<p>ಬೆಂಗಳೂರು: ‘ರಾಮಾಯಣವನ್ನು ಯಾರೂ ಮೊದಲ ಬಾರಿಗೆ ಓದುವುದಿಲ್ಲ. ಅದು ನಮ್ಮ ಸಂಸ್ಕಾರದ ಭಾಗವೇ ಆಗಿರುವುದರಿಂದ ಸದಾ ಮರು ಓದಿಗೆ ಒಳಪಡುತ್ತಿರುತ್ತೇವೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಘ್ ತಿಳಿಸಿದರು.</p>.<p>ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಜಿ. ರಾಘವನ್ ಅವರ ‘ಎಕೋಸ್ ಫ್ರಮ್ ರಾಮಾಯಣ’ ಜನಾರ್ಪಣೆ ಮತ್ತು ಪದ್ಮಭೂಷಣ ಪುರಸ್ಕೃತರಾದ ಶತಾವಧಾನಿ ಆರ್. ಗಣೇಶ್ ಅವರಿಗೆಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈ ಪುಸ್ತಕವು ಒಣ ಶೈಕ್ಷಣಿಕ ಪಠ್ಯವಲ್ಲ. ಬದಲಾಗಿ ಭಕ್ತಿಪೂರ್ವಕ ಮಂಥನ. ರಾಘವನ್ ಅವರ ಪುಸ್ತಕವು ಕಾಡು, ಪರಿಸರ ಮತ್ತು ಮಹಾಕಾವ್ಯದಲ್ಲಿ ಮಹಿಳೆಯರ ಪಾತ್ರವನ್ನು ಅನ್ವೇಷಿಸುವ ಮೂಲಕ ಧರ್ಮಬದ್ಧ ಜೀವನಕ್ಕೆ ಮಾರ್ಗದರ್ಶಿಯಾಗಿದೆ’ ಎಂದು ಹೇಳಿದರು.</p>.<p>ಒಡಿಶಾ ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ‘ನಿಜವಾದ ಪಾಂಡಿತ್ಯವನ್ನು ಹಗೆತನದಿಂದ ನೋಡುವ ಪರಿಸ್ಥಿತಿ ಈಗ ಇದೆ. ಗಣೇಶ್ ಅವರಂತಹ ವಿದ್ವಾಂಸರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಿಗಬೇಕು’ ಎಂದರು.</p>.<p>‘ಯಾವ ರಾಜನು ವಿದ್ವಾಂಸನ ಬಳಿ ಹೋಗುತ್ತಾನೋ ಆತ ಧನ್ಯ. ಯಾವ ವಿದ್ವಾಂಸನು ರಾಜನ ಬಳಿ ಹೋಗುತ್ತಾನೋ ಆತ ಶಾಪಗ್ರಸ್ತ. ಶತಾವಧಾನಿ ಗಣೇಶ್ ಅವರು ಬಿರುದು-ಬಾವಲಿಗಳ ಹಿಂದೆ ಹೋದವರಲ್ಲ. ಒಂದು ವೇಳೆ ನಮ್ಮ ಪ್ರಾಚೀನ ಪರಂಪರೆ ನಾಶವಾದರೂ, ಅದನ್ನು ತಮ್ಮ ನೆನಪಿನ ಶಕ್ತಿಯಿಂದಲೇ ಮರುಸೃಷ್ಟಿಸಬಲ್ಲ ಸಾಮರ್ಥ್ಯ ಅವರಲ್ಲಿದೆ’ ಎಂದು ಶ್ಲಾಘಿಸಿದರು.</p>.<p>ಭಾರತೀಯ ವಿದ್ಯಾಭವನದ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಹಲವು ಕಾರ್ಯಕ್ರಮ ಗಳಲ್ಲಿ ಇದು ಮೊದಲನೆಯದ್ದಾಗಿದೆ. ಮುಂಬರುವ ದಿನಗಳಲ್ಲಿ ಐದು ದಿನಗಳ ಸಾಹಿತ್ಯ ಉತ್ಸವ ಮತ್ತು‘ಸಂಗೀತವಾಣಿ’ ಎಂಬ ಜಾಗತಿಕ ಸಂಗೀತ ಸಮ್ಮೇಳನ ವನ್ನು ಆಯೋಜಿಸಲಾಗುವುದು ಎಂದು ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್ ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-4-2029296488</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ರಾಮಾಯಣವನ್ನು ಯಾರೂ ಮೊದಲ ಬಾರಿಗೆ ಓದುವುದಿಲ್ಲ. ಅದು ನಮ್ಮ ಸಂಸ್ಕಾರದ ಭಾಗವೇ ಆಗಿರುವುದರಿಂದ ಸದಾ ಮರು ಓದಿಗೆ ಒಳಪಡುತ್ತಿರುತ್ತೇವೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಘ್ ತಿಳಿಸಿದರು.</p>.<p>ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಜಿ. ರಾಘವನ್ ಅವರ ‘ಎಕೋಸ್ ಫ್ರಮ್ ರಾಮಾಯಣ’ ಜನಾರ್ಪಣೆ ಮತ್ತು ಪದ್ಮಭೂಷಣ ಪುರಸ್ಕೃತರಾದ ಶತಾವಧಾನಿ ಆರ್. ಗಣೇಶ್ ಅವರಿಗೆಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈ ಪುಸ್ತಕವು ಒಣ ಶೈಕ್ಷಣಿಕ ಪಠ್ಯವಲ್ಲ. ಬದಲಾಗಿ ಭಕ್ತಿಪೂರ್ವಕ ಮಂಥನ. ರಾಘವನ್ ಅವರ ಪುಸ್ತಕವು ಕಾಡು, ಪರಿಸರ ಮತ್ತು ಮಹಾಕಾವ್ಯದಲ್ಲಿ ಮಹಿಳೆಯರ ಪಾತ್ರವನ್ನು ಅನ್ವೇಷಿಸುವ ಮೂಲಕ ಧರ್ಮಬದ್ಧ ಜೀವನಕ್ಕೆ ಮಾರ್ಗದರ್ಶಿಯಾಗಿದೆ’ ಎಂದು ಹೇಳಿದರು.</p>.<p>ಒಡಿಶಾ ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ‘ನಿಜವಾದ ಪಾಂಡಿತ್ಯವನ್ನು ಹಗೆತನದಿಂದ ನೋಡುವ ಪರಿಸ್ಥಿತಿ ಈಗ ಇದೆ. ಗಣೇಶ್ ಅವರಂತಹ ವಿದ್ವಾಂಸರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಿಗಬೇಕು’ ಎಂದರು.</p>.<p>‘ಯಾವ ರಾಜನು ವಿದ್ವಾಂಸನ ಬಳಿ ಹೋಗುತ್ತಾನೋ ಆತ ಧನ್ಯ. ಯಾವ ವಿದ್ವಾಂಸನು ರಾಜನ ಬಳಿ ಹೋಗುತ್ತಾನೋ ಆತ ಶಾಪಗ್ರಸ್ತ. ಶತಾವಧಾನಿ ಗಣೇಶ್ ಅವರು ಬಿರುದು-ಬಾವಲಿಗಳ ಹಿಂದೆ ಹೋದವರಲ್ಲ. ಒಂದು ವೇಳೆ ನಮ್ಮ ಪ್ರಾಚೀನ ಪರಂಪರೆ ನಾಶವಾದರೂ, ಅದನ್ನು ತಮ್ಮ ನೆನಪಿನ ಶಕ್ತಿಯಿಂದಲೇ ಮರುಸೃಷ್ಟಿಸಬಲ್ಲ ಸಾಮರ್ಥ್ಯ ಅವರಲ್ಲಿದೆ’ ಎಂದು ಶ್ಲಾಘಿಸಿದರು.</p>.<p>ಭಾರತೀಯ ವಿದ್ಯಾಭವನದ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಹಲವು ಕಾರ್ಯಕ್ರಮ ಗಳಲ್ಲಿ ಇದು ಮೊದಲನೆಯದ್ದಾಗಿದೆ. ಮುಂಬರುವ ದಿನಗಳಲ್ಲಿ ಐದು ದಿನಗಳ ಸಾಹಿತ್ಯ ಉತ್ಸವ ಮತ್ತು‘ಸಂಗೀತವಾಣಿ’ ಎಂಬ ಜಾಗತಿಕ ಸಂಗೀತ ಸಮ್ಮೇಳನ ವನ್ನು ಆಯೋಜಿಸಲಾಗುವುದು ಎಂದು ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್ ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-4-2029296488</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>