ಪೊಲೀಸ್ ಸಮವಸ್ತ್ರದಲ್ಲಿರುವವರಿಗೆ ಜನರು ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೊವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ವಿಡಿಯೊ ಜೈಪುರ ಘಟನೆಗೆ ಸಂಬಂಧಿಸಿದ್ದು ಎಂದು ವಿಡಿಯೊ ಕುರಿತು ಹೇಳಲಾಗುತ್ತಿದೆ. ಕಲ್ಲು ತೂರುತ್ತಿರುವವರು ‘ಅಲ್ಲಾ ಹು ಅಕ್ಬರ್’ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕೇಳುತ್ತದೆ. ಇದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದ ವ್ಯಕ್ತಿ ‘ರಾಜಸ್ಥಾನವು ಕಾಶ್ಮೀರವಾಗಿ ಬದಲಾಗಿದ್ದನ್ನು ನಾವು ಗಮನಿಸಿರಲಿಲ್ಲ’ ಎಂದು ತಲೆ ಬರಹ ನೀಡಿದ್ದಾರೆ.