<p>ಮೈಸೂರು: ‘ಪೌರಾಣಿಕವು ರಂಗಭೂಮಿಯ ಬೇರಾಗಿದ್ದು, ಅದನ್ನು ಉಳಿಸಿಕೊಳ್ಳಬೇಕು. ರಂಗೋತ್ಸವಗಳಲ್ಲಿ ಒಂದಾದರೂ ನಾಟಕ ಪ್ರದರ್ಶನ ಆಗಬೇಕು’ ಎಂದು ರಂಗ ಸಂಗೀತ ನಿರ್ದೇಶಕ ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಒತ್ತಾಯಿಸಿದರು.</p>.<p>ನಗರದ ಕಿರು ರಂಗಮಂದಿರದಲ್ಲಿ ಮಂಗಳವಾರ ಮುಕ್ತಾಯಗೊಂಡ ‘ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ’ವು ಆಯೋಜಿಸಿದ್ದ ಮೂರು ದಿನಗಳ ಪೌರಾಣಿಕ ರಂಗ ಸಂಭ್ರಮ’ದ ಸಮಾರೋಪದಲ್ಲಿ‘ರಂಗ ಗೌರವ’ ಸ್ವೀಕರಿಸಿ ಮಾತನಾಡಿದರು.</p>.<p>‘ರಂಗಾಯಣದಲ್ಲಿ ಮೂರು ದಶಕ ಕೆಲಸ ಮಾಡಿರುವೆ. ಮೊದಲು ಪೌರಾಣಿಕ ಮಾದರಿ ರಂಗ ಪ್ರಯೋಗಗಳು ನಡೆಯುತ್ತಿದ್ದವು. ಈಗ ಅಲ್ಲಿ ಇಲ್ಲವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ವೃತ್ತಿ ರಂಗಭೂಮಿಯ ವಿಕಾಸವು ಆಗಿದ್ದೇ ಪೌರಾಣಿಕದಿಂದ. ಈ ಪ್ರಕಾರವನ್ನು ದಯಮಾಡಿ ಉಳಿಸಿದರೆ ರಂಗಭೂಮಿಯ ಕಲಾ ಇತಿಹಾಸ, ಸಂಸ್ಕೃತಿ ಹಾಗೂ ಸಂಗೀತವನ್ನು ಮುಂದಿನ ಪೀಳಿಗೆಗೆ ನೀಡಿದಂತಾಗುತ್ತದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೆಚ್ಚು ಆಸಕ್ತಿವಹಿಸಬೇಕು’ ಎಂದರು.</p>.<p>‘ಮೊದಲೆಲ್ಲ 7 ಗಂಟೆ ನಾಟಕ ಪ್ರಯೋಗಗಳು ಆಗುತ್ತಿದ್ದವು. ಕಾಳಿದಾಸನ ‘ವಿಕ್ರಮೋರ್ವಶೀಯಂ’ ನಾಟಕವನ್ನು 2 ಗಂಟೆಗೆ ಸೀಮಿತಗೊಳಿಸಿ ಪ್ರಯೋಗ ಮಾಡಿದ್ದರು. ಸಮಯಾಭಾವ ಇರುವುದರಿಂದ ಇಂಥ ಪ್ರಯೋಗಗಳು ಪೌರಾಣಿಕ ಪರಂಪರೆಯನ್ನು ಉಳಿಸಲಿವೆ’ ಎಂದು ಅಭಿಪ್ರಾಯಪಟ್ಟರು.</p>.<p>ಸಮಾರೋಪ ಭಾಷಣ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ‘ರಂಗಾಯಣದಲ್ಲಿ ಪೌರಾಣಿಕ ರಂಗಪ್ರಯೋಗಗಳನ್ನು ನಡೆಸಲು ಶೀಘ್ರ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>₹ 20 ಸಾವಿರ ನೆರವು: ‘ರಂಗ ಸಂಗೀತ ನಿರ್ದೇಶಕ ದಿವಂಗತ ಶ್ರೀನಿವಾಸ್ ಭಟ್ (ಚೀನಿ) ಅವರ ಪತ್ನಿ ಚಿಕಿತ್ಸೆಗೆ ರಂಗ ತಂಡದಿಂದ ₹ 20 ಸಾವಿರ ನೀಡಲಾಗುವುದು. ರಂಗ ಸಂಗೀತದ ಮೇರು ಪ್ರತಿಭೆಯ ಕುಟುಂಬಕ್ಕೆ ಸಹಾಯಹಸ್ತವನ್ನು ಚಾಚಬೇಕು. ನೆರವನ್ನು ನೀಡಬೇಕು’ ಎಂದು ‘ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ’ದ ಬಿ.ಎಂ.ರಾಮಚಂದ್ರ ಕೋರಿದರು.</p>.<p>ರಂಗಕರ್ಮಿ ಮೈಮ್ ರಮೇಶ್ ಅವರಿಗೂ ‘ರಂಗ ಗೌರವ’ ನೀಡಲಾಯಿತು. ಎಚ್.ಬಿ.ಯಶೋಧಾ, ದಿನೇಶ್ ಚಮ್ಮಾಳಿಗೆ, ವಿಕಾಸ್ ಚಂದ್ರ ಪಾಲ್ಗೊಂಡಿದ್ದರು. ನಂತರ ಟಿ.ನಾಗರಾಜ ಹಿರೇಕುಂಬಳಗುಂಟೆ ನಿರ್ದೇಶನದ ‘ರಕ್ತರಾತ್ರಿ’ ನಾಟಕ ಪ್ರದರ್ಶನಗೊಂಡಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-39-1083824009</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಪೌರಾಣಿಕವು ರಂಗಭೂಮಿಯ ಬೇರಾಗಿದ್ದು, ಅದನ್ನು ಉಳಿಸಿಕೊಳ್ಳಬೇಕು. ರಂಗೋತ್ಸವಗಳಲ್ಲಿ ಒಂದಾದರೂ ನಾಟಕ ಪ್ರದರ್ಶನ ಆಗಬೇಕು’ ಎಂದು ರಂಗ ಸಂಗೀತ ನಿರ್ದೇಶಕ ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಒತ್ತಾಯಿಸಿದರು.</p>.<p>ನಗರದ ಕಿರು ರಂಗಮಂದಿರದಲ್ಲಿ ಮಂಗಳವಾರ ಮುಕ್ತಾಯಗೊಂಡ ‘ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ’ವು ಆಯೋಜಿಸಿದ್ದ ಮೂರು ದಿನಗಳ ಪೌರಾಣಿಕ ರಂಗ ಸಂಭ್ರಮ’ದ ಸಮಾರೋಪದಲ್ಲಿ‘ರಂಗ ಗೌರವ’ ಸ್ವೀಕರಿಸಿ ಮಾತನಾಡಿದರು.</p>.<p>‘ರಂಗಾಯಣದಲ್ಲಿ ಮೂರು ದಶಕ ಕೆಲಸ ಮಾಡಿರುವೆ. ಮೊದಲು ಪೌರಾಣಿಕ ಮಾದರಿ ರಂಗ ಪ್ರಯೋಗಗಳು ನಡೆಯುತ್ತಿದ್ದವು. ಈಗ ಅಲ್ಲಿ ಇಲ್ಲವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ವೃತ್ತಿ ರಂಗಭೂಮಿಯ ವಿಕಾಸವು ಆಗಿದ್ದೇ ಪೌರಾಣಿಕದಿಂದ. ಈ ಪ್ರಕಾರವನ್ನು ದಯಮಾಡಿ ಉಳಿಸಿದರೆ ರಂಗಭೂಮಿಯ ಕಲಾ ಇತಿಹಾಸ, ಸಂಸ್ಕೃತಿ ಹಾಗೂ ಸಂಗೀತವನ್ನು ಮುಂದಿನ ಪೀಳಿಗೆಗೆ ನೀಡಿದಂತಾಗುತ್ತದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೆಚ್ಚು ಆಸಕ್ತಿವಹಿಸಬೇಕು’ ಎಂದರು.</p>.<p>‘ಮೊದಲೆಲ್ಲ 7 ಗಂಟೆ ನಾಟಕ ಪ್ರಯೋಗಗಳು ಆಗುತ್ತಿದ್ದವು. ಕಾಳಿದಾಸನ ‘ವಿಕ್ರಮೋರ್ವಶೀಯಂ’ ನಾಟಕವನ್ನು 2 ಗಂಟೆಗೆ ಸೀಮಿತಗೊಳಿಸಿ ಪ್ರಯೋಗ ಮಾಡಿದ್ದರು. ಸಮಯಾಭಾವ ಇರುವುದರಿಂದ ಇಂಥ ಪ್ರಯೋಗಗಳು ಪೌರಾಣಿಕ ಪರಂಪರೆಯನ್ನು ಉಳಿಸಲಿವೆ’ ಎಂದು ಅಭಿಪ್ರಾಯಪಟ್ಟರು.</p>.<p>ಸಮಾರೋಪ ಭಾಷಣ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ‘ರಂಗಾಯಣದಲ್ಲಿ ಪೌರಾಣಿಕ ರಂಗಪ್ರಯೋಗಗಳನ್ನು ನಡೆಸಲು ಶೀಘ್ರ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>₹ 20 ಸಾವಿರ ನೆರವು: ‘ರಂಗ ಸಂಗೀತ ನಿರ್ದೇಶಕ ದಿವಂಗತ ಶ್ರೀನಿವಾಸ್ ಭಟ್ (ಚೀನಿ) ಅವರ ಪತ್ನಿ ಚಿಕಿತ್ಸೆಗೆ ರಂಗ ತಂಡದಿಂದ ₹ 20 ಸಾವಿರ ನೀಡಲಾಗುವುದು. ರಂಗ ಸಂಗೀತದ ಮೇರು ಪ್ರತಿಭೆಯ ಕುಟುಂಬಕ್ಕೆ ಸಹಾಯಹಸ್ತವನ್ನು ಚಾಚಬೇಕು. ನೆರವನ್ನು ನೀಡಬೇಕು’ ಎಂದು ‘ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ’ದ ಬಿ.ಎಂ.ರಾಮಚಂದ್ರ ಕೋರಿದರು.</p>.<p>ರಂಗಕರ್ಮಿ ಮೈಮ್ ರಮೇಶ್ ಅವರಿಗೂ ‘ರಂಗ ಗೌರವ’ ನೀಡಲಾಯಿತು. ಎಚ್.ಬಿ.ಯಶೋಧಾ, ದಿನೇಶ್ ಚಮ್ಮಾಳಿಗೆ, ವಿಕಾಸ್ ಚಂದ್ರ ಪಾಲ್ಗೊಂಡಿದ್ದರು. ನಂತರ ಟಿ.ನಾಗರಾಜ ಹಿರೇಕುಂಬಳಗುಂಟೆ ನಿರ್ದೇಶನದ ‘ರಕ್ತರಾತ್ರಿ’ ನಾಟಕ ಪ್ರದರ್ಶನಗೊಂಡಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-39-1083824009</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>