<p><strong>ಮಂಗಳೂರು:</strong> ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ 45 ಸಂಚಿಕೆಗಳ ‘ಇಂಡಿಯಾ ಮಾಸ್ಟರ್ ಶೆಫ್ ಜೋಡಿ ಕಾರ್ಯಕ್ರಮ’ದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯವನ್ನು ಪ್ರತಿನಿಧಿಸಿರುವ ಉಪ್ಪಂಗಳ ವೇಣು ಶರ್ಮಾ ಹಾಗೂ ಅವರ ಪುತ್ರಿ ಅವನಿ ಶರ್ಮಾ, ಕರಾಡ ಬ್ರಾಹ್ಮಣ ಅಡುಗೆ ಖಾದ್ಯಗಳಿಂದ ಸುದ್ದಿಯಾಗಿದ್ದಾರೆ..</p>.ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಮನೆಯಲ್ಲಿ ತಯಾರಿಸಿ ಗರಿಗರಿ ಸಬ್ಬಕ್ಕಿ ಹಪ್ಪಳ.ಟೊಮೆಟೊ ಬಾತ್; ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ.<p>ಕೇರಳದ ಕಾಸರಗೋಡಿನ ಉಪ್ಪಂಗಳದಿಂದ ಬಂದ 26ರ ಹರೆಯದ ಯುವತಿ ಅವನಿ ಶರ್ಮಾಗೆ ಈ ಶೋನಲ್ಲಿ ಜೊತೆಯಾದವರು ಅವರ ತಂದೆ ವೇಣು ಶರ್ಮಾ. ನಿರ್ವಹಣಾ ಸಲಹೆಗಾರಾಗಿ ಯಶಸ್ವಿಯಾಗಿದ್ದ ತಂದೆ, ಮಗಳ ಅಡುಗೆಯ ಆಸಕ್ತಿಗೆ ಕೈಜೋಡಿಸಿ ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿ 40 ಸಂಚಿಕೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಶೋನ ಅಂತಿಮ ಸಂಚಿಕೆ ಮಾ.6 ಶುಕ್ರವಾರ ಪ್ರಸಾರವಾಗಲಿದೆ.</p>.<p>ಸೀಸನ್ನ ಮೊದಲ ‘ಇಮ್ಯುನಿಟಿ ಪಿನ್’ ಗೆದ್ದ ಬಳಿಕ, ಪ್ರಬಲ ಸ್ಪರ್ಧಿಗಳ ನಡುವೆ, ಅಪ್ಪ-ಮಗಳು ತಯಾರಿಸಿದ ‘ದೀಪ ಆರಾಧನೆ’ ಎಂಬ ಸಿಹಿ ತಿಂಡಿ ತೀರ್ಪುಗಾರರಾದ ರಣವೀರ್ ಬ್ರಾರ್ ಮತ್ತು ವಿಕಾಸ್ ಖನ್ನಾ ಅವರ ಮನ ಗೆದ್ದಿತು. ಬಳಿಕ ವಿವಿಧ ಖಾದ್ಯಗಳ ಮೂಲಕ ಟಿ.ವಿ. ಹಾಗೂ ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಸುದ್ದಿ ಮಾಡಿತು.</p>.<p>ಫೆ.27ರ ಸೆಮಿ-ಫೈನಲ್ ಸುತ್ತಿನಲ್ಲಿ 40ನೇ ಕಂತಿನಲ್ಲಿ, ಪ್ಲೇಟಿಂಗ್ ಮುಗಿಸಲು ಕೇವಲ ಎರಡು ನಿಮಿಷಗಳ ಕಾಲಾವಕಾಶ ಕಡಿಮೆಯಾಗಿ ಇವರು ಶೋದಿಂದ ಹೊರ ಬೀಳಬೇಕಾಯಿತು. ಈ ಹೊತ್ತಿಗೆ ಈ ಸ್ಪರ್ಧಿಗಳು ಏಪ್ರನ್ ಕಳಚಿ ಹೊರಬರುವಾಗ ತೀರ್ಪುಗಾರರು ಕೂಡ ಕಣ್ಣೀರಿಟ್ಟಿದ್ದಾರೆ. ಗ್ರಾಮೀಣ ಸೊಗಡಿನ ಅಡುಗೆಗೆ ಒತ್ತು ನೀಡಿದ ಈ ಅಪ್ಪ ಮಗಳು, ಶಾಖಾಹಾರಿ ಆಡುಗೆ ಮಾಡಿದ ಹಾಗೂ ಕರ್ನಾಟಕ ಮತ್ತು ಕೇರಳವನ್ನು ಪ್ರತಿನಿಧಿಸಿದ ಏಕೈಕ ಜೋಡಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ 45 ಸಂಚಿಕೆಗಳ ‘ಇಂಡಿಯಾ ಮಾಸ್ಟರ್ ಶೆಫ್ ಜೋಡಿ ಕಾರ್ಯಕ್ರಮ’ದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯವನ್ನು ಪ್ರತಿನಿಧಿಸಿರುವ ಉಪ್ಪಂಗಳ ವೇಣು ಶರ್ಮಾ ಹಾಗೂ ಅವರ ಪುತ್ರಿ ಅವನಿ ಶರ್ಮಾ, ಕರಾಡ ಬ್ರಾಹ್ಮಣ ಅಡುಗೆ ಖಾದ್ಯಗಳಿಂದ ಸುದ್ದಿಯಾಗಿದ್ದಾರೆ..</p>.ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಮನೆಯಲ್ಲಿ ತಯಾರಿಸಿ ಗರಿಗರಿ ಸಬ್ಬಕ್ಕಿ ಹಪ್ಪಳ.ಟೊಮೆಟೊ ಬಾತ್; ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ.<p>ಕೇರಳದ ಕಾಸರಗೋಡಿನ ಉಪ್ಪಂಗಳದಿಂದ ಬಂದ 26ರ ಹರೆಯದ ಯುವತಿ ಅವನಿ ಶರ್ಮಾಗೆ ಈ ಶೋನಲ್ಲಿ ಜೊತೆಯಾದವರು ಅವರ ತಂದೆ ವೇಣು ಶರ್ಮಾ. ನಿರ್ವಹಣಾ ಸಲಹೆಗಾರಾಗಿ ಯಶಸ್ವಿಯಾಗಿದ್ದ ತಂದೆ, ಮಗಳ ಅಡುಗೆಯ ಆಸಕ್ತಿಗೆ ಕೈಜೋಡಿಸಿ ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿ 40 ಸಂಚಿಕೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಶೋನ ಅಂತಿಮ ಸಂಚಿಕೆ ಮಾ.6 ಶುಕ್ರವಾರ ಪ್ರಸಾರವಾಗಲಿದೆ.</p>.<p>ಸೀಸನ್ನ ಮೊದಲ ‘ಇಮ್ಯುನಿಟಿ ಪಿನ್’ ಗೆದ್ದ ಬಳಿಕ, ಪ್ರಬಲ ಸ್ಪರ್ಧಿಗಳ ನಡುವೆ, ಅಪ್ಪ-ಮಗಳು ತಯಾರಿಸಿದ ‘ದೀಪ ಆರಾಧನೆ’ ಎಂಬ ಸಿಹಿ ತಿಂಡಿ ತೀರ್ಪುಗಾರರಾದ ರಣವೀರ್ ಬ್ರಾರ್ ಮತ್ತು ವಿಕಾಸ್ ಖನ್ನಾ ಅವರ ಮನ ಗೆದ್ದಿತು. ಬಳಿಕ ವಿವಿಧ ಖಾದ್ಯಗಳ ಮೂಲಕ ಟಿ.ವಿ. ಹಾಗೂ ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಸುದ್ದಿ ಮಾಡಿತು.</p>.<p>ಫೆ.27ರ ಸೆಮಿ-ಫೈನಲ್ ಸುತ್ತಿನಲ್ಲಿ 40ನೇ ಕಂತಿನಲ್ಲಿ, ಪ್ಲೇಟಿಂಗ್ ಮುಗಿಸಲು ಕೇವಲ ಎರಡು ನಿಮಿಷಗಳ ಕಾಲಾವಕಾಶ ಕಡಿಮೆಯಾಗಿ ಇವರು ಶೋದಿಂದ ಹೊರ ಬೀಳಬೇಕಾಯಿತು. ಈ ಹೊತ್ತಿಗೆ ಈ ಸ್ಪರ್ಧಿಗಳು ಏಪ್ರನ್ ಕಳಚಿ ಹೊರಬರುವಾಗ ತೀರ್ಪುಗಾರರು ಕೂಡ ಕಣ್ಣೀರಿಟ್ಟಿದ್ದಾರೆ. ಗ್ರಾಮೀಣ ಸೊಗಡಿನ ಅಡುಗೆಗೆ ಒತ್ತು ನೀಡಿದ ಈ ಅಪ್ಪ ಮಗಳು, ಶಾಖಾಹಾರಿ ಆಡುಗೆ ಮಾಡಿದ ಹಾಗೂ ಕರ್ನಾಟಕ ಮತ್ತು ಕೇರಳವನ್ನು ಪ್ರತಿನಿಧಿಸಿದ ಏಕೈಕ ಜೋಡಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>