<p>ಮುಂಡಗೋಡ: ಕರಾವಳಿಗರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಯಕ್ಷಗಾನವನ್ನು ಅರೆಮಲೆನಾಡಿನಲ್ಲಿ ಪರಿಚಯಿಸುವ ಮೂಲಕ ಕಳೆದೆರಡು ವರ್ಷಗಳಿಂದ ‘ಯಕ್ಷ ವೈಭವ’ವನ್ನು ಉಣಬಡಿಸುವ, ಸಮಾನ ಮನಸ್ಕರ ಪ್ರಯತ್ನಕ್ಕೆ ಪ್ರೇಕ್ಷಕವರ್ಗ ಮನಸಾರೆ ಚಪ್ಪಾಳೆ ತಟ್ಟುತ್ತಿದೆ.</p>.<p>ಕುಂದಾಪುರ, ಕಾಪು, ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಿಂದ ಹೋಟೆಲ್ ಉದ್ಯಮ, ಸ್ವಂತ ಉದ್ಯೋಗ ಸೇರಿದಂತೆ ಸರ್ಕಾರಿ ನೌಕರಿಗಾಗಿ, ಈ ತಾಲ್ಲೂಕಿನಲ್ಲಿ ನೆಲೆ ಕಂಡುಕೊಂಡಿರುವ ಅಲ್ಲಿನ ಜನರು, ತಮ್ಮ ಭಾಗದ ಯಕ್ಷಗಾನವನ್ನು ಇಲ್ಲಿಯೂ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಕುಂದಯಕ್ಷ ಸಾಂಸ್ಕೃತಿಕ ವೇದಿಕೆ ಮೂಲಕ ಕರಾವಳಿ ಕಲೆಯನ್ನು ಅರೆಮಲೆನಾಡಿನ ಜನರಿಗೆ ಪರಿಚಯಿಸಿ, ಕಲೆ ಬೆಳೆಸುವ ಕೆಲಸ ಮಾಡುತ್ತಿದ್ದಾರೆ.</p>.<p>ಕಳೆದ ವರ್ಷ ‘ಯಕ್ಷ ವೈಭವ’ದ ಮೂಲಕ ಮೊದಲ ಬಾರಿಗೆ ‘ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಕಥಾಭಾಗ ಪ್ರದರ್ಶನಗೊಂಡಿತ್ತು. ಎರಡನೇ ವರ್ಷ ‘ಕವಿರತ್ನ ಕಾಳಿದಾಸ’, ‘ಮಾರುತಿ ಪ್ರತಾಪ’ ಎಂಬ ಎರಡು ಪೌರಾಣಿಕ ಕಥಾಭಾಗವನ್ನು ಈಚೆಗೆ ಪ್ರಸ್ತುತಪಡಿಸಿದರು.</p>.<p>‘ಯಕ್ಷಗಾನದ ಸೊಗಡನ್ನು ವೃತ್ತಿನೆಲೆಯಾದ ಈ ತಾಲ್ಲೂಕಿನಲ್ಲಿ ಪ್ರದರ್ಶನ ಕಾಣುವಲ್ಲಿ ಸಫಲವಾಗಿರುವ ಪ್ರಯತ್ನ ಶ್ಲಾಘನೀಯ’ ಎಂದು ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನಸಾಲೆ ಹೇಳಿದರು.</p>.<p>‘ಯಕ್ಷಗಾನವು ನಮ್ಮ ಸಂಸ್ಕೃತಿಯ ಸೊಬಗನ್ನು ತೋರಿಸುವ ವಿಶೇಷ ಕಾರ್ಯಕ್ರಮ. ಕಲೆಯ ಮೂಲಕ ಜನರನ್ನು ಒಗ್ಗೂಡಿಸುವಲ್ಲಿ ಸಾಧ್ಯ’ ಎಂದು ಶಿಕ್ಷಕಿ ಮಮತಾ ಆರ್. ಹೇಳಿದರು.</p>.<p>ಅರುಣಕುಮಾರ ಶೆಟ್ಟಿ, ನಾರಾಯಣ ಉಪ್ಪುಂದ, ಹರೀಶ ಪೂಜಾರಿ, ನರೇಶ್ ಶೆಟ್ಟಿ, ನಾಗರತ್ನ ಶೆಟ್ಟಿ, ರಾಘವೇಂದ್ರ ಮೊಗವೀರ, ವಿಜಯ ಪೂಜಾರಿ, ರಮೇಶ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರಿಯಾಂಕಾ ಶೆಟ್ಟಿ, ಪ್ರಜ್ಞಾ ಶೆಟ್ಟಿ, ಸುರೇಶ ಪೂಜಾರಿ, ಅನು ಪೂಜಾರಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-20-411500147</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಡಗೋಡ: ಕರಾವಳಿಗರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಯಕ್ಷಗಾನವನ್ನು ಅರೆಮಲೆನಾಡಿನಲ್ಲಿ ಪರಿಚಯಿಸುವ ಮೂಲಕ ಕಳೆದೆರಡು ವರ್ಷಗಳಿಂದ ‘ಯಕ್ಷ ವೈಭವ’ವನ್ನು ಉಣಬಡಿಸುವ, ಸಮಾನ ಮನಸ್ಕರ ಪ್ರಯತ್ನಕ್ಕೆ ಪ್ರೇಕ್ಷಕವರ್ಗ ಮನಸಾರೆ ಚಪ್ಪಾಳೆ ತಟ್ಟುತ್ತಿದೆ.</p>.<p>ಕುಂದಾಪುರ, ಕಾಪು, ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಿಂದ ಹೋಟೆಲ್ ಉದ್ಯಮ, ಸ್ವಂತ ಉದ್ಯೋಗ ಸೇರಿದಂತೆ ಸರ್ಕಾರಿ ನೌಕರಿಗಾಗಿ, ಈ ತಾಲ್ಲೂಕಿನಲ್ಲಿ ನೆಲೆ ಕಂಡುಕೊಂಡಿರುವ ಅಲ್ಲಿನ ಜನರು, ತಮ್ಮ ಭಾಗದ ಯಕ್ಷಗಾನವನ್ನು ಇಲ್ಲಿಯೂ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಕುಂದಯಕ್ಷ ಸಾಂಸ್ಕೃತಿಕ ವೇದಿಕೆ ಮೂಲಕ ಕರಾವಳಿ ಕಲೆಯನ್ನು ಅರೆಮಲೆನಾಡಿನ ಜನರಿಗೆ ಪರಿಚಯಿಸಿ, ಕಲೆ ಬೆಳೆಸುವ ಕೆಲಸ ಮಾಡುತ್ತಿದ್ದಾರೆ.</p>.<p>ಕಳೆದ ವರ್ಷ ‘ಯಕ್ಷ ವೈಭವ’ದ ಮೂಲಕ ಮೊದಲ ಬಾರಿಗೆ ‘ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಕಥಾಭಾಗ ಪ್ರದರ್ಶನಗೊಂಡಿತ್ತು. ಎರಡನೇ ವರ್ಷ ‘ಕವಿರತ್ನ ಕಾಳಿದಾಸ’, ‘ಮಾರುತಿ ಪ್ರತಾಪ’ ಎಂಬ ಎರಡು ಪೌರಾಣಿಕ ಕಥಾಭಾಗವನ್ನು ಈಚೆಗೆ ಪ್ರಸ್ತುತಪಡಿಸಿದರು.</p>.<p>‘ಯಕ್ಷಗಾನದ ಸೊಗಡನ್ನು ವೃತ್ತಿನೆಲೆಯಾದ ಈ ತಾಲ್ಲೂಕಿನಲ್ಲಿ ಪ್ರದರ್ಶನ ಕಾಣುವಲ್ಲಿ ಸಫಲವಾಗಿರುವ ಪ್ರಯತ್ನ ಶ್ಲಾಘನೀಯ’ ಎಂದು ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನಸಾಲೆ ಹೇಳಿದರು.</p>.<p>‘ಯಕ್ಷಗಾನವು ನಮ್ಮ ಸಂಸ್ಕೃತಿಯ ಸೊಬಗನ್ನು ತೋರಿಸುವ ವಿಶೇಷ ಕಾರ್ಯಕ್ರಮ. ಕಲೆಯ ಮೂಲಕ ಜನರನ್ನು ಒಗ್ಗೂಡಿಸುವಲ್ಲಿ ಸಾಧ್ಯ’ ಎಂದು ಶಿಕ್ಷಕಿ ಮಮತಾ ಆರ್. ಹೇಳಿದರು.</p>.<p>ಅರುಣಕುಮಾರ ಶೆಟ್ಟಿ, ನಾರಾಯಣ ಉಪ್ಪುಂದ, ಹರೀಶ ಪೂಜಾರಿ, ನರೇಶ್ ಶೆಟ್ಟಿ, ನಾಗರತ್ನ ಶೆಟ್ಟಿ, ರಾಘವೇಂದ್ರ ಮೊಗವೀರ, ವಿಜಯ ಪೂಜಾರಿ, ರಮೇಶ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರಿಯಾಂಕಾ ಶೆಟ್ಟಿ, ಪ್ರಜ್ಞಾ ಶೆಟ್ಟಿ, ಸುರೇಶ ಪೂಜಾರಿ, ಅನು ಪೂಜಾರಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-20-411500147</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>