ದಬ್ಬೆಘಟ್ಟದ ಮರುಳಸಿದ್ದೇಶ್ವರ ಜಾತ್ರೆ ಶರಣ ಸಂಸ್ಕೃತಿಯ ಕಾಯಕ ಹಾಗೂ ದಾಸೋಹತತ್ವದ ಮೇಲೆ ನಡೆಯುತ್ತಿದ್ದು ಸಿದ್ಧಿ ಪುರುಷರಾದ ಅಲ್ಲಮಪ್ರಭು, ರೇವಣಸಿದ್ಧರು ಹಾಗೂ ಮರುಳಸಿದ್ಧರ ವಿಗ್ರಹಗಳನ್ನು ಒಟ್ಟಿಗೆ ಪ್ರತಿಷ್ಠಾಪಿಸಲಾಗಿದ್ದು ಪೂಜೆಗೊಳ್ಳುತ್ತಿವೆ. ಶರಣರ ಕಾಯಕ ತತ್ವವನ್ನು ಪ್ರತಿನಿಧಿಸುವ ಬಿರುದಾವಳಿಗಳನ್ನು ಹಿಡಿದು ಜನ ಕೆಂಡ ಹಾಯುವುದು ವಿಶೇಷ.