<p>ಚಿತ್ರದುರ್ಗ: ‘ಸಾಹಿತಿ, ಕವಿಗಳಾದವರು ಒಂದೇ ಭಾಷೆಗೆ ಅಂಟಿಕೊಳ್ಳುವ ಬದಲು ಇತರೆ ಭಾಷೆಗಳ ಬರಹಗಳನ್ನು ಓದಬೇಕು. ಇಲ್ಲವಾದರೆ ಹೊಸ ಆಲೋಚನೆಗಳು ಯಾರಲ್ಲೂ ಹುಟ್ಟಲು ಸಾಧ್ಯವಿಲ್ಲ’ ಎಂದು ಸಂಶೋಧಕ ಬಿ. ರಾಜಶೇಖರಪ್ಪ ತಿಳಿಸಿದರು.</p>.<p>ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ಲೇಖಕಿ ಚಾಂದಿನಿ ಖಲೀದ್ ಅವರ ಒಂದು ಬೊಗಸೆ ಪ್ರೀತಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಕಾವ್ಯದ ಬಗ್ಗೆ ಜವಾಬ್ದಾರಿಯಿದ್ದಾಗ ಮಾತ್ರ ಸರಿಯಾದ ಬರವಣಿಗೆ ಕೊಡಬೇಕೆಂಬ ಕಾಳಜಿ ಕವಿಯಲ್ಲಿರುತ್ತದೆ’ ಎಂದರು.</p>.<p>‘ಆರೋಗ್ಯಕರ ಕೃತಿಯನ್ನು ಸಮಾಜಕ್ಕೆ ಕೊಡಬೇಕಾಗಿರುವುದರಿಂದ ಕವಿಗೆ ಜವಾಬ್ದಾರಿಯಿರಬೇಕು. ಕಾವ್ಯ ಇದ್ದಕ್ಕಿದ್ದಂತೆ ಹುಟ್ಟುವುದಿಲ್ಲ. ನಿಲುವು, ಯೋಚನಾ ಲಹರಿ ಬಹುಮುಖ್ಯವಾಗುತ್ತದೆ’ ಎಂದು ತಿಳಿಸಿದರು.</p>.<p>‘ಪ್ರೀತಿ ಎಂದರೆ ಕೇವಲ ಗಂಡು–ಹೆಣ್ಣಿನ ನಡುವಿನ ಪ್ರೀತಿಯಲ್ಲ. ಅಪ್ಪ ಅಮ್ಮನ ಪ್ರೀತಿ, ಸಹೋದರರ ಪ್ರೀತಿ, ಸ್ನೇಹಿತರ ನಡುವಿನ ಪ್ರೀತಿಗೂ ಪ್ರಾಮುಖ್ಯತೆಯಿದೆ. ಆ ಅರ್ಥದಲ್ಲಿ ಚಾಂದಿನಿ ಖಲೀದ್ ಬೊಗಸೆಯಷ್ಟು ಪ್ರೀತಿ ಎಂಬ ಕವನ ಸಂಕಲನ ಹೊರತಂದಿದ್ದಾರೆ’ ಎಂದು ವಕೀಲ ಬಿ.ಕೆ. ರಹಮತ್ ವುಲ್ಲಾ ಹೇಳಿದರು.</p>.<p>‘ಸಾಹಿತಿಗೆ ತನ್ನದೆ ಆದ ಜವಾಬ್ದಾರಿ, ಕನಸುಗಳಿರುತ್ತವೆ. ಕೃತಿ ಮನಸ್ಸನ್ನು ಆಕರ್ಷಿಸುವಂತಿರಬೇಕು. ಕಾವ್ಯ, ಕೃತಿ, ಕಾದಂಬರಿಯನ್ನು ಬರೆಯುವುದೆಂದರೆ ಜ್ಞಾನದ ಅಡುಗೆಯನ್ನು ಓದುಗರಿಗೆ ಬಡಿಸಿದಂತೆ. ಇದರ ಮೂಲಕ ಸಮಾಜಕ್ಕೆ ಬೆಳಕಿನ ಆಕರವಾಗಬೇಕು’ ಎಂದು ಆರ್ಥಿಕ ಚಿಂತಕ ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.</p>.<p>‘ಸಂವೇದನೆ ಕಳೆದುಕೊಂಡ ಬದುಕು ಅಮಾನವೀಯವಾಗಿರುತ್ತದೆ. ಕಾವ್ಯವನ್ನು ಆಸ್ವಾದಿಸುವಾಗ ಅಕ್ಕಮಹಾದೇವಿಯ ವಚನಗಳ ಸಾಲಿನಂತಿರಬೇಕು. ಸಾಂಪ್ರದಾಯಿಕ ವ್ಯವಸ್ಥೆ ಮೀರಿ ಬರೆಯುವ ಧೈರ್ಯ ಕವಿ, ಸಾಹಿತಿಗಿರಬೇಕು’ ಎಂದರು.</p>.<p>ಉಪನ್ಯಾಸಕ ಫೈಜ್ನಟ್ರಾಜ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮ್, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-44-2093209151</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ‘ಸಾಹಿತಿ, ಕವಿಗಳಾದವರು ಒಂದೇ ಭಾಷೆಗೆ ಅಂಟಿಕೊಳ್ಳುವ ಬದಲು ಇತರೆ ಭಾಷೆಗಳ ಬರಹಗಳನ್ನು ಓದಬೇಕು. ಇಲ್ಲವಾದರೆ ಹೊಸ ಆಲೋಚನೆಗಳು ಯಾರಲ್ಲೂ ಹುಟ್ಟಲು ಸಾಧ್ಯವಿಲ್ಲ’ ಎಂದು ಸಂಶೋಧಕ ಬಿ. ರಾಜಶೇಖರಪ್ಪ ತಿಳಿಸಿದರು.</p>.<p>ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ಲೇಖಕಿ ಚಾಂದಿನಿ ಖಲೀದ್ ಅವರ ಒಂದು ಬೊಗಸೆ ಪ್ರೀತಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಕಾವ್ಯದ ಬಗ್ಗೆ ಜವಾಬ್ದಾರಿಯಿದ್ದಾಗ ಮಾತ್ರ ಸರಿಯಾದ ಬರವಣಿಗೆ ಕೊಡಬೇಕೆಂಬ ಕಾಳಜಿ ಕವಿಯಲ್ಲಿರುತ್ತದೆ’ ಎಂದರು.</p>.<p>‘ಆರೋಗ್ಯಕರ ಕೃತಿಯನ್ನು ಸಮಾಜಕ್ಕೆ ಕೊಡಬೇಕಾಗಿರುವುದರಿಂದ ಕವಿಗೆ ಜವಾಬ್ದಾರಿಯಿರಬೇಕು. ಕಾವ್ಯ ಇದ್ದಕ್ಕಿದ್ದಂತೆ ಹುಟ್ಟುವುದಿಲ್ಲ. ನಿಲುವು, ಯೋಚನಾ ಲಹರಿ ಬಹುಮುಖ್ಯವಾಗುತ್ತದೆ’ ಎಂದು ತಿಳಿಸಿದರು.</p>.<p>‘ಪ್ರೀತಿ ಎಂದರೆ ಕೇವಲ ಗಂಡು–ಹೆಣ್ಣಿನ ನಡುವಿನ ಪ್ರೀತಿಯಲ್ಲ. ಅಪ್ಪ ಅಮ್ಮನ ಪ್ರೀತಿ, ಸಹೋದರರ ಪ್ರೀತಿ, ಸ್ನೇಹಿತರ ನಡುವಿನ ಪ್ರೀತಿಗೂ ಪ್ರಾಮುಖ್ಯತೆಯಿದೆ. ಆ ಅರ್ಥದಲ್ಲಿ ಚಾಂದಿನಿ ಖಲೀದ್ ಬೊಗಸೆಯಷ್ಟು ಪ್ರೀತಿ ಎಂಬ ಕವನ ಸಂಕಲನ ಹೊರತಂದಿದ್ದಾರೆ’ ಎಂದು ವಕೀಲ ಬಿ.ಕೆ. ರಹಮತ್ ವುಲ್ಲಾ ಹೇಳಿದರು.</p>.<p>‘ಸಾಹಿತಿಗೆ ತನ್ನದೆ ಆದ ಜವಾಬ್ದಾರಿ, ಕನಸುಗಳಿರುತ್ತವೆ. ಕೃತಿ ಮನಸ್ಸನ್ನು ಆಕರ್ಷಿಸುವಂತಿರಬೇಕು. ಕಾವ್ಯ, ಕೃತಿ, ಕಾದಂಬರಿಯನ್ನು ಬರೆಯುವುದೆಂದರೆ ಜ್ಞಾನದ ಅಡುಗೆಯನ್ನು ಓದುಗರಿಗೆ ಬಡಿಸಿದಂತೆ. ಇದರ ಮೂಲಕ ಸಮಾಜಕ್ಕೆ ಬೆಳಕಿನ ಆಕರವಾಗಬೇಕು’ ಎಂದು ಆರ್ಥಿಕ ಚಿಂತಕ ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.</p>.<p>‘ಸಂವೇದನೆ ಕಳೆದುಕೊಂಡ ಬದುಕು ಅಮಾನವೀಯವಾಗಿರುತ್ತದೆ. ಕಾವ್ಯವನ್ನು ಆಸ್ವಾದಿಸುವಾಗ ಅಕ್ಕಮಹಾದೇವಿಯ ವಚನಗಳ ಸಾಲಿನಂತಿರಬೇಕು. ಸಾಂಪ್ರದಾಯಿಕ ವ್ಯವಸ್ಥೆ ಮೀರಿ ಬರೆಯುವ ಧೈರ್ಯ ಕವಿ, ಸಾಹಿತಿಗಿರಬೇಕು’ ಎಂದರು.</p>.<p>ಉಪನ್ಯಾಸಕ ಫೈಜ್ನಟ್ರಾಜ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮ್, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-44-2093209151</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>