‘ತಿಂಗಳುಗಟ್ಟಲೆ ಹಾಸಿಗೆ ಹಿಡಿದ ವ್ಯಕ್ತಿಯ ಬೆನ್ನಿನಲ್ಲಿ ಆಗುವ ಆಳವಾದ ಗಾಯ, ಮೂಳೆ ಮುರಿತದಿಂದ ಉಂಟಾದ ಗಾಯ, ಮಧುಮೇಹಿಗಳ ಗ್ಯಾಂಗ್ರಿನ್, ಇವೆಲ್ಲವನ್ನೂ ಆಸ್ಪತ್ರೆಯಲ್ಲಿರುವ ಕೆಲವೇ ತಂತ್ರಜ್ಞಾನದಿಂದ ವಾಸಿ ಮಾಡಲು ಸಾಧ್ಯವಿಲ್ಲ. ಇದಕ್ಕೆ ವಿಶೇಷ ತಜ್ಞರ ತಂಡ ಹಾಗೂ ಯಂತ್ರಗಳು ಕೂಡ ಬೇಕಾಗುತ್ತದೆ. ವಾಸಿಯಾಗುವ ಗಾಯಗಳಿಗೂ ಕೈ, ಕಾಲು ತೆಗೆಯುವಂತಹ ಸ್ಥಿತಿಯಿಂದ ರೋಗಿಗಳನ್ನು ಬಚಾವು ಮಾಡಲು ವೂಂಡ್ ಕೇರ್ ನೆರವಾಗಲಿದೆ’ ಎಂದು ಡಾ.ಮಹೇಶ್ ಕೊಟಪಲ್ಲಿ ಅವರು ಹೇಳಿದರು.