<p>ಬೇವು-ಬೆಲ್ಲ ತಿನ್ನುವ ಯುಗಾದಿ ಹಬ್ಬ ಈ ಬಾರಿ ಮಾರ್ಚ್ 19ರಂದು ಬಂದಿದೆ. ಯುಗಾದಿ ಹಬ್ಬವನ್ನು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತವ ವಿಶೇಷವಾಗಿ ಆಚರಿಸಲಾಗುತ್ತದೆ. ಈಗಾಗಲೇ ಈ ಹಬ್ಬವನ್ನು ಆಚರಿಸಲು ನಾಡಿನ ಜನತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಲ್ಲೂ ಗೃಹಿಣಿಯರು ಯುಗಾದಿಗೆ ಕೆಲವು ವಿಶೇಷವಾದ ಅಡುಗೆಗಳನ್ನು ಮನೆಯಲ್ಲಿ ತಯಾರಿಸುತ್ತಾರೆ. ಅದರಲ್ಲೂ ಹೋಳಿಗೆ, ಪಚಡಿ, ಪಾಯಸ, ಮಾವಿನಕಾಯಿ ಚಿತ್ರಾನ್ನ, ಕೋಸಂಬರಿ, ಹಪ್ಪಳ ಸೇರಿದಂತೆ ಸಾಕಷ್ಟು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಎಲ್ಲಾ ಖಾದ್ಯಗಳನ್ನು ಮಾಡುವ ವಿಧಾನದ ಬಗ್ಗೆ ತಿಳಿಯೋಣ.</p>.ಗ್ಯಾಸ್ ಕೊರತೆ: ಕಾಂಗ್ರೆಸ್ನಿಂದ ಸೌದೆ ಒಲೆಯಲ್ಲಿ ಟೀ ತಯಾರಿಸಿ ವಿನೂತ ಪ್ರತಿಭಟನೆ.ವಾರಪೂರ್ತಿ ಫ್ರೆಷ್ ಆಗಿರಲು ಹೀಗೆ ತಯಾರಿಸಿ ತರಹೇವಾರಿ ಎಬಿಸಿ ಜ್ಯೂಸ್.<p><strong>ಹೋಳಿಗೆ: </strong></p><p>ಹೋಳಿಗೆಯಲ್ಲಿ ಹಲವು ವಿಧಗಳಿವೆ. ಬೇಳೆ, ಕಾಯಿ, ಸಕ್ಕರೆ ಹೀಗೆ ನಾನಾ ವಿಧಗಳಿವೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಬೇಳೆ ಹೋಳಿಗೆ ಜನಪ್ರಿಯತೆ ಪಡೆದುಕೊಂಡಿದೆ. ಕಡಲೆಬೇಳೆ, ಬೆಲ್ಲ, ಮೈದಾ ಹಿಟ್ಟು, ಏಲಕ್ಕಿ ಬಳಸಿ ತಯಾರಿಸುವ ಈ ಸಿಹಿ ತಿನಿಸು ಯುಗಾದಿ, ದೀಪಾವಳಿ, ಗಣೇಶ ಚತುರ್ಥಿ, ದಸರಾ ಸೇರಿದಂತೆ ಮುಂತಾದ ಹಬ್ಬಗಳಲ್ಲಿ ಮಾಡಲಾಗುತ್ತದೆ.</p><p><strong>ಮಾಡುವ ವಿಧಾನ: </strong></p><p>ಮೈದಾ ಹಿಟ್ಟಿಗೆ ಸ್ವಲ್ಪ ಅರಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹದಕ್ಕೆ ಕಲಸಿಕೊಳ್ಳಿ. ಬಳಿಕ ಹೂರಣ ತಯಾರಿಸಿಕೊಳ್ಳಿ. ನೆನೆಸಿಟ್ಟ ಕಡಲೆ ಬೇಳೆಯನ್ನು ಬೇಯಿಸಿಕೊಳ್ಳಬೇಕು. ಬೇಯಿಸಿದ ಕಡಲೆ ಬೇಳೆ ತಣ್ಣಾಗಾದ ಬಳಿಕ ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿಕೊಂಡರೆ ಹೂರಣ ಸಿದ್ದವಾಗುತ್ತದೆ. ಬಳಿಕ ಕಲಸಿಟ್ಟ ಹಿಟ್ಟಿನ ಒಳಗೆ ಹೂರಣವನ್ನು ಹಾಕಿ ಚಪಾತಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. ತವಾದ ಮೇಲೆ ಎಣ್ಣೆ ಹಾಕಿ ಹೋಳಿಗೆಯನ್ನು ಬೇಯಿಸಿಕೊಂಡರೆ ರುಚಿಯಾದ ಬೇಳೆ ಹೋಳಿಗೆ ಸವಿಯಲು ಸಿದ್ಧ.</p>.<p><strong>ಪಚಡಿ: </strong>ಇದು ಯುಗಾದಿ ಹಬ್ಬದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಮಾಡುವ ಅತ್ಯಂತ ಮುಖ್ಯವಾದ ಹಾಗೂ ಸಾಂಪ್ರದಾಯಿಕ ಆರೋಗ್ಯಕರ ಪಾನೀಯವಾಗಿದೆ. ಇದರಲ್ಲಿ ಆರು ವಿಧದ ರುಚಿಗಳು ಅಂದರೆ ಸಿಹಿ, ಕಹಿ, ಹುಳಿ, ಉಪ್ಪು, ಖಾರ ಮತ್ತು ಒಗರು ಇರುತ್ತವೆ. ಬೇವಿನ ಎಲೆ, ಹಸಿ ಮಾವು, ಬೆಲ್ಲ, ಉಪ್ಪು, ಮೆಣಸಿನ ಪುಡಿ, ಮತ್ತು ಹುಣಸೆಹಣ್ಣು ಬಳಸಿ ಇದನ್ನು ತಯಾರಿಸಲಾಗುತ್ತದೆ. </p><p><strong>ಸಾಮಾಗ್ರಿಗಳು:</strong> ಹುಣಸೆ ಹಣ್ಣಿನ ರಸ, ಬೆಲ್ಲ, ಹಸಿ ಮಾವು, ಬೇವಿನ ಹೂವು, ಹಸಿರು ಮೆಣಸಿನಕಾಯಿ ಅಥವಾ ಮೆಣಸಿನ ಪುಡಿ, ಮತ್ತು ಉಪ್ಪು.</p><p><strong>ಮಾಡುವ ವಿಧಾನ: </strong>ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಬೆಲ್ಲವನ್ನು ಸಂಪೂರ್ಣವಾಗಿ ಕರಗಿಸಿ. ಇದಕ್ಕೆ ಸಿದ್ಧಪಡಿಸಿದ ಹುಣಸೆಹಣ್ಣಿನ ರಸ, ಮಾವಿನಕಾಯಿ, ಬೇವಿನ ಹೂವು, ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಸವಿಯಬಹುದು</p>.<p><strong>ಪಾಯಸ </strong></p><p><strong>ಬೇಕಾಗಿರುವ ಸಾಮಾಗ್ರಿಗಳು:</strong> ಹಾಲು, ಸಕ್ಕರೆ ಮತ್ತು ಅಕ್ಕಿ, ಏಲಕ್ಕಿ, ತುಪ್ಪ, ಒಣದ್ರಾಕ್ಷಿ, ಗೋಡಂಬಿ</p><p><strong>ಮಾಡುವ ವಿಧಾನ:</strong></p><p>ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ನೆನೆಸಿಡಿ. ಬಳಿಕ ನೆನೆಸಿದ ಅಕ್ಕಿಯನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ, ನಂತರ ಬೆಲ್ಲ ಅಥವಾ ಸಕ್ಕರೆ, ಏಲಕ್ಕಿ ಮತ್ತು ತುಪ್ಪದಲ್ಲಿ ಹುರಿದ ಒಣದ್ರಾಕ್ಷಿ-ಗೋಡಂಬಿ ಸೇರಿಸಿ. ಅಕ್ಕಿ ತಳ ಹಿಡಿಯದಂತೆ ಮಧ್ಯೆ ಚಮಚದಿಂದ ಕೈಯಾಡಿಸುತ್ತಿರಿ. ಇದರಲ್ಲಿ ಬೆಲ್ಲದ ಬದಲು ಸಕ್ಕರೆಯನ್ನೂ ಬಳಸಬಹುದು. </p>.<p><strong>ಮಾವಿನಕಾಯಿ ಚಿತ್ರಾನ್ನ:</strong></p><p><strong>ಮಾಡಲು ಬೇಕಾಗುವ ಸಾಮಾಗ್ರಿಗಳು:</strong> ಅನ್ನ, ತುರಿದ ಮಾವಿನಕಾಯಿ, ತೆಂಗಿನಕಾಯಿ ತುರಿ, ಸಾಸಿವೆ, ಕಡಲೆಕಾಯಿ ಬೀಜ, ಉದ್ದಿನಬೇಳೆ, ಹಸಿಮೆಣಸಿನಕಾಯಿ, ಕರಿಬೇವು, ಎಣ್ಣೆ, ಉಪ್ಪು ಮತ್ತು ಅರಿಶಿನ ಪುಡಿ</p><p><strong>ಮಾಡುವ ವಿಧಾನ:</strong></p><p>ತೋತಾಪುರಿ ಮಾವಿನಕಾಯಿಯನ್ನು ತೊಳೆದು, ಅದರ ಮೇಲಿರುವ ಸಿಪ್ಪೆ ತೆಗೆದು ತುರಿದುಕೊಳ್ಳಿ. ಬಳಿಕ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮತ್ತು ಸ್ವಲ್ಪ ಜೀರಿಗೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕಡಲೆಕಾಯಿ ಬೀಜ, ಉದ್ದಿನಬೇಳೆ, ಕರಿಬೇವು ಹಾಕಿ ಹುರಿಯಿರಿ. ನಂತರ ಒಗ್ಗರಣೆಗೆ ತುರಿದ ಮಾವಿನಕಾಯಿ, ರುಬ್ಬಿದ ಮಸಾಲೆ, ಅರಿಶಿನ ಮತ್ತು ಉಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಸಿದ್ಧಪಡಿಸಿದ ಮಿಶ್ರಣವನ್ನು ಬೇಯಿಸಿದ ಅನ್ನದೊಂದಿಗೆ ಮಿಶ್ರಣ ಮಾಡಿ. ಈಗ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧ.</p>.<p><strong>ಕೋಸಂಬರಿ:</strong></p><p><strong>ಮಾಡಲು ಬೇಕಾಗಿರುವ ಸಾಮಾಗ್ರಿಗಳು:</strong></p><p>ಹೆಸರುಬೇಳೆ, ಸೌತೆಕಾಯಿ, ಕ್ಯಾರೆಟ್, ತೆಂಗಿನ ತುರಿ, ಕೊತ್ತಂಬರಿ, ನಿಂಬೆರಸ.</p><p><strong>ಮಾಡುವ ವಿಧಾನ:</strong></p><p>ಹೆಸರುಬೇಳೆ ಬೇಳೆಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಸೌತೆಕಾಯಿ, ತುರಿದ ಕ್ಯಾರೆಟ್, ಹಸಿಮೆಣಸಿನಕಾಯಿ, ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಬಾಣಲೆಯಲ್ಲಿ ಸಾಸಿವೆ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ ಕೋಸಂಬರಿಗೆ ಸೇರಿಸಿದರೆ ಕೋಸಂಬರಿ ಸವಿಯಲು ಸಿದ್ಧ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇವು-ಬೆಲ್ಲ ತಿನ್ನುವ ಯುಗಾದಿ ಹಬ್ಬ ಈ ಬಾರಿ ಮಾರ್ಚ್ 19ರಂದು ಬಂದಿದೆ. ಯುಗಾದಿ ಹಬ್ಬವನ್ನು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತವ ವಿಶೇಷವಾಗಿ ಆಚರಿಸಲಾಗುತ್ತದೆ. ಈಗಾಗಲೇ ಈ ಹಬ್ಬವನ್ನು ಆಚರಿಸಲು ನಾಡಿನ ಜನತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಲ್ಲೂ ಗೃಹಿಣಿಯರು ಯುಗಾದಿಗೆ ಕೆಲವು ವಿಶೇಷವಾದ ಅಡುಗೆಗಳನ್ನು ಮನೆಯಲ್ಲಿ ತಯಾರಿಸುತ್ತಾರೆ. ಅದರಲ್ಲೂ ಹೋಳಿಗೆ, ಪಚಡಿ, ಪಾಯಸ, ಮಾವಿನಕಾಯಿ ಚಿತ್ರಾನ್ನ, ಕೋಸಂಬರಿ, ಹಪ್ಪಳ ಸೇರಿದಂತೆ ಸಾಕಷ್ಟು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಎಲ್ಲಾ ಖಾದ್ಯಗಳನ್ನು ಮಾಡುವ ವಿಧಾನದ ಬಗ್ಗೆ ತಿಳಿಯೋಣ.</p>.ಗ್ಯಾಸ್ ಕೊರತೆ: ಕಾಂಗ್ರೆಸ್ನಿಂದ ಸೌದೆ ಒಲೆಯಲ್ಲಿ ಟೀ ತಯಾರಿಸಿ ವಿನೂತ ಪ್ರತಿಭಟನೆ.ವಾರಪೂರ್ತಿ ಫ್ರೆಷ್ ಆಗಿರಲು ಹೀಗೆ ತಯಾರಿಸಿ ತರಹೇವಾರಿ ಎಬಿಸಿ ಜ್ಯೂಸ್.<p><strong>ಹೋಳಿಗೆ: </strong></p><p>ಹೋಳಿಗೆಯಲ್ಲಿ ಹಲವು ವಿಧಗಳಿವೆ. ಬೇಳೆ, ಕಾಯಿ, ಸಕ್ಕರೆ ಹೀಗೆ ನಾನಾ ವಿಧಗಳಿವೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಬೇಳೆ ಹೋಳಿಗೆ ಜನಪ್ರಿಯತೆ ಪಡೆದುಕೊಂಡಿದೆ. ಕಡಲೆಬೇಳೆ, ಬೆಲ್ಲ, ಮೈದಾ ಹಿಟ್ಟು, ಏಲಕ್ಕಿ ಬಳಸಿ ತಯಾರಿಸುವ ಈ ಸಿಹಿ ತಿನಿಸು ಯುಗಾದಿ, ದೀಪಾವಳಿ, ಗಣೇಶ ಚತುರ್ಥಿ, ದಸರಾ ಸೇರಿದಂತೆ ಮುಂತಾದ ಹಬ್ಬಗಳಲ್ಲಿ ಮಾಡಲಾಗುತ್ತದೆ.</p><p><strong>ಮಾಡುವ ವಿಧಾನ: </strong></p><p>ಮೈದಾ ಹಿಟ್ಟಿಗೆ ಸ್ವಲ್ಪ ಅರಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹದಕ್ಕೆ ಕಲಸಿಕೊಳ್ಳಿ. ಬಳಿಕ ಹೂರಣ ತಯಾರಿಸಿಕೊಳ್ಳಿ. ನೆನೆಸಿಟ್ಟ ಕಡಲೆ ಬೇಳೆಯನ್ನು ಬೇಯಿಸಿಕೊಳ್ಳಬೇಕು. ಬೇಯಿಸಿದ ಕಡಲೆ ಬೇಳೆ ತಣ್ಣಾಗಾದ ಬಳಿಕ ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿಕೊಂಡರೆ ಹೂರಣ ಸಿದ್ದವಾಗುತ್ತದೆ. ಬಳಿಕ ಕಲಸಿಟ್ಟ ಹಿಟ್ಟಿನ ಒಳಗೆ ಹೂರಣವನ್ನು ಹಾಕಿ ಚಪಾತಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. ತವಾದ ಮೇಲೆ ಎಣ್ಣೆ ಹಾಕಿ ಹೋಳಿಗೆಯನ್ನು ಬೇಯಿಸಿಕೊಂಡರೆ ರುಚಿಯಾದ ಬೇಳೆ ಹೋಳಿಗೆ ಸವಿಯಲು ಸಿದ್ಧ.</p>.<p><strong>ಪಚಡಿ: </strong>ಇದು ಯುಗಾದಿ ಹಬ್ಬದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಮಾಡುವ ಅತ್ಯಂತ ಮುಖ್ಯವಾದ ಹಾಗೂ ಸಾಂಪ್ರದಾಯಿಕ ಆರೋಗ್ಯಕರ ಪಾನೀಯವಾಗಿದೆ. ಇದರಲ್ಲಿ ಆರು ವಿಧದ ರುಚಿಗಳು ಅಂದರೆ ಸಿಹಿ, ಕಹಿ, ಹುಳಿ, ಉಪ್ಪು, ಖಾರ ಮತ್ತು ಒಗರು ಇರುತ್ತವೆ. ಬೇವಿನ ಎಲೆ, ಹಸಿ ಮಾವು, ಬೆಲ್ಲ, ಉಪ್ಪು, ಮೆಣಸಿನ ಪುಡಿ, ಮತ್ತು ಹುಣಸೆಹಣ್ಣು ಬಳಸಿ ಇದನ್ನು ತಯಾರಿಸಲಾಗುತ್ತದೆ. </p><p><strong>ಸಾಮಾಗ್ರಿಗಳು:</strong> ಹುಣಸೆ ಹಣ್ಣಿನ ರಸ, ಬೆಲ್ಲ, ಹಸಿ ಮಾವು, ಬೇವಿನ ಹೂವು, ಹಸಿರು ಮೆಣಸಿನಕಾಯಿ ಅಥವಾ ಮೆಣಸಿನ ಪುಡಿ, ಮತ್ತು ಉಪ್ಪು.</p><p><strong>ಮಾಡುವ ವಿಧಾನ: </strong>ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಬೆಲ್ಲವನ್ನು ಸಂಪೂರ್ಣವಾಗಿ ಕರಗಿಸಿ. ಇದಕ್ಕೆ ಸಿದ್ಧಪಡಿಸಿದ ಹುಣಸೆಹಣ್ಣಿನ ರಸ, ಮಾವಿನಕಾಯಿ, ಬೇವಿನ ಹೂವು, ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಸವಿಯಬಹುದು</p>.<p><strong>ಪಾಯಸ </strong></p><p><strong>ಬೇಕಾಗಿರುವ ಸಾಮಾಗ್ರಿಗಳು:</strong> ಹಾಲು, ಸಕ್ಕರೆ ಮತ್ತು ಅಕ್ಕಿ, ಏಲಕ್ಕಿ, ತುಪ್ಪ, ಒಣದ್ರಾಕ್ಷಿ, ಗೋಡಂಬಿ</p><p><strong>ಮಾಡುವ ವಿಧಾನ:</strong></p><p>ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ನೆನೆಸಿಡಿ. ಬಳಿಕ ನೆನೆಸಿದ ಅಕ್ಕಿಯನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ, ನಂತರ ಬೆಲ್ಲ ಅಥವಾ ಸಕ್ಕರೆ, ಏಲಕ್ಕಿ ಮತ್ತು ತುಪ್ಪದಲ್ಲಿ ಹುರಿದ ಒಣದ್ರಾಕ್ಷಿ-ಗೋಡಂಬಿ ಸೇರಿಸಿ. ಅಕ್ಕಿ ತಳ ಹಿಡಿಯದಂತೆ ಮಧ್ಯೆ ಚಮಚದಿಂದ ಕೈಯಾಡಿಸುತ್ತಿರಿ. ಇದರಲ್ಲಿ ಬೆಲ್ಲದ ಬದಲು ಸಕ್ಕರೆಯನ್ನೂ ಬಳಸಬಹುದು. </p>.<p><strong>ಮಾವಿನಕಾಯಿ ಚಿತ್ರಾನ್ನ:</strong></p><p><strong>ಮಾಡಲು ಬೇಕಾಗುವ ಸಾಮಾಗ್ರಿಗಳು:</strong> ಅನ್ನ, ತುರಿದ ಮಾವಿನಕಾಯಿ, ತೆಂಗಿನಕಾಯಿ ತುರಿ, ಸಾಸಿವೆ, ಕಡಲೆಕಾಯಿ ಬೀಜ, ಉದ್ದಿನಬೇಳೆ, ಹಸಿಮೆಣಸಿನಕಾಯಿ, ಕರಿಬೇವು, ಎಣ್ಣೆ, ಉಪ್ಪು ಮತ್ತು ಅರಿಶಿನ ಪುಡಿ</p><p><strong>ಮಾಡುವ ವಿಧಾನ:</strong></p><p>ತೋತಾಪುರಿ ಮಾವಿನಕಾಯಿಯನ್ನು ತೊಳೆದು, ಅದರ ಮೇಲಿರುವ ಸಿಪ್ಪೆ ತೆಗೆದು ತುರಿದುಕೊಳ್ಳಿ. ಬಳಿಕ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮತ್ತು ಸ್ವಲ್ಪ ಜೀರಿಗೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕಡಲೆಕಾಯಿ ಬೀಜ, ಉದ್ದಿನಬೇಳೆ, ಕರಿಬೇವು ಹಾಕಿ ಹುರಿಯಿರಿ. ನಂತರ ಒಗ್ಗರಣೆಗೆ ತುರಿದ ಮಾವಿನಕಾಯಿ, ರುಬ್ಬಿದ ಮಸಾಲೆ, ಅರಿಶಿನ ಮತ್ತು ಉಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಸಿದ್ಧಪಡಿಸಿದ ಮಿಶ್ರಣವನ್ನು ಬೇಯಿಸಿದ ಅನ್ನದೊಂದಿಗೆ ಮಿಶ್ರಣ ಮಾಡಿ. ಈಗ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧ.</p>.<p><strong>ಕೋಸಂಬರಿ:</strong></p><p><strong>ಮಾಡಲು ಬೇಕಾಗಿರುವ ಸಾಮಾಗ್ರಿಗಳು:</strong></p><p>ಹೆಸರುಬೇಳೆ, ಸೌತೆಕಾಯಿ, ಕ್ಯಾರೆಟ್, ತೆಂಗಿನ ತುರಿ, ಕೊತ್ತಂಬರಿ, ನಿಂಬೆರಸ.</p><p><strong>ಮಾಡುವ ವಿಧಾನ:</strong></p><p>ಹೆಸರುಬೇಳೆ ಬೇಳೆಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಸೌತೆಕಾಯಿ, ತುರಿದ ಕ್ಯಾರೆಟ್, ಹಸಿಮೆಣಸಿನಕಾಯಿ, ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಬಾಣಲೆಯಲ್ಲಿ ಸಾಸಿವೆ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ ಕೋಸಂಬರಿಗೆ ಸೇರಿಸಿದರೆ ಕೋಸಂಬರಿ ಸವಿಯಲು ಸಿದ್ಧ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>