<p>ಶಿವಮೊಗ್ಗ: ‘ಸಾಹಿತಿ ಕುಂ ವೀರಭದ್ರಪ್ಪ ಅವರ ‘ದೇವರ ಹೆಣ’ ಕಥೆ ಕನ್ನಡ ಕಥಾ ಪ್ರಕಾರಕ್ಕೆ ಕೊಟ್ಟ ಅಮೂಲ್ಯ ಕೊಡುಗೆ’ ಎಂದು ಲೇಖಕಿ ಸಬಿತಾ ಬನ್ನಾಡಿ ಹೇಳಿದರು.</p>.<p>ಬಹುಮುಖಿ ಶಿವಮೊಗ್ಗ ಮತ್ತು ಸುವ್ವಿ ಪಬ್ಲಿಕೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಂವೀ ಅನುವಾದಿಸಿದ ಮಾರುತಿ ಪೌರೋಹಿತಂ ಅವರ ಅರೆ ಐತಿಹಾಸಿಕ ತೆಲುಗು ಕಾದಂಬರಿ ‘ಪ್ರಣಯ ಹಂಪಿ’ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಈ ಕಾದಂಬರಿ ಯುದ್ಧಕಾಲದ ಪ್ರೇಮ ಕಥಾನಕವಾಗಿದ್ದು, ಕುಂ.ವೀ ಇದರಲ್ಲಿ ಅನಾಮಧೇಯ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತಾರೆ. ಜನಸಾಮಾನ್ಯರ ಬದುಕಿನ ಬಗ್ಗೆ, ಹಿಂದೂ–ಮುಸ್ಲಿಂ ಹೋರಾಟ ಮತ್ತು ಮಾನವೀಯ ವಿಷಯದ ಬಗ್ಗೆ ವಿವರವಾಗಿ ತಿಳಿಸುತ್ತಾರೆ’ ಎಂದರು.</p>.<p>‘ಕುಂ.ವೀ ಅವರ ಭಾಷೆ ಬಳಸುವ ಕಲೆ ಅದ್ಭುತವಾದದ್ದು. ಇದರಲ್ಲಿ ಲೇಖಕರು ಭಾಷೆಯಲ್ಲೂ ಪರಕಾಯ ಪ್ರವೇಶ ಮಾಡಿದ್ದಾರೆ’ ಎಂದು ಎಚ್.ಎಸ್. ನಾಗಭೂಷಣ ತಿಳಿಸಿದರು.</p>.<p>‘ಕನ್ನಡ ಭಾಷೆಯ ಜನ ಹೃದಯವಂತರು. ಈಗ ಯುವಕರು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಮಾತ್ರ ಓದುತ್ತಾರೆ. ಯಾರೂ ಸಾಹಿತ್ಯ ಓದುತ್ತಿಲ್ಲ. ಅಂತಹವರು ಕಾದಂಬರಿ ಮೂಲಕವಾದರೂ ಸಾಹಿತ್ಯ ಓದುವಂತಾಗಲಿ’ ಎಂದು ಮಾರುತಿ ಪೌರೋಹಿತಂ ಹೇಳಿದರು.</p>.<p>‘ವಿಜಯನಗರ ಸಾಮ್ರಾಜ್ಯವನ್ನು ಮುಸ್ಲಿಮರು ಹಾಳು ಮಾಡಿದ್ದಾಗಿ ಹೇಳುತ್ತಾರೆ. ಅಲ್ಲಿ ವೈಷ್ಣವ ದೇವಾಲಯ ಮಾತ್ರ ಹಾಳಾಗಿ ಶೈವ ದೇವಾಲಯ ಹೇಗೆ ಉಳಿದುಕೊಂಡಿತು? ಲೇಖಕನಿಗೆ ಸ್ವಲ್ಪವಾದರೂ ಮಾನವೀಯತೆ, ಕನಿಷ್ಠ ಸೌಜನ್ಯ ಇರಬೇಕು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.</p>.<p>ಪುಸ್ತಕ ಪ್ರಕಾಶಕ ಸುನಿಲ್ ಕುಮಾರ್, ಕೆ.ಎಸ್. ಹುಚ್ರಾಯಪ್ಪ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-42-1829317028</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ‘ಸಾಹಿತಿ ಕುಂ ವೀರಭದ್ರಪ್ಪ ಅವರ ‘ದೇವರ ಹೆಣ’ ಕಥೆ ಕನ್ನಡ ಕಥಾ ಪ್ರಕಾರಕ್ಕೆ ಕೊಟ್ಟ ಅಮೂಲ್ಯ ಕೊಡುಗೆ’ ಎಂದು ಲೇಖಕಿ ಸಬಿತಾ ಬನ್ನಾಡಿ ಹೇಳಿದರು.</p>.<p>ಬಹುಮುಖಿ ಶಿವಮೊಗ್ಗ ಮತ್ತು ಸುವ್ವಿ ಪಬ್ಲಿಕೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಂವೀ ಅನುವಾದಿಸಿದ ಮಾರುತಿ ಪೌರೋಹಿತಂ ಅವರ ಅರೆ ಐತಿಹಾಸಿಕ ತೆಲುಗು ಕಾದಂಬರಿ ‘ಪ್ರಣಯ ಹಂಪಿ’ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಈ ಕಾದಂಬರಿ ಯುದ್ಧಕಾಲದ ಪ್ರೇಮ ಕಥಾನಕವಾಗಿದ್ದು, ಕುಂ.ವೀ ಇದರಲ್ಲಿ ಅನಾಮಧೇಯ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತಾರೆ. ಜನಸಾಮಾನ್ಯರ ಬದುಕಿನ ಬಗ್ಗೆ, ಹಿಂದೂ–ಮುಸ್ಲಿಂ ಹೋರಾಟ ಮತ್ತು ಮಾನವೀಯ ವಿಷಯದ ಬಗ್ಗೆ ವಿವರವಾಗಿ ತಿಳಿಸುತ್ತಾರೆ’ ಎಂದರು.</p>.<p>‘ಕುಂ.ವೀ ಅವರ ಭಾಷೆ ಬಳಸುವ ಕಲೆ ಅದ್ಭುತವಾದದ್ದು. ಇದರಲ್ಲಿ ಲೇಖಕರು ಭಾಷೆಯಲ್ಲೂ ಪರಕಾಯ ಪ್ರವೇಶ ಮಾಡಿದ್ದಾರೆ’ ಎಂದು ಎಚ್.ಎಸ್. ನಾಗಭೂಷಣ ತಿಳಿಸಿದರು.</p>.<p>‘ಕನ್ನಡ ಭಾಷೆಯ ಜನ ಹೃದಯವಂತರು. ಈಗ ಯುವಕರು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಮಾತ್ರ ಓದುತ್ತಾರೆ. ಯಾರೂ ಸಾಹಿತ್ಯ ಓದುತ್ತಿಲ್ಲ. ಅಂತಹವರು ಕಾದಂಬರಿ ಮೂಲಕವಾದರೂ ಸಾಹಿತ್ಯ ಓದುವಂತಾಗಲಿ’ ಎಂದು ಮಾರುತಿ ಪೌರೋಹಿತಂ ಹೇಳಿದರು.</p>.<p>‘ವಿಜಯನಗರ ಸಾಮ್ರಾಜ್ಯವನ್ನು ಮುಸ್ಲಿಮರು ಹಾಳು ಮಾಡಿದ್ದಾಗಿ ಹೇಳುತ್ತಾರೆ. ಅಲ್ಲಿ ವೈಷ್ಣವ ದೇವಾಲಯ ಮಾತ್ರ ಹಾಳಾಗಿ ಶೈವ ದೇವಾಲಯ ಹೇಗೆ ಉಳಿದುಕೊಂಡಿತು? ಲೇಖಕನಿಗೆ ಸ್ವಲ್ಪವಾದರೂ ಮಾನವೀಯತೆ, ಕನಿಷ್ಠ ಸೌಜನ್ಯ ಇರಬೇಕು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.</p>.<p>ಪುಸ್ತಕ ಪ್ರಕಾಶಕ ಸುನಿಲ್ ಕುಮಾರ್, ಕೆ.ಎಸ್. ಹುಚ್ರಾಯಪ್ಪ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-42-1829317028</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>