‘ಹಳಿ ತಪ್ಪುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ಬರಬೇಕಾದರೆ, ನೋಟುಗಳ ಮೇಲೆ ಗಣೇಶ ಹಾಗೂ ಲಕ್ಷ್ಮಿಯ ಚಿತ್ರಗಳನ್ನು ಮುದ್ರಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇದೇ 26ರಂದು ಪ್ರಧಾನಿಗೆ ಒತ್ತಾಯಿಸಿದ್ದರು. ಮುಸ್ಲಿಂ ದೇಶವಾಗಿದ್ದರೂ ಇಂಡೊನೇಷ್ಯಾದ ನೋಟುಗಳಲ್ಲಿ ಗಣೇಶನ ಚಿತ್ರ ಮುದ್ರಿಸಲಾಗಿದೆ ಎಂದು ಅವರು ಉದಾಹರಣೆ ನೀಡಿದ್ದರು. ಕೇಜ್ರಿವಾಲ್ ಅವರ ಮಾತುಗಳನ್ನು ಎಎಪಿಯ ಹಲವು ನಾಯಕರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆದರೆ, ಗಣೇಶನ ಚಿತ್ರದ ನೋಟು ಅಲ್ಲಿ ಚಲಾವಣೆಯಲ್ಲಿಲ್ಲ.