ಹಿಂದೂಗಳನ್ನು ಕೊಂದು, ಅವರ ಜನಸಂಖ್ಯೆಯನ್ನು ಕಡಿಮೆ ಮಾಡಲು ಮುಸ್ಲಿಮರು ಸಂಚು ರೂಪಿಸಿದ್ದರು. ಇದಕ್ಕಾಗಿ ಉತ್ತರ ಪ್ರದೇಶದ ಮುಜಪ್ಫರನಗರದಲ್ಲಿ ರಸಗುಲ್ಲಾ ತಯಾರಿಕೆ ವೇಳೆ ಅಪಾರ ಪ್ರಮಾಣದ ವಿಷ ಬೆರೆಸಲಾಗಿತ್ತು. ಆ ರಸಗುಲ್ಲಾವನ್ನು ದೀಪಾವಳಿಯಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದರು. ಆದರೆ, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶೋಧ ಕಾರ್ಯ ನಡೆಸಿ ರಸಗುಲ್ಲಾವನ್ನು ನಾಶ ಮಾಡಿದರು. ಮುಸ್ಲಿಮರನ್ನು ಬಂಧಿಸಿದರು ಎಂಬ ವಿವರ ಇರುವ ವಿಡಿಯೊ ಮತ್ತು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿವೆ. ಸುದರ್ಶನ ಟಿ.ವಿ.ಯ ಸುದರ್ಶನ ಚೌಹಾನ್ಕೆ ಅಂತಹ ವಿಡಿಯೊ ಹಂಚಿಕೊಂಡಿದ್ದಾರೆ. ಪೊಲೀಸರು ರಸಗುಲ್ಲಾವನ್ನು ಹಳ್ಳಕ್ಕೆ ಸುರಿಯುವ ದೃಶ್ಯ ಅದರಲ್ಲಿ ಇದೆ. ಇದು ಸುಳ್ಳು ಸುದ್ದಿ.