<p>ಸಂತೇಬಾಚಹಳ್ಳಿ:ಹಳ್ಳಿಗಳಲ್ಲಿ ಗ್ರಾಮೀಣ ಪ್ರತಿಭೆ ರಂಗ ಕುಣಿತ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಬೆಳೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯ ಪ್ರಕಾಶ್ ಗೌಡ ಹೇಳಿದರು.</p>.<p>ಸಮೀಪದ ಸಾರಂಗಿಯಲ್ಲಿ ಗ್ರಾಮದೇವತೆ ಕೋಡಿಯಮ್ಮ ಹಬ್ಬದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ರಂಗದ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.</p>.<p>‘ಹಳ್ಳಿಗಳಲ್ಲಿ ವೃದ್ಧರು ಹಾಗೂ ವಿಚಾರವಂತರು ಇರುವ ಹಳ್ಳಿಗಳಲ್ಲಿ ಇನ್ನೂ ರಂಗದ ಕಲೆ ಜೀವಂತವಾಗಿದೆ. ಪ್ರತಿ ಹಳ್ಳಿಗಳಲ್ಲಿ ಹಾಗೂ ಪಟ್ಟಣದಲ್ಲಿ ಸಾಂಸ್ಕೃತಿಕ ಕಲೆ ರಂಗ ಕುಣಿತ, ಕೋಲಾಟ, ಸೊಬಾನೆ ಪದಗಳನ್ನು ಕಲಿಯಬೇಕು.ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದರು.</p>.<p>ರಂಗ ಕುಣಿತದ ತೀರ್ಪುಗಾರರಾಗಿ ತೆಂಕನಹಳ್ಳಿ ಉಮೇಶ್, ನಾಗಮಂಗಲ ಮಂಜೇಗೌಡ, ಕತ್ತರಘಟ್ಟ ವಾಸು, ಶಿಕ್ಷಕ ರಂಗಸ್ವಾಮಿ, ಕಾರ್ಯ ನಿರ್ವಹಿಸಿದರು. ಪ್ರಥಮ ಬಹುಮಾನವನ್ನು ಅಣ್ಣೇಚಾಕನಹಳ್ಳಿ, ದ್ವಿತೀಯ ಬಹುಮಾನ ದಬ್ಬೆಘಟ್ಟ , ತೃತೀಯ ಬಹುಮಾನ ಕೊರೆನಹಳ್ಳಿ ತಂಡಗಳು ಬಹುಮಾನ ಪಡೆದವು. ಗ್ರಾಮಸ್ಥರು, ಗಣ್ಯರು, ಮುಖಂಡರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-40-1382443446</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂತೇಬಾಚಹಳ್ಳಿ:ಹಳ್ಳಿಗಳಲ್ಲಿ ಗ್ರಾಮೀಣ ಪ್ರತಿಭೆ ರಂಗ ಕುಣಿತ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಬೆಳೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯ ಪ್ರಕಾಶ್ ಗೌಡ ಹೇಳಿದರು.</p>.<p>ಸಮೀಪದ ಸಾರಂಗಿಯಲ್ಲಿ ಗ್ರಾಮದೇವತೆ ಕೋಡಿಯಮ್ಮ ಹಬ್ಬದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ರಂಗದ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.</p>.<p>‘ಹಳ್ಳಿಗಳಲ್ಲಿ ವೃದ್ಧರು ಹಾಗೂ ವಿಚಾರವಂತರು ಇರುವ ಹಳ್ಳಿಗಳಲ್ಲಿ ಇನ್ನೂ ರಂಗದ ಕಲೆ ಜೀವಂತವಾಗಿದೆ. ಪ್ರತಿ ಹಳ್ಳಿಗಳಲ್ಲಿ ಹಾಗೂ ಪಟ್ಟಣದಲ್ಲಿ ಸಾಂಸ್ಕೃತಿಕ ಕಲೆ ರಂಗ ಕುಣಿತ, ಕೋಲಾಟ, ಸೊಬಾನೆ ಪದಗಳನ್ನು ಕಲಿಯಬೇಕು.ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದರು.</p>.<p>ರಂಗ ಕುಣಿತದ ತೀರ್ಪುಗಾರರಾಗಿ ತೆಂಕನಹಳ್ಳಿ ಉಮೇಶ್, ನಾಗಮಂಗಲ ಮಂಜೇಗೌಡ, ಕತ್ತರಘಟ್ಟ ವಾಸು, ಶಿಕ್ಷಕ ರಂಗಸ್ವಾಮಿ, ಕಾರ್ಯ ನಿರ್ವಹಿಸಿದರು. ಪ್ರಥಮ ಬಹುಮಾನವನ್ನು ಅಣ್ಣೇಚಾಕನಹಳ್ಳಿ, ದ್ವಿತೀಯ ಬಹುಮಾನ ದಬ್ಬೆಘಟ್ಟ , ತೃತೀಯ ಬಹುಮಾನ ಕೊರೆನಹಳ್ಳಿ ತಂಡಗಳು ಬಹುಮಾನ ಪಡೆದವು. ಗ್ರಾಮಸ್ಥರು, ಗಣ್ಯರು, ಮುಖಂಡರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-40-1382443446</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>