ಆದರೆ ಇದು ಸುಳ್ಳು ಸುದ್ದಿ ಎಂದು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಜನವರಿ 10ರಂದು ಮನೋಹರ ಲಾಲ್ ಖಟ್ಟರ್ ಅವರು ರೈತ ಪಂಚಾಯತ್ನ ಸ್ಥಳವನ್ನು ತಲುಪುವ ಮುನ್ನವೇ, ಈ ಕಾಯ್ದೆಗಳನ್ನು ವಿರೋಧಿಸುವ ರೈತರು ಆ ಸ್ಥಳವನ್ನು ತಲುಪಿದ್ದರು. ರೈತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಆರಂಭಿಸಿದರು. ಕಾಯ್ದೆಯನ್ನು ಬೆಂಬಲಿಸುವ ರೈತರಿಗಿಂತ, ವಿರೋಧಿಸುವ ರೈತರ ಸಂಖ್ಯೆ ಹಲವು ಪಟ್ಟು ಹೆಚ್ಚು ಇತ್ತು. ಭಾರಿ ಪ್ರತಿಭಟನೆ ನಡೆದ ಕಾರಣ, ಮನೋಹರ ಲಾಲ್ ಖಟ್ಟರ್ ಅವರು ರೈತ ಮಹಾಪಂಚಾಯತ್ನಲ್ಲಿ ಭಾಗಿಯಾಗದೆ ವಾಪಸಾದರು ಎಂದು ಸುದ್ದಿ ಸಂಸ್ಥೆಗಳು ವರದಿ ಪ್ರಕಟಿಸಿವೆ. ಆದರೆ ಕೆಲವರು ಈ ಸುದ್ದಿಯನ್ನು ತಿರುಚಿ, ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ.