ವಿಡಿಯೊಗಳನ್ನು ಪರಿಶೀಲಿಸಿದಾಗ, ರೈತರಿಗೆ ಸಂಬಂಧಿಸಿದ ಯಾವುದೇ ಧ್ವಜಗಳು ಕಾಣಿಸಿಲ್ಲ ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ. ಇದು ಲೂಧಿಯಾನದ ಬಾಬಾ ರೋಧು ಶಾಹ್ಜಿ ಮೇಳಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಕೌಂಕೆ ಕಾಲನ್ ಎಂಬ ಗ್ರಾಮದಲ್ಲಿ ಬಾಬಾ ರೋಧು ಶಾಹ್ಜಿ ಅವರಿಗೆ ಮದ್ಯ ಸಮಾರಾಧನೆ ನಡೆಸುವ ಸಂಪ್ರದಾಯ ವರ್ಷಗಳಿಂದ ಇದೆ. ಮೊದಲಿಗೆ ನೈವೇದ್ಯ ಸಲ್ಲಿಸಿ, ಬಳಿಕ ಭಕ್ತರಿಗೆ ಅದನ್ನು ವಿತರಿಸಲಾಗುತ್ತದೆ. ರೈತರ ಪ್ರತಿಭಟನೆಗೂ, ಈ ಮದ್ಯಾರಾಧನೆಗೂ ಯಾವುದೇ ಸಂಬಂಧವಿಲ್ಲ ಎಂಬುದು ದೃಢಪಟ್ಟಿದೆ.