ಭಾಗಮಂಡಲ ಸಮೀಪದ ಚೆಟ್ಟಿಮಾನಿ ವ್ಯಾಪ್ತಿಯ ಸೇತುವೆ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಗುಂಪೊಂದು ಯುವಕರನ್ನು ತರಾಟೆಗೆ ತೆಗೆದುಕೊಂಡಿದೆ. ‘ಇಲ್ಲಿ ನಿಮಗೇನು ಕೆಲಸ’ ಎಂದು ಪ್ರಶ್ನಿಸಿ, ಇಬ್ಬರು ಯುವಕರ ಶರ್ಟ್ ಬಿಚ್ಚಿಸಿ ಥಳಿಸಿದ್ದಾರೆ. ಪ್ಯಾಂಟ್ ಸಹ ಕಳಚಲು ಮುಂದಾಗಿದ್ದಾರೆ. ಅವರ ಬಳಿಯಿದ್ದ ಆಧಾರ್ ಕಾರ್ಡ್, ಚಾಲನಾ ಪರವಾನಗಿ ಕಸಿದುಕೊಂಡು ‘ಪೊಲೀಸರಿಗೆ ದೂರು ನೀಡುತ್ತೇವೆ’ ಎಂದು ಬೆದರಿಕೆ ಹಾಕಿರುವುದು ವಿಡಿಯೊದಲ್ಲಿದೆ. ‘ತಪ್ಪಿಸಿಕೊಂಡರೆ ಸಾಯಿಸುತ್ತೇವೆ’ ಎಂದೂ ಕೆಲವರು ಬೆದರಿಕೆ ಒಡ್ಡಿದ್ದಾರೆ.