ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಜಯಂತಿಯಲ್ಲಿ ಗೌಡರ ಗದ್ದಲ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡರು ಯಾವತ್ತೂ ತಾಳ್ಮೆ, ಸಂಯಮದಿಂದ ಇರುವ ವ್ಯಕ್ತಿ. ಆದರೆ, ಸಿಟ್ಟು ಬಂದರೆ ಗೌಡರ ರೌದ್ರಾವತಾರ ಹೇಗಿರುತ್ತದೆ ಎಂಬುದಕ್ಕೆ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಸಾಕ್ಷಿಯಾಯಿತು. 

ಪಕ್ಷದ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೌಡರು, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಸಮ್ಮುಖದಲ್ಲೇ ಕೆಂಡಾಮಂಡಲರಾಗಿದ್ದನ್ನು ಕಂಡು ಯುವ ನಾಯಕರು ಕಂಗಾಲಾಗಿ ಹೋದರು. ಕಾರ್ಯಕ್ರಮದ ವೇದಿಕೆಯಲ್ಲಿ ಗೌಡರಿಗೆ ಆಸನ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು ಪಕ್ಷದ ನಾಯಕರನ್ನು ಏರಿದ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ‘ಬಿಜೆಪಿ ಸಂಸ್ಥಾಪಕರಲ್ಲಿ ನಾನೂ ಒಬ್ಬ. ವೇದಿಕೆಯಲ್ಲಿ ನನಗೇ ಜಾಗವಿಲ್ಲ ಎಂದರೆ ಏನರ್ಥ’ ಎಂದು ಕೂಗಾಡಿದರು.

ಕೆಲ ಯುವನಾಯಕರು ಸಮಾಧಾನಪಡಿಸಲು ಮುಂದಾದರೂ ಅವರ ಕೋಪ ತಣ್ಣಗಾಗಲಿಲ್ಲ.

‘ನೀವು ಎಷ್ಟು ಜನ ಅಂಬೇಡ್ಕರ್‌ ಅವರನ್ನು ನೋಡಿದ್ದೀರಿ. ಆದರೆ, ನಾನು ನೋಡಿದ್ದೇನೆ. ಅಂಬೇಡ್ಕರ್ ಬೆಂಗಳೂರಿಗೆ ಬಂದಿದ್ದಾಗ ಅವರ ಕಾಲಿಗೆ ಬಿದ್ದಿದ್ದೆ’ ಎಂದು  ಏರು ಧ್ವನಿಯಲ್ಲಿ ಹೇಳಿದರು. ವೇದಿಕೆಯಲ್ಲಿ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಿದ ಬಳಿಕವಷ್ಟೇ ಅವರ ಆರ್ಭಟ ನಿಂತಿತು.

‘ಗೌಡರಿಗೂ ಇಷ್ಟು ಸಿಟ್ಟು ಬರುತ್ತದೆ ಎಂದು ಗೊತ್ತೇ ಇರಲಿಲ್ಲ’ ಎಂದು ಪಕ್ಷದ ನಾಯಕರು ಅಚ್ಚರಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT