ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಮುದಾಯಗಳ ಓಲೈಕೆ ಶುರುವಾಗಿದೆ. ಬಿಎಸ್ಪಿಯು ಇತ್ತೀಚೆಗೆ ಬ್ರಾಹ್ಮಣರ ಸಮ್ಮೇಳನ ನಡೆಸಿತ್ತು. ಈ ಸಮಯದಲ್ಲೇ ಪೋಸ್ಟರ್ನಲ್ಲಿರುವ ಬರಹವೊಂದು ವೈರಲ್ ಆಗಿದೆ. ‘ಬ್ರಾಹ್ಮಣರು ವಿದೇಶಿಯರು. ಅವರ ಮನೆಗಳಲ್ಲಿ ಎ.ಸಿ (ಹವಾನಿಯಂತ್ರಣ ವ್ಯವಸ್ಥೆ) ಇದೆ’ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಸಾಕಷ್ಟು ಜನರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ. ಅಖಿಲೇಶ್ ಅವರ ಕೋಣೆಯ ಚಿತ್ರವೊಂದನ್ನು ಪ್ರಕಟಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, ‘ಅಖಿಲೇಶ್ ಮನೆಯಲ್ಲಿ ಎರಡು ಎ.ಸಿ ಇವೆ. ಅವರು ವಿದೇಶಿಗರೇ’ ಎಂದು ಪ್ರಶ್ನಿಸಿದ್ದಾರೆ.