‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬುದರ ಕುರಿತು ಜಾಗೃತಿ ಮೂಡಿಸುವ ಮರಳು ಶಿಲ್ಪ ಕಲಾಕೃತಿಯನ್ನು ಕಾರವಾರ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಮಹಿ ಕಲಾ ಕಲರವ ಗ್ರೂಪ್ನ ಕಲಾವಿದ ಎಚ್.ಎಂ. ಕುಮಾರಮಹೇಶ ರಚಿಸಿದ್ದಾರೆ. 4 ಅಡಿ ಎತ್ತರ ಹಾಗೂ 12 ಅಡಿ ಉದ್ದದ ಈ ಕಲಾಕೃತಿ ರಚನೆಗೆ ಕಲಾವಿದರಾದ ವಿಕಾಸ, ಸುರೇಶ, ಪ್ರಸನ್ನ ಜಿತ್, ಗುರುಪ್ರಸಾದ್ ಗೋಕುಲ್ ಸಹಕಾರ ನೀಡಿದ್ದಾರೆ. ಇದೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಈ ಕಲಾಕೃತಿ ರಚಿಸಿದ್ದು, ವಾಯುವಿಹಾರಿಗಳ ಗಮನಸೆಳೆಯಿತು ಪ್ರಜಾವಾಣಿ ಚಿತ್ರ