ಮಾಗಡಿಯ ಗೌರಮ್ಮನಕೆರೆಯ ದಡದಲ್ಲಿ ಇರುವ ಬೋಧಿವೃಕ್ಷ, ಮಸೀದಿ, ಪ್ರಸನ್ನರುದ್ರೇಶ್ವರ, ವೆಂಕಟರಮಣಸ್ವಾಮಿ ಗುಡಿಗಳ ಮೇಲೆ ಬಂಗಾರದ ಕಿರಣ ಸೂಸಿದ ಬೆಳಕಿನ ಭಾಸ್ಕರ ದೇವನೊಬ್ಬ ನಾಮ ಹಲವು ಎಂದು ಸಾರಿ ಹೇಳುವಂತೆ ಬಾನಿನಲ್ಲಿ ಬಂಗಾರದ ಬಣ್ಣ ಮೂಡಿಸಿ, ಪಶ್ಚಿಮದಲ್ಲಿ ಮರೆಯಾಗುತ್ತಿರುವುದು ಮನ ಮೋಹಕವಾಗಿ ಕಂಡುಬಂದಿತು ಚಿತ್ರ– ದೊಡ್ಡಬಾಣಗೆರೆ ಮಾರಣ್ಣ