ದೇವರ ವಿಗ್ರಹವನ್ನು ತುಳಿಯುತ್ತಿರುವ ಯುವಕ ಮುಸ್ಲಿಂ ಸಮುದಾಯದವನಲ್ಲ, ಆತ ಹಿಂದೂ ಎಂದು ಉತ್ತರ ಪ್ರದೇಶ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಭೀಮ್ ಆರ್ಮಿಯ ಸದಸ್ಯನಾದ ಲೋಧಿ ಗೌತಮ್ ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ ದೂರು ದಾಖಲಾಗಿದ್ದು, ವಾರಾಣಸಿಯ ಮಿರ್ಜಾಮುರದ್ ಪೊಲೀಸರು ಆತನ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಮೇ ತಿಂಗಳಿನಲ್ಲಿ ಕೃತ್ಯ ನಡೆದಿದ್ದು, ತಪ್ಪಿತಸ್ಥನನ್ನು ಅದೇ ತಿಂಗಳಿನಲ್ಲೇ ಜೈಲಿಗೆ ಕಳುಹಿಸಲಾಗಿದೆ ಎಂದು ವಾರಾಣಸಿ ಪೊಲೀಸರು ಮೇ 11ರಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ನಲ್ಲಿ ಇದ್ದ ಚಿತ್ರವನ್ನು ಬಳಸಿಕೊಂಡು, ಮುಸ್ಲಿಮರು ಈ ಕೃತ್ಯ ಎಸಗಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ.