ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಉಕ್ರೇನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸುವುದಾಗಿ ಭಾರತಕ್ಕೆ ರಷ್ಯಾ ಭರವಸೆ ನೀಡಿದೆ ಎಂಬ ಮಾಹಿತಿ ಇರುವ ಪೋಸ್ಟ್ ವೈರಲ್ ಆಗಿದೆ. ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೇಯ್ ಶೋಯ್ಗು ಅವರು ಈ ಭರವಸೆ ನೀಡಿದ್ದಾರೆ. ಭಾರತೀಯರು ತಮ್ಮ ಮನೆ ಅಥವಾ ವಾಹನದ ಮೇಲೆ ಭಾರತದ ಧ್ವಜ ಹಾರಿಸಬೇಕು. ಅದನ್ನು ನೋಡಿ ರಷ್ಯಾ ಸಶಸ್ತ್ರ ಪಡೆಯು ಭಾರತೀಯರ ಬಳಿಗೆ ಧಾವಿಸಿ ಅವರನ್ನು ರಕ್ಷಿಸುತ್ತದೆ ಎಂದು ಈ ಪೋಸ್ಟ್ನಲ್ಲಿ ಹೇಳಲಾಗಿದೆ. ಇದನ್ನು ಹಲವರು ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.