ಪುಸ್ತಕ ಮನೆಯ ಸುಂದರ್ ‘ಅಂತಕರಣವು ಅಕ್ಷರವಾದರೇ’ ಪುಸ್ತಕದ ಕುರಿತು ಮಾತನಾಡಿ, ‘ಅಕ್ಷತೆ ಮತ್ತು ಅಕ್ಷರ ಸಂಭ್ರಮದ ಜತೆ ಜತೆಯಲ್ಲಿ ನಡೆಯುತ್ತಿರುವ ಈ ಸರಳ ಸಮಾರಂಭವು ಕುವೆಂಪು ಅವರ ಆಶಯಕ್ಕೆ ಅನುಗುಣವಾಗಿದೆ. ಒಂದೆಡೆ ಕುವೆಂಪು ಅವರ ಮಂತ್ರ ಮಾಂಗಲ್ಯದ ಅಡಿಯಲ್ಲಿ ವಿವಾಹ ನೆರವೇರಿದರೇ, ಇನ್ನೊಂದೆಡೆ ವಧುವಿನ ತಂದೆಯಾದ ಕುಮಾರ್ ಅವರು ಇದೇ ಸಂದರ್ಭದಲ್ಲಿ ಒಂದು ವೈಚಾರಿಕ ಕೃತಿ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಸ್ವಾತಂತ್ರ್ಯ ಬಂದೂ 7 ದಶಕಗಳ ನಂತರವೂ ಕೂಡ ಶೇ 50 ರಷ್ಟು ಜನತೆ ಅಕ್ಷರ ಸಂಪತ್ತಿನಿಂದ ವಂಚಿತರಾಗಿರುವ ಈ ಸಮಾಜದಲ್ಲಿ ಇಂದಿಗೂ ಅಕ್ಷರ ಕೂಡ ಒಂದು ದೊಡ್ಡ ಸಂಪತ್ತೆ ಆಗಿದೆ’ ಎಂದರು.