<p>‘ಮೀನಿನ ಊಟಕ್ಕೆ ಮುಳ್ಳಿನ ಚಿಂತೆ’ ಎಂಬ ಮಾತಿದೆ. ಅಂದರೆ, ಕೆಲವರು ಮೀನಿನ ವಾಸನೆಗೆ ಬೇಸತ್ತೋ ಮುಳ್ಳಿಗೆ ಹೆದರಿಯೋ ಅದರ ಖಾದ್ಯವನ್ನು ತಿನ್ನಲು ಹಿಂಜರಿಯುತ್ತಾರೆ. ಆದರೆ, ಎಲ್ಲ ಮಾಂಸದ ಆಹಾರಗಳಿಂದ ಸಿಗುವ ಆರೋಗ್ಯಕ್ಕಿಂತ ಮೀನಿನ ಖಾದ್ಯದಲ್ಲಿ ಸಿಗುವ ಆರೋಗ್ಯ ಹೆಚ್ಚು ಎಂದರೆ ಅತಿಶಯೋಕ್ತಿಯಲ್ಲ. ಮೀನು ದೇಹಕ್ಕೆ ಹೆಚ್ಚಿನ ಪೋಷ ಕಾಂಶ ನೀಡುವುದರ ಜೊತೆಗೆ ಹೃದಯದ ಆರೋಗ್ಯವನ್ನೂ ಕಾಪಿಡುತ್ತದೆ. ನಾವು ಸಣ್ಣವರಿದ್ದಾಗ, ಮೀನು ತಿನ್ನಲು ನಿರಾಕರಿಸಿದರೆ ‘ಮೀನು ತಿನ್ನು; ಬುದ್ಧಿ ಚುರುಕಾಗುತ್ತದೆ’ ಎಂದು ಅಪ್ಪ ಹೇಳುತ್ತಿದ್ದ ನೆನಪು.</p>.<p>ಮೀನಿನ ಅಡುಗೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ.ಉದಾಹರಣೆಗೆ, ಕರಾವಳಿಯ ಮೀನು ಖಾದ್ಯವು ಮಲೆನಾಡಿಗಿಂತ ಭಿನ್ನ. ಇನ್ನು ಬಯಲುಸೀಮೆಯ ಮೀನಿನಡುಗೆ ತನ್ನದೇ ಆದ ವಿಶಿಷ್ಟ ಶೈಲಿ, ರುಚಿಯಿಂದ ಕೂಡಿರುತ್ತದೆ. ಕೆಲವೊಮ್ಮೆ ಮೀನಿನ ಜಾತಿಗಳ ಆಧಾರದಿಂದಲೂ ಖಾದ್ಯ ವೈವಿಧ್ಯವನ್ನು ಕಾಣಬಹುದು. ಹೊಳೆಮೀನುಗಳಾದ ಕುಚ್ಚು ಮೀನು, ಗೌರಿ, ಕಾಟ್ಲ, ರೋಹು, ಹಾವುಮೀನು ಒಂದು ಬಗೆಯ ರುಚಿ ನೀಡಿದರೆ, ಸಮುದ್ರದ ಮೀನುಗಳಾದ ಬಂಗುಡೆ, ಅಂಜಲ್, ಬೂತಾಯಿ, ಪಾಂಫ್ರೆಟ್ ಮೀನುಗಳ ಸ್ವಾದವೇ ಬೇರೆ.</p>.<p>ಕೆಲವರಿಗೆ ಮೀನಿನ ಸಾರು ರುಚಿಸಿದರೆ ಮತ್ತೆ ಕೆಲವರಿಗೆ ಫ್ರೈ ಅಚ್ಚುಮೆಚ್ಚು. ಒಟ್ಟಿನಲ್ಲಿ, ಊಟದಲ್ಲಿ ಮೀನಿನ ಮೆನು ಇದ್ದರೆ ಎರಡು ಹೊಟ್ಟೆ. ಅದರಲ್ಲಿಯೂ ಮಲೆನಾಡು ಮತ್ತು ಕರಾವಳಿಯಲ್ಲಿ ಸಿಗುವ ‘ಜುಮ್ಮನಕಾಯಿ’ ಹಾಕಿ ಮಾಡುವ ಮೀನಿನ ಅಡುಗೆಗಳು ಇನ್ನೂ ರುಚಿಕರ. ಮೀನಿನ ಕರಿ ಅಥವಾ ಚಟ್ನಿಗೆ ಅದ್ಭುತ ರುಚಿ ನೀಡಲು ಇದರ ಬಳಕೆ ಕಡ್ಡಾಯ. ಈ ಜುಮ್ಮನಕಾಯಿಗಳು ಮೀನಿನ ಅಡುಗೆಗೆ ಒಂದು ವಿಶೇಷ ಪರಿಮಳ ಮತ್ತು ರುಚಿಯನ್ನು ನೀಡುತ್ತವೆ. ಇದರೊಂದಿಗೆ ಅಮ್ಮ ಮಾಡಿದ ಅಕ್ಕಿಹಿಟ್ಟಿನ ಕೈರೊಟ್ಟಿ ಇದ್ದರೆ ಆಹ್ಹಾ... ಸ್ವರ್ಗಕ್ಕೆ ಮೂರೇ ಗೇಣು.</p>.<p>ಮತ್ತೆ ಈ ಜುಮ್ಮನಕಾಯಿ ಮೀನಿನಡುಗೆಯ ರುಚಿ ಹೆಚ್ಚಿಸಲು ಮಾತ್ರ ಎಂದು ತಿಳಿದಿರಾ? ಇಲ್ಲ... ಇದರಲ್ಲೂ ಆರೋಗ್ಯದ ಗುಟ್ಟು ಅಡಗಿದೆ. ಜ್ವರ ಬಂದು ಬಾಯಿ ಕೆಟ್ಟಾಗ ಈ ಕಾಯಿಗಳನ್ನು ಹಾಕಿ ಮಾಡಿದ ಮೀನಿನ ಸಾರು ಹಿತವಾದ ಅನುಭವ ನೀಡುತ್ತದೆ. ಅಷ್ಟೇ ಅಲ್ಲದೆ ಈ ಕಾಯಿಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಇದರಲ್ಲಿರುವ ನಾಲಿಗೆ ಜುಮ್ಮೆನ್ನಿಸುವ ಗುಣವು ಹಲ್ಲುನೋವು ನಿವಾರಿಸಲು ಸಹಾಯ ಮಾಡುತ್ತದೆ. ಅದಕ್ಕಾಗೇ ಇದಕ್ಕೆ ‘ಜುಮ್ಮನಕಾಯಿ’ ಎಂದು ಹೆಸರು ಬಂದಿರಲೂಬಹುದು. ಹೊಟ್ಟೆಯಲ್ಲಿರುವ ಜಂತುಹುಳುಗಳನ್ನು ನಾಶಪಡಿಸುವ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಈ ಕಾಯಿಗಿದೆ. ಜುಮ್ಮನಕಾಯಿ ಹಾಕಿದ ಸಾರು ಇಲ್ಲವೇ ಕಷಾಯ ಕುಡಿಯುವುದರಿಂದ ಗಂಟಲು ನೋವು ಮತ್ತು ಕಫ ಕಡಿಮೆಯಾಗುತ್ತದೆ. ಇದರ ಮುಳ್ಳನ್ನು ಗಂಟಲು ನೋವಿಗೆ ಹಾಗೂ ಬೀಜವನ್ನು ಚರ್ಮದ ಕಾಯಿಲೆಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಜುಮ್ಮನಕಾಯಿಗಳನ್ನು ಬಳಸಿ ರುಚಿಕರ ತಂಬುಳಿಯನ್ನೂ ಮಾಡಬಹುದು.</p>.<p>ಇನ್ನು ಮಲೆನಾಡಿನ ಹಲವು ಅಡುಗೆಗಳಲ್ಲಿ ಹಾಗೂ ಕರಾವಳಿಯ ಕೊಂಕಣಿ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ಅಡುಗೆಗಳಲ್ಲಿ ಜುಮ್ಮನಕಾಯಿಗೆ ವಿಶೇಷ ಸ್ಥಾನವಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಮಾಡುವ ವಿಶೇಷ ಖಾದ್ಯಗಳಲ್ಲೂ ಇದನ್ನು ಬಳಸುವ ಸಂಪ್ರದಾಯವಿದೆ. ಈ ಕಾಯಿಯು ಕರಾವಳಿ ಮತ್ತು ಮಲೆನಾಡಿನ ಸಾಂಪ್ರದಾಯಿಕ ಅಡುಗೆಗಳಿಗೆ ಬಳಸಲಾಗುವ ಮಸಾಲೆ ಸಾಮಗ್ರಿ. ಇದನ್ನು ಕರಾವಳಿಯಲ್ಲಿ ‘ತೆಪ್ಪಳ’ ಎಂತಲೂ ಮರಾಠಿಯಲ್ಲಿ ‘ತಿರಫಲ’ ಎಂದೂ ಕರೆಯುತ್ತಾರೆ. v</p>.<p><strong>ಜುಮ್ಮನಕಾಯಿ- ಮೀನಿನ ಗ್ರೇವಿ</strong></p><p>ಜುಮ್ಮನ ಕಾಯಿಯು ಮೀನಿನ ತೀಕ್ಷ್ಮವಾದ ವಾಸನೆಯನ್ನು ಹೋಗಲಾಡಿಸಿ, ಗ್ರೇವಿಗೆ ಅದ್ಭುತವಾದ ರುಚಿಯನ್ನು ನೀಡುತ್ತದೆ.</p><p><strong>ಏನೆಲ್ಲ ಬೇಕು ಈ ಗ್ರೇವಿಗೆ?</strong></p><p>ಒಂದು ಕೆ.ಜಿ ಮೀನು. ಮೂರು ಮಧ್ಯಮ ಗಾತ್ರದ ಈರುಳ್ಳಿ, ಮೂರು ಮಧ್ಯಮ ಗಾತ್ರದ ಬೆಳ್ಳುಳ್ಳಿ ಗಡ್ಡೆ, ಎರಡು ಇಂಚು ಹಸಿಶುಂಠಿ, ಎರಡು ನಿಂಬೆ ಗಾತ್ರದ ಹುಣಸೆಹಣ್ಣು, ಕಾಯಿತುರಿ ಎರಡು ಬಟ್ಟಲು, ಕೊತ್ತಂಬರಿ ಸೊಪ್ಪು ಒಂದು ಹಿಡಿಯಷ್ಟು, ಮೆಣಸಿನಕಾಯಿಪುಡಿ ಮೂರರಿಂದ ನಾಲ್ಕು ಚಮಚ, ಕಾಲು ಚಮಚ ಮೆಂತ್ಯ, ಚಕ್ಕೆ ಚಿಕ್ಕ ಐದು ತುಂಡುಗಳು, ಆರು ಲವಂಗ, ಒಂದು ಏಲಕ್ಕಿ, ಒಂದು ಟೀ ಚಮಚ ಕೊತ್ತಂಬರಿ ಕಾಳು, ಜುಮ್ಮನಕಾಯಿ ನಾಲ್ಕು (ಬೀಜ ಸ್ವಲ್ಪ ಕಹಿಯಾಗಿ ಇರುವುದರಿಂದ ಅದನ್ನು ಬಿಟ್ಟು ಮೇಲಿನ ಸಿಪ್ಪೆಯ ಭಾಗವನ್ನು ಮಾತ್ರ ಹಾಕಬೇಕು) ಕೊಬ್ಬರಿಎಣ್ಣೆ ನಾಲ್ಕು ಚಮಚ, ರುಚಿಗೆ ತಕ್ಕಷ್ಟು ಉಪ್ಪು.</p><p><strong>ಈ ರೀತಿ ಮಾಡಿ</strong></p><p>ಉಪ್ಪು, ಅರಸಿನ ಹಾಕಿ ಚೆನ್ನಾಗಿ ತೊಳೆದ ಮೀನಿಗೆ ಒಂದು ನಿಂಬೆ ಗಾತ್ರದ ಹುಣಸೆಹಣ್ಣಿನ ರಸ, ಒಂದು ಚಮಚ ಮೆಣಸಿನಕಾಯಿಪುಡಿ. ಸ್ವಲ್ಪ ಉಪ್ಪು ಹಾಕಿ 30 ನಿಮಿಷ ನೆನೆಯಲು ಬಿಡಬೇಕು. ಬಾಣಲೆಗೆ ಸ್ವಲ್ಪ ಕೊಬ್ಬರಿಎಣ್ಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ,ಲವಂಗ, ಏಲಕ್ಕಿ ಹಾಗೂ ಮೆಂತ್ಯ ಕಾಳನ್ನು ಹುರಿದುಕೊಳ್ಳಬೇಕು. ಅದು ತಣಿದಾದ ಬಳಿಕ ಮಿಕ್ಸಿಜಾರಿಗೆ ಹಾಕಿ ಜುಮ್ಮನಕಾಯಿ, ಕಾಯಿತುರಿ, ನೆನೆಸಿಟ್ಟ ಹುಣಸೆಹಣ್ಣು, ಕೊತ್ತಂಬರಿಸೊಪ್ಪು ಹಾಗೂ ಕೊತ್ತಂಬರಿ ಕಾಳು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.</p><p>ಬಳಿಕ ಅಗಲವಾದ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಹೆಚ್ಚಿದ ಈರುಳ್ಳಿ ಹಾಗೂ ರುಬ್ಬಿಕೊಂಡ ಮಿಶ್ರಣ, ಮೆಣಸಿನಕಾಯಿಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಎಣ್ಣೆಯಲ್ಲಿ ಬಾಡಿಸಬೇಕು. ಬಳಿಕ ಗ್ರೇವಿಯ ಹದಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಬೇಕು. ಕುದಿಯುವ ಗ್ರೇವಿಗೆ ನೆನೆಸಿಟ್ಟ ಮೀನುಗಳನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಮೀನಿನ ಗ್ರೇವಿಯ ಘಮ ಮನೆ ತುಂಬಾ ಪಸರಿಸುತ್ತದೆ.</p><p>ಮೀನಿನ ಗ್ರೇವಿಗಳು ಮಾಡಿದ ತಕ್ಷಣಕ್ಕಿಂತ ತಣ್ಣಗಾದ ನಂತರ ಸವಿದರೆ ರುಚಿ ಹೆಚ್ಚು. ಮೀನಿನ ಅಡುಗೆಗೆ ಸಹಜವಾಗಿ ಉಪ್ಪು, ಖಾರ, ಹುಳಿ ಸ್ವಲ್ಪ ಹೆಚ್ಚಿದ್ದರೆ ಇನ್ನೂ ರುಚಿಕರ. ಇದರ ಜೊತೆಗೆ ಜುಮ್ಮನಕಾಯಿಯು ಸ್ವಾದವನ್ನು ಇಮ್ಮಡಿಗೊಳಿಸುತ್ತದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-51-17733383</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮೀನಿನ ಊಟಕ್ಕೆ ಮುಳ್ಳಿನ ಚಿಂತೆ’ ಎಂಬ ಮಾತಿದೆ. ಅಂದರೆ, ಕೆಲವರು ಮೀನಿನ ವಾಸನೆಗೆ ಬೇಸತ್ತೋ ಮುಳ್ಳಿಗೆ ಹೆದರಿಯೋ ಅದರ ಖಾದ್ಯವನ್ನು ತಿನ್ನಲು ಹಿಂಜರಿಯುತ್ತಾರೆ. ಆದರೆ, ಎಲ್ಲ ಮಾಂಸದ ಆಹಾರಗಳಿಂದ ಸಿಗುವ ಆರೋಗ್ಯಕ್ಕಿಂತ ಮೀನಿನ ಖಾದ್ಯದಲ್ಲಿ ಸಿಗುವ ಆರೋಗ್ಯ ಹೆಚ್ಚು ಎಂದರೆ ಅತಿಶಯೋಕ್ತಿಯಲ್ಲ. ಮೀನು ದೇಹಕ್ಕೆ ಹೆಚ್ಚಿನ ಪೋಷ ಕಾಂಶ ನೀಡುವುದರ ಜೊತೆಗೆ ಹೃದಯದ ಆರೋಗ್ಯವನ್ನೂ ಕಾಪಿಡುತ್ತದೆ. ನಾವು ಸಣ್ಣವರಿದ್ದಾಗ, ಮೀನು ತಿನ್ನಲು ನಿರಾಕರಿಸಿದರೆ ‘ಮೀನು ತಿನ್ನು; ಬುದ್ಧಿ ಚುರುಕಾಗುತ್ತದೆ’ ಎಂದು ಅಪ್ಪ ಹೇಳುತ್ತಿದ್ದ ನೆನಪು.</p>.<p>ಮೀನಿನ ಅಡುಗೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ.ಉದಾಹರಣೆಗೆ, ಕರಾವಳಿಯ ಮೀನು ಖಾದ್ಯವು ಮಲೆನಾಡಿಗಿಂತ ಭಿನ್ನ. ಇನ್ನು ಬಯಲುಸೀಮೆಯ ಮೀನಿನಡುಗೆ ತನ್ನದೇ ಆದ ವಿಶಿಷ್ಟ ಶೈಲಿ, ರುಚಿಯಿಂದ ಕೂಡಿರುತ್ತದೆ. ಕೆಲವೊಮ್ಮೆ ಮೀನಿನ ಜಾತಿಗಳ ಆಧಾರದಿಂದಲೂ ಖಾದ್ಯ ವೈವಿಧ್ಯವನ್ನು ಕಾಣಬಹುದು. ಹೊಳೆಮೀನುಗಳಾದ ಕುಚ್ಚು ಮೀನು, ಗೌರಿ, ಕಾಟ್ಲ, ರೋಹು, ಹಾವುಮೀನು ಒಂದು ಬಗೆಯ ರುಚಿ ನೀಡಿದರೆ, ಸಮುದ್ರದ ಮೀನುಗಳಾದ ಬಂಗುಡೆ, ಅಂಜಲ್, ಬೂತಾಯಿ, ಪಾಂಫ್ರೆಟ್ ಮೀನುಗಳ ಸ್ವಾದವೇ ಬೇರೆ.</p>.<p>ಕೆಲವರಿಗೆ ಮೀನಿನ ಸಾರು ರುಚಿಸಿದರೆ ಮತ್ತೆ ಕೆಲವರಿಗೆ ಫ್ರೈ ಅಚ್ಚುಮೆಚ್ಚು. ಒಟ್ಟಿನಲ್ಲಿ, ಊಟದಲ್ಲಿ ಮೀನಿನ ಮೆನು ಇದ್ದರೆ ಎರಡು ಹೊಟ್ಟೆ. ಅದರಲ್ಲಿಯೂ ಮಲೆನಾಡು ಮತ್ತು ಕರಾವಳಿಯಲ್ಲಿ ಸಿಗುವ ‘ಜುಮ್ಮನಕಾಯಿ’ ಹಾಕಿ ಮಾಡುವ ಮೀನಿನ ಅಡುಗೆಗಳು ಇನ್ನೂ ರುಚಿಕರ. ಮೀನಿನ ಕರಿ ಅಥವಾ ಚಟ್ನಿಗೆ ಅದ್ಭುತ ರುಚಿ ನೀಡಲು ಇದರ ಬಳಕೆ ಕಡ್ಡಾಯ. ಈ ಜುಮ್ಮನಕಾಯಿಗಳು ಮೀನಿನ ಅಡುಗೆಗೆ ಒಂದು ವಿಶೇಷ ಪರಿಮಳ ಮತ್ತು ರುಚಿಯನ್ನು ನೀಡುತ್ತವೆ. ಇದರೊಂದಿಗೆ ಅಮ್ಮ ಮಾಡಿದ ಅಕ್ಕಿಹಿಟ್ಟಿನ ಕೈರೊಟ್ಟಿ ಇದ್ದರೆ ಆಹ್ಹಾ... ಸ್ವರ್ಗಕ್ಕೆ ಮೂರೇ ಗೇಣು.</p>.<p>ಮತ್ತೆ ಈ ಜುಮ್ಮನಕಾಯಿ ಮೀನಿನಡುಗೆಯ ರುಚಿ ಹೆಚ್ಚಿಸಲು ಮಾತ್ರ ಎಂದು ತಿಳಿದಿರಾ? ಇಲ್ಲ... ಇದರಲ್ಲೂ ಆರೋಗ್ಯದ ಗುಟ್ಟು ಅಡಗಿದೆ. ಜ್ವರ ಬಂದು ಬಾಯಿ ಕೆಟ್ಟಾಗ ಈ ಕಾಯಿಗಳನ್ನು ಹಾಕಿ ಮಾಡಿದ ಮೀನಿನ ಸಾರು ಹಿತವಾದ ಅನುಭವ ನೀಡುತ್ತದೆ. ಅಷ್ಟೇ ಅಲ್ಲದೆ ಈ ಕಾಯಿಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಇದರಲ್ಲಿರುವ ನಾಲಿಗೆ ಜುಮ್ಮೆನ್ನಿಸುವ ಗುಣವು ಹಲ್ಲುನೋವು ನಿವಾರಿಸಲು ಸಹಾಯ ಮಾಡುತ್ತದೆ. ಅದಕ್ಕಾಗೇ ಇದಕ್ಕೆ ‘ಜುಮ್ಮನಕಾಯಿ’ ಎಂದು ಹೆಸರು ಬಂದಿರಲೂಬಹುದು. ಹೊಟ್ಟೆಯಲ್ಲಿರುವ ಜಂತುಹುಳುಗಳನ್ನು ನಾಶಪಡಿಸುವ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಈ ಕಾಯಿಗಿದೆ. ಜುಮ್ಮನಕಾಯಿ ಹಾಕಿದ ಸಾರು ಇಲ್ಲವೇ ಕಷಾಯ ಕುಡಿಯುವುದರಿಂದ ಗಂಟಲು ನೋವು ಮತ್ತು ಕಫ ಕಡಿಮೆಯಾಗುತ್ತದೆ. ಇದರ ಮುಳ್ಳನ್ನು ಗಂಟಲು ನೋವಿಗೆ ಹಾಗೂ ಬೀಜವನ್ನು ಚರ್ಮದ ಕಾಯಿಲೆಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಜುಮ್ಮನಕಾಯಿಗಳನ್ನು ಬಳಸಿ ರುಚಿಕರ ತಂಬುಳಿಯನ್ನೂ ಮಾಡಬಹುದು.</p>.<p>ಇನ್ನು ಮಲೆನಾಡಿನ ಹಲವು ಅಡುಗೆಗಳಲ್ಲಿ ಹಾಗೂ ಕರಾವಳಿಯ ಕೊಂಕಣಿ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ಅಡುಗೆಗಳಲ್ಲಿ ಜುಮ್ಮನಕಾಯಿಗೆ ವಿಶೇಷ ಸ್ಥಾನವಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಮಾಡುವ ವಿಶೇಷ ಖಾದ್ಯಗಳಲ್ಲೂ ಇದನ್ನು ಬಳಸುವ ಸಂಪ್ರದಾಯವಿದೆ. ಈ ಕಾಯಿಯು ಕರಾವಳಿ ಮತ್ತು ಮಲೆನಾಡಿನ ಸಾಂಪ್ರದಾಯಿಕ ಅಡುಗೆಗಳಿಗೆ ಬಳಸಲಾಗುವ ಮಸಾಲೆ ಸಾಮಗ್ರಿ. ಇದನ್ನು ಕರಾವಳಿಯಲ್ಲಿ ‘ತೆಪ್ಪಳ’ ಎಂತಲೂ ಮರಾಠಿಯಲ್ಲಿ ‘ತಿರಫಲ’ ಎಂದೂ ಕರೆಯುತ್ತಾರೆ. v</p>.<p><strong>ಜುಮ್ಮನಕಾಯಿ- ಮೀನಿನ ಗ್ರೇವಿ</strong></p><p>ಜುಮ್ಮನ ಕಾಯಿಯು ಮೀನಿನ ತೀಕ್ಷ್ಮವಾದ ವಾಸನೆಯನ್ನು ಹೋಗಲಾಡಿಸಿ, ಗ್ರೇವಿಗೆ ಅದ್ಭುತವಾದ ರುಚಿಯನ್ನು ನೀಡುತ್ತದೆ.</p><p><strong>ಏನೆಲ್ಲ ಬೇಕು ಈ ಗ್ರೇವಿಗೆ?</strong></p><p>ಒಂದು ಕೆ.ಜಿ ಮೀನು. ಮೂರು ಮಧ್ಯಮ ಗಾತ್ರದ ಈರುಳ್ಳಿ, ಮೂರು ಮಧ್ಯಮ ಗಾತ್ರದ ಬೆಳ್ಳುಳ್ಳಿ ಗಡ್ಡೆ, ಎರಡು ಇಂಚು ಹಸಿಶುಂಠಿ, ಎರಡು ನಿಂಬೆ ಗಾತ್ರದ ಹುಣಸೆಹಣ್ಣು, ಕಾಯಿತುರಿ ಎರಡು ಬಟ್ಟಲು, ಕೊತ್ತಂಬರಿ ಸೊಪ್ಪು ಒಂದು ಹಿಡಿಯಷ್ಟು, ಮೆಣಸಿನಕಾಯಿಪುಡಿ ಮೂರರಿಂದ ನಾಲ್ಕು ಚಮಚ, ಕಾಲು ಚಮಚ ಮೆಂತ್ಯ, ಚಕ್ಕೆ ಚಿಕ್ಕ ಐದು ತುಂಡುಗಳು, ಆರು ಲವಂಗ, ಒಂದು ಏಲಕ್ಕಿ, ಒಂದು ಟೀ ಚಮಚ ಕೊತ್ತಂಬರಿ ಕಾಳು, ಜುಮ್ಮನಕಾಯಿ ನಾಲ್ಕು (ಬೀಜ ಸ್ವಲ್ಪ ಕಹಿಯಾಗಿ ಇರುವುದರಿಂದ ಅದನ್ನು ಬಿಟ್ಟು ಮೇಲಿನ ಸಿಪ್ಪೆಯ ಭಾಗವನ್ನು ಮಾತ್ರ ಹಾಕಬೇಕು) ಕೊಬ್ಬರಿಎಣ್ಣೆ ನಾಲ್ಕು ಚಮಚ, ರುಚಿಗೆ ತಕ್ಕಷ್ಟು ಉಪ್ಪು.</p><p><strong>ಈ ರೀತಿ ಮಾಡಿ</strong></p><p>ಉಪ್ಪು, ಅರಸಿನ ಹಾಕಿ ಚೆನ್ನಾಗಿ ತೊಳೆದ ಮೀನಿಗೆ ಒಂದು ನಿಂಬೆ ಗಾತ್ರದ ಹುಣಸೆಹಣ್ಣಿನ ರಸ, ಒಂದು ಚಮಚ ಮೆಣಸಿನಕಾಯಿಪುಡಿ. ಸ್ವಲ್ಪ ಉಪ್ಪು ಹಾಕಿ 30 ನಿಮಿಷ ನೆನೆಯಲು ಬಿಡಬೇಕು. ಬಾಣಲೆಗೆ ಸ್ವಲ್ಪ ಕೊಬ್ಬರಿಎಣ್ಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ,ಲವಂಗ, ಏಲಕ್ಕಿ ಹಾಗೂ ಮೆಂತ್ಯ ಕಾಳನ್ನು ಹುರಿದುಕೊಳ್ಳಬೇಕು. ಅದು ತಣಿದಾದ ಬಳಿಕ ಮಿಕ್ಸಿಜಾರಿಗೆ ಹಾಕಿ ಜುಮ್ಮನಕಾಯಿ, ಕಾಯಿತುರಿ, ನೆನೆಸಿಟ್ಟ ಹುಣಸೆಹಣ್ಣು, ಕೊತ್ತಂಬರಿಸೊಪ್ಪು ಹಾಗೂ ಕೊತ್ತಂಬರಿ ಕಾಳು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.</p><p>ಬಳಿಕ ಅಗಲವಾದ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಹೆಚ್ಚಿದ ಈರುಳ್ಳಿ ಹಾಗೂ ರುಬ್ಬಿಕೊಂಡ ಮಿಶ್ರಣ, ಮೆಣಸಿನಕಾಯಿಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಎಣ್ಣೆಯಲ್ಲಿ ಬಾಡಿಸಬೇಕು. ಬಳಿಕ ಗ್ರೇವಿಯ ಹದಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಬೇಕು. ಕುದಿಯುವ ಗ್ರೇವಿಗೆ ನೆನೆಸಿಟ್ಟ ಮೀನುಗಳನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಮೀನಿನ ಗ್ರೇವಿಯ ಘಮ ಮನೆ ತುಂಬಾ ಪಸರಿಸುತ್ತದೆ.</p><p>ಮೀನಿನ ಗ್ರೇವಿಗಳು ಮಾಡಿದ ತಕ್ಷಣಕ್ಕಿಂತ ತಣ್ಣಗಾದ ನಂತರ ಸವಿದರೆ ರುಚಿ ಹೆಚ್ಚು. ಮೀನಿನ ಅಡುಗೆಗೆ ಸಹಜವಾಗಿ ಉಪ್ಪು, ಖಾರ, ಹುಳಿ ಸ್ವಲ್ಪ ಹೆಚ್ಚಿದ್ದರೆ ಇನ್ನೂ ರುಚಿಕರ. ಇದರ ಜೊತೆಗೆ ಜುಮ್ಮನಕಾಯಿಯು ಸ್ವಾದವನ್ನು ಇಮ್ಮಡಿಗೊಳಿಸುತ್ತದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-51-17733383</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>