<p>ಸಾಗರ: ‘ಜಾನಪದ ಮಟ್ಟುಗಳನ್ನು (ಮಜಲು) ಬಳಸಿದ ಬಹುತೇಕ ಚಲನಚಿತ್ರ ಗೀತೆಗಳು ಯಶಸ್ಸು ಕಂಡಿವೆ’ ಎಂದು ಕಾಂತಾರ ಚಲನಚಿತ್ರದ ಹಿನ್ನೆಲೆ ಗಾಯಕ ವೆಂಕಟೇಶ್ ಡಿ.ಸಿ. ಹೇಳಿದರು.</p>.<p>ಇಲ್ಲಿನ ವಿನೋಬ ನಗರದಲ್ಲಿ ಕರ್ನಾಟಕ ಜಾನಪದ ಪರಿಷತ್ ಭಾನುವಾರ ಏರ್ಪಡಿಸಿದ್ದ ಸಂಗೀತ ಸಂಭ್ರಮ–ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.</p>.<p>‘ಜಾನಪದ ಗೀತೆಗಳಿಗೆ ವಿಶಿಷ್ಟ ಲಯವಿದೆ. ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತ ಹೀಗೆ ಹಲವು ಪ್ರಕಾರಗಳಿಂದ ಚಲನಚಿತ್ರ ಗೀತೆಗಳು ಪ್ರಭಾವಿತಗೊಂಡಿವೆ. ಸದಭಿರುಚಿಯ ಸಾಹಿತ್ಯವನ್ನು ಒಳಗೊಂಡ ಗೀತೆಗಳನ್ನು ಹದವಾದ ಸಂಗೀತದೊಂದಿಗೆ ಕೇಳುಗರ ಎದುರು ಪ್ರಸ್ತುತಪಡಿಸಿದಾಗ ಅದು ಜನರಿಗೆ ಹತ್ತಿರವಾಗುತ್ತದೆ’ ಎಂದು ಹೇಳಿದರು.</p>.<p>‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರದಂತಹ ಯಶಸ್ವಿ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಲು ಅವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಚಿತ್ರರಂಗದಲ್ಲಿ ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು’ ಎಂದು ತಿಳಿಸಿದರು.</p>.<p>ಕರ್ನಾಟಕ ಜಾನಪದ ಪರಿಷತ್ನ ತಾಲ್ಲೂಕು ಘಟಕದ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರತ್ನಾಕರ ಕುನಗೋಡು, ನಾರಾಯಣಪ್ಪ ಕುಗ್ವೆ, ರಾಜು ಜನ್ನೆಹಕ್ಲು, ದಿನೇಶ್ ಬರದವಳ್ಳಿ, ದೀಪಕ್ ಸಾಗರ್, ಸತ್ಯನಾರಾಯಣ ಕೆ.ಬಿ., ಮಹಾಬಲೇಶ್ವರ ಶೇಟ್, ಮೀನಾಕ್ಷಿ, ಪ್ರಭಾ ವೆಂಕಟೇಶ್ ಇದ್ದರು.</p>.<p>ಎಸ್. ಬಸವರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಕೆ. ವಂದಿಸಿದರು. ಜ್ಯೋತಿ ಸತೀಶ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-42-626258508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಜಾನಪದ ಮಟ್ಟುಗಳನ್ನು (ಮಜಲು) ಬಳಸಿದ ಬಹುತೇಕ ಚಲನಚಿತ್ರ ಗೀತೆಗಳು ಯಶಸ್ಸು ಕಂಡಿವೆ’ ಎಂದು ಕಾಂತಾರ ಚಲನಚಿತ್ರದ ಹಿನ್ನೆಲೆ ಗಾಯಕ ವೆಂಕಟೇಶ್ ಡಿ.ಸಿ. ಹೇಳಿದರು.</p>.<p>ಇಲ್ಲಿನ ವಿನೋಬ ನಗರದಲ್ಲಿ ಕರ್ನಾಟಕ ಜಾನಪದ ಪರಿಷತ್ ಭಾನುವಾರ ಏರ್ಪಡಿಸಿದ್ದ ಸಂಗೀತ ಸಂಭ್ರಮ–ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.</p>.<p>‘ಜಾನಪದ ಗೀತೆಗಳಿಗೆ ವಿಶಿಷ್ಟ ಲಯವಿದೆ. ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತ ಹೀಗೆ ಹಲವು ಪ್ರಕಾರಗಳಿಂದ ಚಲನಚಿತ್ರ ಗೀತೆಗಳು ಪ್ರಭಾವಿತಗೊಂಡಿವೆ. ಸದಭಿರುಚಿಯ ಸಾಹಿತ್ಯವನ್ನು ಒಳಗೊಂಡ ಗೀತೆಗಳನ್ನು ಹದವಾದ ಸಂಗೀತದೊಂದಿಗೆ ಕೇಳುಗರ ಎದುರು ಪ್ರಸ್ತುತಪಡಿಸಿದಾಗ ಅದು ಜನರಿಗೆ ಹತ್ತಿರವಾಗುತ್ತದೆ’ ಎಂದು ಹೇಳಿದರು.</p>.<p>‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರದಂತಹ ಯಶಸ್ವಿ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಲು ಅವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಚಿತ್ರರಂಗದಲ್ಲಿ ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು’ ಎಂದು ತಿಳಿಸಿದರು.</p>.<p>ಕರ್ನಾಟಕ ಜಾನಪದ ಪರಿಷತ್ನ ತಾಲ್ಲೂಕು ಘಟಕದ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರತ್ನಾಕರ ಕುನಗೋಡು, ನಾರಾಯಣಪ್ಪ ಕುಗ್ವೆ, ರಾಜು ಜನ್ನೆಹಕ್ಲು, ದಿನೇಶ್ ಬರದವಳ್ಳಿ, ದೀಪಕ್ ಸಾಗರ್, ಸತ್ಯನಾರಾಯಣ ಕೆ.ಬಿ., ಮಹಾಬಲೇಶ್ವರ ಶೇಟ್, ಮೀನಾಕ್ಷಿ, ಪ್ರಭಾ ವೆಂಕಟೇಶ್ ಇದ್ದರು.</p>.<p>ಎಸ್. ಬಸವರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಕೆ. ವಂದಿಸಿದರು. ಜ್ಯೋತಿ ಸತೀಶ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-42-626258508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>