ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಹರಿಯಾಣದ ಪಿಪ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಚದುರಿಸುದ್ದಾರೆ ಎಂಬ ಅಡಿಬರಹದೊಂದಿದೆ ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿದೆ. ಕೈಯಲ್ಲಿ ಬಂದೂಕು ಹಾಗೂ ಲಾಠಿ ಹಿಡಿದ ಪೊಲೀಸ್ ಮತ್ತು ಅವರ ಎದುರು ಕೈಯಲ್ಲಿ ಇಟ್ಟಿಗೆ ಹಿಡಿದು ಪ್ರತಿರೋಧ ತೋರುವ ಭಂಗಿಯಲ್ಲಿ ಪ್ರತಿಭಟನಕಾರ ನಿಂತಿರುವ ಚಿತ್ರ ಇದೆ.
ಯುವ ಕಾಂಗ್ರೆಸ್ನ ಛತ್ತೀಸ್ಗಡ ಘಟಕವು ತನ್ನ ಟ್ವಿಟರ್ ಖಾತೆಯಲ್ಲಿ ಚಿತ್ರ ಪ್ರಕಟಿಸಿದ್ದು, ‘ಮೋದಿ ಸರ್ಕಾರದ ವರ್ತನೆ ಹೀಗಿದೆ ನೋಡಿ’ ಎಂದು ಟೀಕಿಸಿದೆ. ಟ್ವಿಟರ್ನನೂರಾರು ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರ 2013ರಲ್ಲಿ ಉತ್ತರ ಪ್ರದೇಶದ ಮೀರಠ್ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ. ಮುಜಫ್ಫರ್ಪುರ ಗಲಭೆ ಸಂಬಂಧ ನಿಷೇಧಾಜ್ಞೆ ಉಲ್ಲಂಘಿಸಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು ಎಂದು ಹಲವು ಪತ್ರಿಕೆಗಳು ಇದೇ ಚಿತ್ರ ಬಳಸಿಕೊಂಡು ವರದಿ ಪ್ರಕಟಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.