲಬ್’ ಸಂಸ್ಥೆ ಈ ವರ್ಷದ ಆರಂಭದಲ್ಲಿ ಊಟಿಯಲ್ಲಿ ಆಯೋಜಿಸಿದ್ದ ಭೋಜನಕೂಟದ ಚಿತ್ರ ಇದಾಗಿದೆ. ತಮಿಳುನಾಡಿನ ಹಣಕಾಸು ಸಚಿವ ಪಿ. ತ್ಯಾಗರಾಜನ್, ಸಿಪಿಎಂ ನಾಯಕರಾದ ಬೃಂದಾ ಕಾರಟ್, ಪ್ರಕಾಶ್ ಕಾರಟ್ ಮತ್ತು ಮೈಂಡ್ ಎಸ್ಕೇಪ್ಸ್ ಕ್ಲಬ್ ಸಂಸ್ಥಾಪಕಿ ದೀಪಾಲಿ ಸಿಖಂಡ್ ಅವರು ಪತ್ರಕರ್ತರ ಜೊತೆ ಇದ್ದಾರೆ. ಈ ವೈರಲ್ ಚಿತ್ರದ ಕುರಿತು ಎನ್. ರಾಮ್ ಅವರೂ ಕೂಡಾ ಸ್ಪಷ್ಟನೆ ನೀಡಿದ್ದು, ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ’ ಎಂದು ದಿ ಕ್ವಿಂಟ್ ವಿವರಿಸಿದೆ.