<p>ಕಳೆದ ವರ್ಷಕ್ಕೆ ಹೋಲಿಸಿದರೆ, ಬಿಸಿಲಿನ ಪ್ರಮಾಣ ಈ ವರ್ಷ ಹೆಚ್ಚಾಗಿಯೇ ಇದೆ. ಮಳೆಗಾಲ ಆರಂಭವಾಗುವುದು ಕೂಡ ತಡವಾಗಲಿದೆ ಎಂದು ವರದಿಯಾಗಿದೆ. ಈ ನಡುವೆ ಅತಿಯಾದ ಬಿಸಿಲು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ತಾಪಮಾನ ಹೆಚ್ಚಾದಂತೆ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಕೂಡ ಕಾಡುತ್ತಿದೆ. ಅನೇಕರು ನಿರ್ಜಲೀಕರಣ ಮತ್ತು ಉಷ್ಣಾಘಾತ (SunStrock) ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಈ ಎರಡು ಬೇರೆ ಬೇರೆ. </p><p>ಹಾಗಾದರೆ ನಿರ್ಜಲೀಕರಣ ಮತ್ತು ಉಷ್ಣಾಘಾತ ಈ ಎರಡರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಯೋಣ.</p><p>ನಿರ್ಜಲೀಕರಣ ಮತ್ತು ಉಷ್ಣಾಘಾತವು ನೀರಿನ ಕೊರತೆ ಹಾಗೂ ಅಧಿಕ ತಾಪಮಾನದಿಂದ ಉಂಟಾಗುತ್ತವೆ. ಧೀರ್ಘಕಾಲದವರೆಗೆ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದು ಜೀವಕ್ಕೂ ಕುತ್ತು ತರಬಹುದು. </p><p>ದೇಹಕ್ಕೆ ಬೇಕಾದ ಅಗತ್ಯದಷ್ಟು ನೀರನ್ನು ಒದಗಿಸದೆ ಇದ್ದಾಗ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ಮೂತ್ರಪಿಂಡಗಳು ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಧಣಿವು, ಚರ್ಮ ಒಣಗುವುದು, ತಲೆ ನೋವು ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ ಆಗಾಗ ನೀರು ಕುಡಿಯುತ್ತಿರುವುದು ಉತ್ತಮ.</p><p><strong>ನಿರ್ಜಲೀಕರಣದ ಲಕ್ಷಣಗಳು:</strong></p><ul><li><p>ಬಾಯಿ ಮತ್ತು ತುಟಿ ಒಣಗುವುದು</p></li><li><p>ಮೂತ್ರ ಗಾಢ ಹಳದಿ ಬಣ್ಣದಲ್ಲಿ ಇರುವುದು</p></li><li><p>ಆಯಾಸ ಅಥವಾ ದುರ್ಬಲತೆ</p></li><li><p>ತಲೆನೋವು</p></li></ul><p><strong>ಉಷ್ಣಾಘಾತ</strong> </p><p>ದೇಹದ ಉಷ್ಣಾಂಶ ಅತಿಯಾಗಿ ಏರಿಕೆಯಾಗಿ, ದೇಹವು ತನ್ನಿಂದ ತಾನೇ ಸಹಜ ಸ್ಥಿತಿಗೆ ತಲುಪಲು ಸಾಧ್ಯವಾಗದ ಗಂಭೀರ ಸ್ಥಿತಿಯೇ ಉಷ್ಣಾಘಾತವಾಗಿದೆ.</p><p><strong>ಲಕ್ಷಣಗಳು:</strong></p><ul><li><p>ದೇಹದ ಉಷ್ಣಾಂಶ ಅಧಿಕವಾಗುವುದು</p></li><li><p>ಚರ್ಮ ಒಣಗಿರುವ (ಕೆಲವೊಮ್ಮೆ ಬೆವರು ಬರದಿರುವುದು)</p></li><li><p>ಅತಿಯಾದ ತಲೆ ತಿರುಗುವಿಕೆ</p></li><li><p>ವಾಕರಿಕೆ ಅಥವಾ ವಾಂತಿ</p></li><li><p>ಹೃದಯ ಬಡಿತ ಹೆಚ್ಚಾಗುವುದು</p></li><li><p>ಮೂರ್ಛೆ ಹೋಗುವುದು</p></li></ul><p><strong>ಬೇಸಿಗೆ ಬಿಸಿಲಿನಲ್ಲಿನ ಸುರಕ್ಷತಾ ಕ್ರಮಗಳು</strong></p><ul><li><p>ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ</p></li><li><p>ಅಧಿಕ ಬಿಸಿಲಿರುವ ವೇಳೆ ಹೊರಗೆ ಹೋಗುವುದನ್ನು ತಪ್ಪಿಸಿ</p></li><li><p>ಹಗುರ ಮತ್ತು ಗಾಳಿಯಾಡುವ ಬಟ್ಟೆ ಧರಿಸಿ</p></li><li><p>ನೀರಿನಾಂಶವುಳ್ಳ ಹಣ್ಣುಗಳನ್ನು ಸೇವಿಸಿ</p></li><li><p>ಲಘುವಾದ ಆಹಾರ ಸೇವಿಸಿ</p></li><li><p>ಸನ್ಸ್ಕ್ರೀನ್ ಬಳಸಿ</p></li><li><p>ಕಣ್ಣಿನ ರಕ್ಷಣೆಗೆ ಸನ್ ಗ್ಲಾಸ್ ಬಳಕೆ ಮಾಡಿ</p></li></ul><p>ಒಂದು ವೇಳೆ ನೀರು ಕುಡಿದರೂ ನಿರ್ಜಲೀಕರಣದ ಲಕ್ಷಣಗಳು ಕಡಿಮೆಯಾಗದಿರುವುದು, ಗೊಂದಲ, ಮೂರ್ಛೆ ಅಥವಾ ದೇಹದ ಉಷ್ಣಾಂಶ ಹೆಚ್ಚಾಗುವುದು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.</p>.<p><strong>ಲೇಖಕರು: ಡಾ. ಬಸವರಾಜ್ ಎಸ್ ಕುಂಬಾರ್, ಸಲಹಾ ತಜ್ಞರು, ಆಂತರಿಕ ವೈದ್ಯಕೀಯ ವಿಭಾಗ, ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ವರ್ಷಕ್ಕೆ ಹೋಲಿಸಿದರೆ, ಬಿಸಿಲಿನ ಪ್ರಮಾಣ ಈ ವರ್ಷ ಹೆಚ್ಚಾಗಿಯೇ ಇದೆ. ಮಳೆಗಾಲ ಆರಂಭವಾಗುವುದು ಕೂಡ ತಡವಾಗಲಿದೆ ಎಂದು ವರದಿಯಾಗಿದೆ. ಈ ನಡುವೆ ಅತಿಯಾದ ಬಿಸಿಲು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ತಾಪಮಾನ ಹೆಚ್ಚಾದಂತೆ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಕೂಡ ಕಾಡುತ್ತಿದೆ. ಅನೇಕರು ನಿರ್ಜಲೀಕರಣ ಮತ್ತು ಉಷ್ಣಾಘಾತ (SunStrock) ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಈ ಎರಡು ಬೇರೆ ಬೇರೆ. </p><p>ಹಾಗಾದರೆ ನಿರ್ಜಲೀಕರಣ ಮತ್ತು ಉಷ್ಣಾಘಾತ ಈ ಎರಡರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಯೋಣ.</p><p>ನಿರ್ಜಲೀಕರಣ ಮತ್ತು ಉಷ್ಣಾಘಾತವು ನೀರಿನ ಕೊರತೆ ಹಾಗೂ ಅಧಿಕ ತಾಪಮಾನದಿಂದ ಉಂಟಾಗುತ್ತವೆ. ಧೀರ್ಘಕಾಲದವರೆಗೆ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದು ಜೀವಕ್ಕೂ ಕುತ್ತು ತರಬಹುದು. </p><p>ದೇಹಕ್ಕೆ ಬೇಕಾದ ಅಗತ್ಯದಷ್ಟು ನೀರನ್ನು ಒದಗಿಸದೆ ಇದ್ದಾಗ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ಮೂತ್ರಪಿಂಡಗಳು ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಧಣಿವು, ಚರ್ಮ ಒಣಗುವುದು, ತಲೆ ನೋವು ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ ಆಗಾಗ ನೀರು ಕುಡಿಯುತ್ತಿರುವುದು ಉತ್ತಮ.</p><p><strong>ನಿರ್ಜಲೀಕರಣದ ಲಕ್ಷಣಗಳು:</strong></p><ul><li><p>ಬಾಯಿ ಮತ್ತು ತುಟಿ ಒಣಗುವುದು</p></li><li><p>ಮೂತ್ರ ಗಾಢ ಹಳದಿ ಬಣ್ಣದಲ್ಲಿ ಇರುವುದು</p></li><li><p>ಆಯಾಸ ಅಥವಾ ದುರ್ಬಲತೆ</p></li><li><p>ತಲೆನೋವು</p></li></ul><p><strong>ಉಷ್ಣಾಘಾತ</strong> </p><p>ದೇಹದ ಉಷ್ಣಾಂಶ ಅತಿಯಾಗಿ ಏರಿಕೆಯಾಗಿ, ದೇಹವು ತನ್ನಿಂದ ತಾನೇ ಸಹಜ ಸ್ಥಿತಿಗೆ ತಲುಪಲು ಸಾಧ್ಯವಾಗದ ಗಂಭೀರ ಸ್ಥಿತಿಯೇ ಉಷ್ಣಾಘಾತವಾಗಿದೆ.</p><p><strong>ಲಕ್ಷಣಗಳು:</strong></p><ul><li><p>ದೇಹದ ಉಷ್ಣಾಂಶ ಅಧಿಕವಾಗುವುದು</p></li><li><p>ಚರ್ಮ ಒಣಗಿರುವ (ಕೆಲವೊಮ್ಮೆ ಬೆವರು ಬರದಿರುವುದು)</p></li><li><p>ಅತಿಯಾದ ತಲೆ ತಿರುಗುವಿಕೆ</p></li><li><p>ವಾಕರಿಕೆ ಅಥವಾ ವಾಂತಿ</p></li><li><p>ಹೃದಯ ಬಡಿತ ಹೆಚ್ಚಾಗುವುದು</p></li><li><p>ಮೂರ್ಛೆ ಹೋಗುವುದು</p></li></ul><p><strong>ಬೇಸಿಗೆ ಬಿಸಿಲಿನಲ್ಲಿನ ಸುರಕ್ಷತಾ ಕ್ರಮಗಳು</strong></p><ul><li><p>ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ</p></li><li><p>ಅಧಿಕ ಬಿಸಿಲಿರುವ ವೇಳೆ ಹೊರಗೆ ಹೋಗುವುದನ್ನು ತಪ್ಪಿಸಿ</p></li><li><p>ಹಗುರ ಮತ್ತು ಗಾಳಿಯಾಡುವ ಬಟ್ಟೆ ಧರಿಸಿ</p></li><li><p>ನೀರಿನಾಂಶವುಳ್ಳ ಹಣ್ಣುಗಳನ್ನು ಸೇವಿಸಿ</p></li><li><p>ಲಘುವಾದ ಆಹಾರ ಸೇವಿಸಿ</p></li><li><p>ಸನ್ಸ್ಕ್ರೀನ್ ಬಳಸಿ</p></li><li><p>ಕಣ್ಣಿನ ರಕ್ಷಣೆಗೆ ಸನ್ ಗ್ಲಾಸ್ ಬಳಕೆ ಮಾಡಿ</p></li></ul><p>ಒಂದು ವೇಳೆ ನೀರು ಕುಡಿದರೂ ನಿರ್ಜಲೀಕರಣದ ಲಕ್ಷಣಗಳು ಕಡಿಮೆಯಾಗದಿರುವುದು, ಗೊಂದಲ, ಮೂರ್ಛೆ ಅಥವಾ ದೇಹದ ಉಷ್ಣಾಂಶ ಹೆಚ್ಚಾಗುವುದು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.</p>.<p><strong>ಲೇಖಕರು: ಡಾ. ಬಸವರಾಜ್ ಎಸ್ ಕುಂಬಾರ್, ಸಲಹಾ ತಜ್ಞರು, ಆಂತರಿಕ ವೈದ್ಯಕೀಯ ವಿಭಾಗ, ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>