ಈದುಲ್ ಫಿತ್ರ್ ಹಬ್ಬದ ಮುನ್ನಾದಿನ ಹೈದರಾಬಾದ್ನ ಮದೀನಾ ಮಾರುಕಟ್ಟೆಯು ಜನರಿಂದ ಕಿಕ್ಕಿರಿದು ತುಂಬಿದೆ. ಮುಸ್ಲಿಮರು ಹಬ್ಬದ ಖರೀದಿಗೆ ದಾಂಗುಡಿಯಿಟ್ಟಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಐಟಿ ಸೆಲ್ನ ವಿವೇಕಾನಂದ ಅವರು ಹರಿಬಿಟ್ಟಿದ್ದ ವಿಡಿಯೊ ವೈರಲ್ ಆಗಿತ್ತು. ಇದನ್ನು ಹಲವರು ಷೇರ್ ಮಾಡಿದ್ದರು. ತೆಲಂಗಾಣ ಸರ್ಕಾರದ ನಡೆಯನ್ನೂ ಪ್ರಶ್ನಿಸಿದ್ದರು. ದೆಹಲಿಯಲ್ಲೂ ಇದೇ ರೀತಿಯ ಜನನಿಬಿಡ ಮಾರುಕಟ್ಟೆಯ ವಿಡಿಯೊವನ್ನು ಫೇಸ್ಬುಕ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದರು.