<p>ಗರ್ಭಾವಸ್ಥೆಯನ್ನು ಒಂದು ಸುಂದರ ಪ್ರಯಾಣ ಎಂದು ಹೇಳಲಾಗುತ್ತದೆ. ಆದರೆ, ವೈದ್ಯಕೀಯ ದೃಷ್ಟಿಕೋನದಿಂದ ನೋಡಿದರೆ ಇದು ಮಹಿಳೆಯ ಜೀವನದ ಅತ್ಯಂತ ಸೂಕ್ಷ್ಮ ಹಂತ. ಗರ್ಭಧಾರಣೆ ಖಚಿತವಾದಾಗಿನಿಂದ ಹೆರಿಗೆಯ ನಂತರದವರೆಗೂ ಮಹಿಳೆಯ ದೇಹವು ಹಾರ್ಮೋನ್, ಚಯಾಪಚಯ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತದೆ. ಗರ್ಭಧಾರಣೆಯ ಮೊದಲ ಎಂಟು ತಿಂಗಳುಗಳು ಅತ್ಯಂತ ಮಹತ್ವದ್ದು. ಏಕೆಂದರೆ ಈ ಅವಧಿಯಲ್ಲಿ ಮಗುವಿನ ಅಂಗಾಂಗಗಳು ರೂಪುಗೊಳ್ಳುತ್ತವೆ, ಮೆದುಳು ಬೆಳೆಯುತ್ತದೆ ಮತ್ತು ತಾಯಿಯ ದೇಹವು ಭ್ರೂಣದ ಬೆಳವಣಿಗೆಯ ವಿವಿಧ ಹಂತಗಳಿಗೆ ನಿರಂತರವಾಗಿ ಸಜ್ಜಾಗುತ್ತಿರುತ್ತದೆ.</p><p>ಗರ್ಭಿಣಿಯರಿಗೆ ರಕ್ತಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ ಉಂಟಾಗುವುದು ಮತ್ತು ಅವಧಿಪೂರ್ವ ಹೆರಿಗೆಯ ಅಪಾಯ ಉಂಟಾಗುವುದನ್ನು ತಪ್ಪಿಸಬೇಕಾಗಿರುವುದರಿಂದ ಈ ಅವಧಿಯು ಬಹಳ ಮುಖ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಗೆ ಸಿಗುವ ಆರೈಕೆಯು ಆಕೆಯ ಆರೋಗ್ಯವನ್ನು ಮಾತ್ರವಲ್ಲದೆ, ಹುಟ್ಟಲಿರುವ ಮಗುವಿನ ಆರೋಗ್ಯವನ್ನೂ ನಿರ್ಧರಿಸುತ್ತದೆ.</p>.ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದು ಸಹಜವೇ? ಹೀಗೆನ್ನುತ್ತಾರೆ ವೈದ್ಯರು. <p><strong>ಪೌಷ್ಟಿಕಾಂಶ: ಆರಂಭಿಕ ಹಂತ</strong></p><p>ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳನ್ನು (ಮೊದಲ ತ್ರೈಮಾಸಿಕ) ಅತ್ಯಂತ ಪ್ರಮುಖ ಆರಂಭಿಕ ಹಂತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಈ ಹಂತದಲ್ಲೇ ಗರ್ಭಧಾರಣೆಯು ಖಚಿತವಾಗುತ್ತದೆ ಮತ್ತು ಭ್ರೂಣದ ಬೆಳವಣಿಗೆ ಆರಂಭವಾಗುತ್ತದೆ. ಮಗುವಿನ ಮೆದುಳು, ಹೃದಯ, ಬೆನ್ನುಹುರಿ ಮತ್ತು ಪ್ರಮುಖ ಅಂಗಾಂಗಗಳ ರಚನೆಯು ಈ ಅವಧಿಯಲ್ಲೇ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಗರ್ಭಿಣಿಯರು ತಮ್ಮ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಮೊದಲ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಹಾಗೂ ರಕ್ತಹೀನತೆ, ಥೈರಾಯ್ಡ್ ಮತ್ತು ಸೋಂಕುಗಳನ್ನು ಪತ್ತೆಹಚ್ಚುವ ರಕ್ತ ಪರೀಕ್ಷೆಗಳಿಗೆ ಒಳಗಾಗುವುದು ಅತ್ಯಗತ್ಯ.</p><p><strong>ಈ ಆರಂಭಿಕ ಹಂತದ ಅತ್ಯಂತ ಪ್ರಮುಖ ಅಂಶವೆಂದರೆ ಪೌಷ್ಟಿಕಾಂಶ</strong></p><p>ಈ ಆರಂಭಿಕ ಹಂತದ ಅತ್ಯಂತ ಪ್ರಮುಖ ಅಂಶವೆಂದರೆ ಪೌಷ್ಟಿಕಾಂಶ. ಮಗುವಿನಲ್ಲಿ ನರಮಂಡಲದ ದೋಷಗಳನ್ನು ತಡೆಗಟ್ಟಲು ವೈದ್ಯರು ಸಾಮಾನ್ಯವಾಗಿ ಗರ್ಭಧಾರಣೆಯ ಆರಂಭದಲ್ಲಿ ‘ಫೋಲಿಕ್ ಆಸಿಡ್‘ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ ಗರ್ಭಿಣಿಯರು ಸಮತೋಲಿತ ಆಹಾರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅವರ ಆಹಾರದಲ್ಲಿ ಸೊಪ್ಪು, ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಡೈರಿ ಉತ್ಪನ್ನಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಬೇಳೆಕಾಳುಗಳು, ಮೊಟ್ಟೆ, ಮಾಂಸ ಮುಂತಾದವುಗಳನ್ನು ಒಳಗೊಂಡಿರಬೇಕು.</p><p>ಈ ಹಂತದಲ್ಲಿ ವಾಕರಿಕೆ, ಸ್ತನಗಳ ಮೃದುತ್ವ, ಆಯಾಸ ಮತ್ತು ಮಲಬದ್ಧತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ, ಒಮ್ಮೆಗೆ ಅತಿಯಾಗಿ ತಿನ್ನುವ ಬದಲು ಅಲ್ಪ ಪ್ರಮಾಣದಲ್ಲಿ ಆಗಾಗ ಆಹಾರ ಸೇವಿಸುವುದು ಸೂಕ್ತ. ಇದರೊಂದಿಗೆ ಸಾಕಷ್ಟು ನೀರು ಕುಡಿಯುವುದು ಮತ್ತು ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸುವುದು ಮುಖ್ಯ. ಗರ್ಭಿಣಿಯರಿಗೆ ಸಾಮಾನ್ಯವಾಗಿ ಸಂಸ್ಕರಿಸದ ಹಾಲಿನ ಉತ್ಪನ್ನಗಳು ಮತ್ತು ಕೆಫೀನ್ (ಕಾಫಿ/ ಟೀ) ಸೇವಿಸದಂತೆ ಸಲಹೆ ನೀಡಲಾಗುತ್ತದೆ.</p><p><strong>ಸ್ಥಿರತೆ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ನೆಮ್ಮದಿ</strong></p><p>ನಾಲ್ಕನೇ ತಿಂಗಳಿನಿಂದ ಆರನೇ ತಿಂಗಳವರೆಗಿನ ಅವಧಿಯನ್ನು (ಎರಡನೇ ತ್ರೈಮಾಸಿಕ) ಗರ್ಭಾವಸ್ಥೆಯ ಅತ್ಯಂತ ಸ್ಥಿರವಾದ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ಆರಂಭದ ಹಂತದಲ್ಲಿದ್ದ ವಾಕರಿಕೆ ಮತ್ತು ಆಯಾಸದಂತಹ ಲಕ್ಷಣಗಳು ಕಡಿಮೆಯಾಗುತ್ತವೆ ಮತ್ತು ತಾಯಿಗೆ ಮಗುವಿನ ಮೊದಲ ಚಲನೆಯ ಅನುಭವವಾಗುತ್ತದೆ. ಆದರೆ, ಇದು ಭ್ರೂಣವು ವೇಗವಾಗಿ ಬೆಳೆಯುವ ಅವಧಿಯಾದ್ದರಿಂದ, ತಾಯಿಯ ಪೌಷ್ಟಿಕಾಂಶದ ಅಗತ್ಯತೆಗಳೂ ಸಹ ಅದಕ್ಕೆ ತಕ್ಕಂತೆ ಇರಬೇಕು.</p><p>ಮಗುವಿನ ಮೂಳೆಗಳ ಉತ್ತಮ ಬೆಳವಣಿಗೆಗಾಗಿ ಮತ್ತು ತಾಯಿಯಲ್ಲಿ ರಕ್ತಹೀನತೆಯನ್ನು ತಡೆಗಟ್ಟಲು ವೈದ್ಯರು ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಈ ಅವಧಿಯಲ್ಲಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ, ಥೈರಾಯ್ಡ್, ತೂಕದ ಹೆಚ್ಚಳ ಮತ್ತು ಇತರ ಯಾವುದೇ ಸಮಸ್ಯೆಗಳನ್ನು ಪತ್ತೆಹಚ್ಚಲು ನಿಯಮಿತ ತಪಾಸಣೆಗಳು ಅತ್ಯಂತ ಮುಖ್ಯವಾಗಿವೆ. ಐದನೇ ತಿಂಗಳಲ್ಲಿ ಮಗುವಿನ ಅಂಗಾಂಗಗಳ ಬೆಳವಣಿಗೆಯನ್ನು ಪರೀಕ್ಷಿಸಲು ‘ಅನಾಮಲಿ ಸ್ಕ್ಯಾನ್‘ ಕೂಡ ಮಾಡಲಾಗುತ್ತದೆ.</p><p>ಈ ಹಂತದಲ್ಲಿ ಮಹಿಳೆಯರು ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಡಿಗೆ, ಪ್ರಸವಪೂರ್ವ ಯೋಗ ಮತ್ತು ಹಗುರವಾದ ವ್ಯಾಯಾಮಗಳು ರಕ್ತ ಪರಿಚಲನೆಯನ್ನು ಸುಧಾರಿಸಲು ಹಾಗೂ ಬೆನ್ನು ಅಥವಾ ಕಾಲು ನೋವಿನಂತಹ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅನೇಕ ಮಹಿಳೆಯರು ಈ ಸಮಯದಲ್ಲಿ ಮೂಡ್ ಸ್ವಿಂಗ್ಸ್ ಮತ್ತು ಹೆರಿಗೆಯ ಪ್ರಕ್ರಿಯೆಯ ಬಗ್ಗೆ ಆತಂಕವನ್ನು ಅನುಭವಿಸಬಹುದು. ಅಂತಹ ಸಮಯದಲ್ಲಿ ಅವರ ಮಾನಸಿಕ ನೆಮ್ಮದಿಯನ್ನು ಕಾಪಾಡಲು ಕುಟುಂಬದ ಬೆಂಬಲ ಬಹಳ ಅವಶ್ಯಕ.</p><p><strong>ವೇಗದ ಬೆಳವಣಿಗೆಗೆ ನೆರವಾಗುವ ಪೌಷ್ಟಿಕಾಂಶಗಳು</strong> </p><p>ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ, ವಿಶೇಷವಾಗಿ ಏಳನೇ ಮತ್ತು ಎಂಟನೇ ತಿಂಗಳುಗಳಲ್ಲಿ ಮಗುವಿನ ಬೆಳವಣಿಗೆಯು ಅತ್ಯಂತ ವೇಗವಾಗಿ ನಡೆಯುತ್ತದೆ. ಈ ಸಮಯದಲ್ಲಿ ಗರ್ಭಾಶಯವು ವಿಸ್ತರಿಸುತ್ತಾ ಹೋಗುವುದರಿಂದ ಮಹಿಳೆಯ ದೇಹದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು ಹೆಚ್ಚಿನ ಒತ್ತಡವನ್ನು ನೀಡುತ್ತವೆ. ಹೆಚ್ಚಿನ ಮಹಿಳೆಯರು ಈ ಹಂತದಲ್ಲಿ ಬೆನ್ನು ನೋವು, ಪಾದಗಳ ಬಾವು ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುತ್ತದೆ. ಗರ್ಭಿಣಿಯರಿಗೆ ಎಡಭಾಗಕ್ಕೆ ಮಗ್ಗುಲಾಗಿ ಮಲಗಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ರಕ್ತವು ಸುಲಭವಾಗಿ ಪ್ಲೆಸೆಂಟಾ ಮೂಲಕ ಹಾದುಹೋಗಲು ಮತ್ತು ಮಗುವಿಗೆ ಸಾಕಷ್ಟು ಆಮ್ಲಜನಕ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ಪೌಷ್ಟಿಕಾಂಶ ಸೇವನೆ ಮತ್ತು ನಿರ್ವಹಣೆ ಪ್ರಮುಖ ಆದ್ಯತೆಯಾಗಿರುತ್ತದೆ.</p><p>ಮಗುವಿನ ಒಟ್ಟಾರೆ ಬೆಳವಣಿಗೆಗೆ ಹೆಚ್ಚಿನ ಪ್ರೋಟೀನ್ ಮತ್ತು ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಗರ್ಭಾಶಯದಲ್ಲಿನ ಆಮ್ನಿಯೋಟಿಕ್ ದ್ರವದ (ಮಗು ಇರುವ ನೀರಿನಾಂಶ) ಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ಮಲಬದ್ಧತೆಯನ್ನು ತಪ್ಪಿಸುವುದು ಬಹಳ ಮುಖ್ಯ. ಈ ಹಂತದಲ್ಲಿ ವೈದ್ಯರು ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ತಪಾಸಣೆಗಳನ್ನು ಮಾಡಬಹುದು. ಇವು ಯಾವುದೇ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳಬಹುದು ಮತ್ತು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚದಿದ್ದರೆ ತಾಯಿ ಹಾಗೂ ಮಗುವಿಗೆ ಗಂಭೀರ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.</p><p><strong>ಹೆರಿಗೆಗೆ ಸಿದ್ಧತೆ</strong></p><p>ಗರ್ಭಾವಸ್ಥೆಯನ್ನು ಯಾವ ಕಾರಣಕ್ಕೂ ಅಸಡ್ಡೆಯಿಂದ ಕಾಣಬಾರದು. ಗರ್ಭಾವಸ್ಥೆಯ ಸಂಪೂರ್ಣ ಅವಧಿಯಲ್ಲಿ ತಾಯಿ-ಮಗುವಿನ ಆರೈಕೆಗಾಗಿ ಇರುವ ವೈದ್ಯಕೀಯ ಪದ್ಧತಿಗಳ ಪ್ರಕಾರ, ಭ್ರೂಣದ ಚಲನೆ ಮತ್ತು ತಾಯಿಯ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಸೋಂಕುಗಳಿಂದ ತಮ್ಮನ್ನು ಮತ್ತು ತಮ್ಮ ಮಗುವನ್ನು ರಕ್ಷಿಸಿಕೊಳ್ಳಲು ಮಹಿಳೆಯರು ವೈದ್ಯರು ಶಿಫಾರಸು ಮಾಡುವ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಬೇಕು. ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಭ್ರೂಣದ ಚಲನೆ ಕಡಿಮೆಯಾದಲ್ಲಿ, ಮಹಿಳೆಯರು ತಕ್ಷಣವೇ ತಮ್ಮ ವೈದ್ಯರ ಸಲಹೆಯನ್ನು ಪಡೆಯಬೇಕು.</p><p>ಹೆರಿಗೆಗೆ ದೈಹಿಕ ಮತ್ತು ಭಾವನಾತ್ಮಕವಾಗಿ ಸಿದ್ಧವಾಗುವ ಪ್ರಕ್ರಿಯೆಯು ಬಹಳ ಮುಖ್ಯ. ಇದರಿಂದ ಮಹಿಳೆಯು ಈ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಏಳು ಮತ್ತು ಎಂಟನೇ ತಿಂಗಳುಗಳಲ್ಲಿ ಮಾಡುವ ಪ್ರಸವಪೂರ್ವ ಸಮಾಲೋಚನೆಗಳು ಹೆರಿಗೆಯ ಲಕ್ಷಣಗಳು, ಸ್ತನ್ಯಪಾನ ತಂತ್ರಗಳು ಮತ್ತು ನವಜಾತ ಶಿಶುವಿನ ಆರೈಕೆಯ ಬಗ್ಗೆ ತಿಳಿಯಲು ಸಹಕಾರಿಯಾಗಿವೆ. ಹೆರಿಗೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ, ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಲು ಮತ್ತು ಅಲ್ಲಿನ ವಾಸ್ತವ್ಯಕ್ಕೆ ಸಿದ್ಧರಾಗಬೇಕು. ಜೊತೆಗೆ ತುರ್ತು ಸಂದರ್ಭ ಎದುರಾದರೆ ಅಗತ್ಯವಿರುವ ಸಹಾಯದ ಬಗ್ಗೆಯೂ ತಿಳಿದುಕೊಂಡಿರಬೇಕು.</p><p>ಗರ್ಭಧಾರಣೆಯ ಎಂಟು ತಿಂಗಳುಗಳು ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ಸವಾಲಿನಿಂದ ಕೂಡಿರುತ್ತವೆ. ಆದ್ದರಿಂದ, ಗರ್ಭಿಣಿಯರು ಉತ್ತಮ ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಪೂರಕವಾದ ವಾತಾವರಣ ಹೊಂದಿರುವುದು ಬಹಳ ಮುಖ್ಯ. ಸಮತೋಲಿತ ಆಹಾರ, ಸಮಯಕ್ಕೆ ಸರಿಯಾದ ವೈದ್ಯಕೀಯ ಆರೈಕೆ, ದೈಹಿಕ ವ್ಯಾಯಾಮ ಮತ್ತು ಕುಟುಂಬದ ಬೆಂಬಲವು ಸಂತೋಷಕರ ಮತ್ತು ಆರೋಗ್ಯಕರ ಗರ್ಭಧಾರಣೆಗೆ ಅತ್ಯಗತ್ಯವಾಗಿದೆ. </p>.<p><strong>ಮಾಹಿತಿ:</strong> ಡಾ. ಸಪ್ನಾ ರೈನಾ, ಸೀನಿಯರ್ ಕನ್ಸಲ್ಟೆಂಟ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗರ್ಭಾವಸ್ಥೆಯನ್ನು ಒಂದು ಸುಂದರ ಪ್ರಯಾಣ ಎಂದು ಹೇಳಲಾಗುತ್ತದೆ. ಆದರೆ, ವೈದ್ಯಕೀಯ ದೃಷ್ಟಿಕೋನದಿಂದ ನೋಡಿದರೆ ಇದು ಮಹಿಳೆಯ ಜೀವನದ ಅತ್ಯಂತ ಸೂಕ್ಷ್ಮ ಹಂತ. ಗರ್ಭಧಾರಣೆ ಖಚಿತವಾದಾಗಿನಿಂದ ಹೆರಿಗೆಯ ನಂತರದವರೆಗೂ ಮಹಿಳೆಯ ದೇಹವು ಹಾರ್ಮೋನ್, ಚಯಾಪಚಯ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತದೆ. ಗರ್ಭಧಾರಣೆಯ ಮೊದಲ ಎಂಟು ತಿಂಗಳುಗಳು ಅತ್ಯಂತ ಮಹತ್ವದ್ದು. ಏಕೆಂದರೆ ಈ ಅವಧಿಯಲ್ಲಿ ಮಗುವಿನ ಅಂಗಾಂಗಗಳು ರೂಪುಗೊಳ್ಳುತ್ತವೆ, ಮೆದುಳು ಬೆಳೆಯುತ್ತದೆ ಮತ್ತು ತಾಯಿಯ ದೇಹವು ಭ್ರೂಣದ ಬೆಳವಣಿಗೆಯ ವಿವಿಧ ಹಂತಗಳಿಗೆ ನಿರಂತರವಾಗಿ ಸಜ್ಜಾಗುತ್ತಿರುತ್ತದೆ.</p><p>ಗರ್ಭಿಣಿಯರಿಗೆ ರಕ್ತಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ ಉಂಟಾಗುವುದು ಮತ್ತು ಅವಧಿಪೂರ್ವ ಹೆರಿಗೆಯ ಅಪಾಯ ಉಂಟಾಗುವುದನ್ನು ತಪ್ಪಿಸಬೇಕಾಗಿರುವುದರಿಂದ ಈ ಅವಧಿಯು ಬಹಳ ಮುಖ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಗೆ ಸಿಗುವ ಆರೈಕೆಯು ಆಕೆಯ ಆರೋಗ್ಯವನ್ನು ಮಾತ್ರವಲ್ಲದೆ, ಹುಟ್ಟಲಿರುವ ಮಗುವಿನ ಆರೋಗ್ಯವನ್ನೂ ನಿರ್ಧರಿಸುತ್ತದೆ.</p>.ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದು ಸಹಜವೇ? ಹೀಗೆನ್ನುತ್ತಾರೆ ವೈದ್ಯರು. <p><strong>ಪೌಷ್ಟಿಕಾಂಶ: ಆರಂಭಿಕ ಹಂತ</strong></p><p>ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳನ್ನು (ಮೊದಲ ತ್ರೈಮಾಸಿಕ) ಅತ್ಯಂತ ಪ್ರಮುಖ ಆರಂಭಿಕ ಹಂತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಈ ಹಂತದಲ್ಲೇ ಗರ್ಭಧಾರಣೆಯು ಖಚಿತವಾಗುತ್ತದೆ ಮತ್ತು ಭ್ರೂಣದ ಬೆಳವಣಿಗೆ ಆರಂಭವಾಗುತ್ತದೆ. ಮಗುವಿನ ಮೆದುಳು, ಹೃದಯ, ಬೆನ್ನುಹುರಿ ಮತ್ತು ಪ್ರಮುಖ ಅಂಗಾಂಗಗಳ ರಚನೆಯು ಈ ಅವಧಿಯಲ್ಲೇ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಗರ್ಭಿಣಿಯರು ತಮ್ಮ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಮೊದಲ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಹಾಗೂ ರಕ್ತಹೀನತೆ, ಥೈರಾಯ್ಡ್ ಮತ್ತು ಸೋಂಕುಗಳನ್ನು ಪತ್ತೆಹಚ್ಚುವ ರಕ್ತ ಪರೀಕ್ಷೆಗಳಿಗೆ ಒಳಗಾಗುವುದು ಅತ್ಯಗತ್ಯ.</p><p><strong>ಈ ಆರಂಭಿಕ ಹಂತದ ಅತ್ಯಂತ ಪ್ರಮುಖ ಅಂಶವೆಂದರೆ ಪೌಷ್ಟಿಕಾಂಶ</strong></p><p>ಈ ಆರಂಭಿಕ ಹಂತದ ಅತ್ಯಂತ ಪ್ರಮುಖ ಅಂಶವೆಂದರೆ ಪೌಷ್ಟಿಕಾಂಶ. ಮಗುವಿನಲ್ಲಿ ನರಮಂಡಲದ ದೋಷಗಳನ್ನು ತಡೆಗಟ್ಟಲು ವೈದ್ಯರು ಸಾಮಾನ್ಯವಾಗಿ ಗರ್ಭಧಾರಣೆಯ ಆರಂಭದಲ್ಲಿ ‘ಫೋಲಿಕ್ ಆಸಿಡ್‘ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ ಗರ್ಭಿಣಿಯರು ಸಮತೋಲಿತ ಆಹಾರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅವರ ಆಹಾರದಲ್ಲಿ ಸೊಪ್ಪು, ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಡೈರಿ ಉತ್ಪನ್ನಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಬೇಳೆಕಾಳುಗಳು, ಮೊಟ್ಟೆ, ಮಾಂಸ ಮುಂತಾದವುಗಳನ್ನು ಒಳಗೊಂಡಿರಬೇಕು.</p><p>ಈ ಹಂತದಲ್ಲಿ ವಾಕರಿಕೆ, ಸ್ತನಗಳ ಮೃದುತ್ವ, ಆಯಾಸ ಮತ್ತು ಮಲಬದ್ಧತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ, ಒಮ್ಮೆಗೆ ಅತಿಯಾಗಿ ತಿನ್ನುವ ಬದಲು ಅಲ್ಪ ಪ್ರಮಾಣದಲ್ಲಿ ಆಗಾಗ ಆಹಾರ ಸೇವಿಸುವುದು ಸೂಕ್ತ. ಇದರೊಂದಿಗೆ ಸಾಕಷ್ಟು ನೀರು ಕುಡಿಯುವುದು ಮತ್ತು ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸುವುದು ಮುಖ್ಯ. ಗರ್ಭಿಣಿಯರಿಗೆ ಸಾಮಾನ್ಯವಾಗಿ ಸಂಸ್ಕರಿಸದ ಹಾಲಿನ ಉತ್ಪನ್ನಗಳು ಮತ್ತು ಕೆಫೀನ್ (ಕಾಫಿ/ ಟೀ) ಸೇವಿಸದಂತೆ ಸಲಹೆ ನೀಡಲಾಗುತ್ತದೆ.</p><p><strong>ಸ್ಥಿರತೆ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ನೆಮ್ಮದಿ</strong></p><p>ನಾಲ್ಕನೇ ತಿಂಗಳಿನಿಂದ ಆರನೇ ತಿಂಗಳವರೆಗಿನ ಅವಧಿಯನ್ನು (ಎರಡನೇ ತ್ರೈಮಾಸಿಕ) ಗರ್ಭಾವಸ್ಥೆಯ ಅತ್ಯಂತ ಸ್ಥಿರವಾದ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ಆರಂಭದ ಹಂತದಲ್ಲಿದ್ದ ವಾಕರಿಕೆ ಮತ್ತು ಆಯಾಸದಂತಹ ಲಕ್ಷಣಗಳು ಕಡಿಮೆಯಾಗುತ್ತವೆ ಮತ್ತು ತಾಯಿಗೆ ಮಗುವಿನ ಮೊದಲ ಚಲನೆಯ ಅನುಭವವಾಗುತ್ತದೆ. ಆದರೆ, ಇದು ಭ್ರೂಣವು ವೇಗವಾಗಿ ಬೆಳೆಯುವ ಅವಧಿಯಾದ್ದರಿಂದ, ತಾಯಿಯ ಪೌಷ್ಟಿಕಾಂಶದ ಅಗತ್ಯತೆಗಳೂ ಸಹ ಅದಕ್ಕೆ ತಕ್ಕಂತೆ ಇರಬೇಕು.</p><p>ಮಗುವಿನ ಮೂಳೆಗಳ ಉತ್ತಮ ಬೆಳವಣಿಗೆಗಾಗಿ ಮತ್ತು ತಾಯಿಯಲ್ಲಿ ರಕ್ತಹೀನತೆಯನ್ನು ತಡೆಗಟ್ಟಲು ವೈದ್ಯರು ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಈ ಅವಧಿಯಲ್ಲಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ, ಥೈರಾಯ್ಡ್, ತೂಕದ ಹೆಚ್ಚಳ ಮತ್ತು ಇತರ ಯಾವುದೇ ಸಮಸ್ಯೆಗಳನ್ನು ಪತ್ತೆಹಚ್ಚಲು ನಿಯಮಿತ ತಪಾಸಣೆಗಳು ಅತ್ಯಂತ ಮುಖ್ಯವಾಗಿವೆ. ಐದನೇ ತಿಂಗಳಲ್ಲಿ ಮಗುವಿನ ಅಂಗಾಂಗಗಳ ಬೆಳವಣಿಗೆಯನ್ನು ಪರೀಕ್ಷಿಸಲು ‘ಅನಾಮಲಿ ಸ್ಕ್ಯಾನ್‘ ಕೂಡ ಮಾಡಲಾಗುತ್ತದೆ.</p><p>ಈ ಹಂತದಲ್ಲಿ ಮಹಿಳೆಯರು ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಡಿಗೆ, ಪ್ರಸವಪೂರ್ವ ಯೋಗ ಮತ್ತು ಹಗುರವಾದ ವ್ಯಾಯಾಮಗಳು ರಕ್ತ ಪರಿಚಲನೆಯನ್ನು ಸುಧಾರಿಸಲು ಹಾಗೂ ಬೆನ್ನು ಅಥವಾ ಕಾಲು ನೋವಿನಂತಹ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅನೇಕ ಮಹಿಳೆಯರು ಈ ಸಮಯದಲ್ಲಿ ಮೂಡ್ ಸ್ವಿಂಗ್ಸ್ ಮತ್ತು ಹೆರಿಗೆಯ ಪ್ರಕ್ರಿಯೆಯ ಬಗ್ಗೆ ಆತಂಕವನ್ನು ಅನುಭವಿಸಬಹುದು. ಅಂತಹ ಸಮಯದಲ್ಲಿ ಅವರ ಮಾನಸಿಕ ನೆಮ್ಮದಿಯನ್ನು ಕಾಪಾಡಲು ಕುಟುಂಬದ ಬೆಂಬಲ ಬಹಳ ಅವಶ್ಯಕ.</p><p><strong>ವೇಗದ ಬೆಳವಣಿಗೆಗೆ ನೆರವಾಗುವ ಪೌಷ್ಟಿಕಾಂಶಗಳು</strong> </p><p>ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ, ವಿಶೇಷವಾಗಿ ಏಳನೇ ಮತ್ತು ಎಂಟನೇ ತಿಂಗಳುಗಳಲ್ಲಿ ಮಗುವಿನ ಬೆಳವಣಿಗೆಯು ಅತ್ಯಂತ ವೇಗವಾಗಿ ನಡೆಯುತ್ತದೆ. ಈ ಸಮಯದಲ್ಲಿ ಗರ್ಭಾಶಯವು ವಿಸ್ತರಿಸುತ್ತಾ ಹೋಗುವುದರಿಂದ ಮಹಿಳೆಯ ದೇಹದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು ಹೆಚ್ಚಿನ ಒತ್ತಡವನ್ನು ನೀಡುತ್ತವೆ. ಹೆಚ್ಚಿನ ಮಹಿಳೆಯರು ಈ ಹಂತದಲ್ಲಿ ಬೆನ್ನು ನೋವು, ಪಾದಗಳ ಬಾವು ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುತ್ತದೆ. ಗರ್ಭಿಣಿಯರಿಗೆ ಎಡಭಾಗಕ್ಕೆ ಮಗ್ಗುಲಾಗಿ ಮಲಗಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ರಕ್ತವು ಸುಲಭವಾಗಿ ಪ್ಲೆಸೆಂಟಾ ಮೂಲಕ ಹಾದುಹೋಗಲು ಮತ್ತು ಮಗುವಿಗೆ ಸಾಕಷ್ಟು ಆಮ್ಲಜನಕ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ಪೌಷ್ಟಿಕಾಂಶ ಸೇವನೆ ಮತ್ತು ನಿರ್ವಹಣೆ ಪ್ರಮುಖ ಆದ್ಯತೆಯಾಗಿರುತ್ತದೆ.</p><p>ಮಗುವಿನ ಒಟ್ಟಾರೆ ಬೆಳವಣಿಗೆಗೆ ಹೆಚ್ಚಿನ ಪ್ರೋಟೀನ್ ಮತ್ತು ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಗರ್ಭಾಶಯದಲ್ಲಿನ ಆಮ್ನಿಯೋಟಿಕ್ ದ್ರವದ (ಮಗು ಇರುವ ನೀರಿನಾಂಶ) ಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ಮಲಬದ್ಧತೆಯನ್ನು ತಪ್ಪಿಸುವುದು ಬಹಳ ಮುಖ್ಯ. ಈ ಹಂತದಲ್ಲಿ ವೈದ್ಯರು ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ತಪಾಸಣೆಗಳನ್ನು ಮಾಡಬಹುದು. ಇವು ಯಾವುದೇ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳಬಹುದು ಮತ್ತು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚದಿದ್ದರೆ ತಾಯಿ ಹಾಗೂ ಮಗುವಿಗೆ ಗಂಭೀರ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.</p><p><strong>ಹೆರಿಗೆಗೆ ಸಿದ್ಧತೆ</strong></p><p>ಗರ್ಭಾವಸ್ಥೆಯನ್ನು ಯಾವ ಕಾರಣಕ್ಕೂ ಅಸಡ್ಡೆಯಿಂದ ಕಾಣಬಾರದು. ಗರ್ಭಾವಸ್ಥೆಯ ಸಂಪೂರ್ಣ ಅವಧಿಯಲ್ಲಿ ತಾಯಿ-ಮಗುವಿನ ಆರೈಕೆಗಾಗಿ ಇರುವ ವೈದ್ಯಕೀಯ ಪದ್ಧತಿಗಳ ಪ್ರಕಾರ, ಭ್ರೂಣದ ಚಲನೆ ಮತ್ತು ತಾಯಿಯ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಸೋಂಕುಗಳಿಂದ ತಮ್ಮನ್ನು ಮತ್ತು ತಮ್ಮ ಮಗುವನ್ನು ರಕ್ಷಿಸಿಕೊಳ್ಳಲು ಮಹಿಳೆಯರು ವೈದ್ಯರು ಶಿಫಾರಸು ಮಾಡುವ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಬೇಕು. ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಭ್ರೂಣದ ಚಲನೆ ಕಡಿಮೆಯಾದಲ್ಲಿ, ಮಹಿಳೆಯರು ತಕ್ಷಣವೇ ತಮ್ಮ ವೈದ್ಯರ ಸಲಹೆಯನ್ನು ಪಡೆಯಬೇಕು.</p><p>ಹೆರಿಗೆಗೆ ದೈಹಿಕ ಮತ್ತು ಭಾವನಾತ್ಮಕವಾಗಿ ಸಿದ್ಧವಾಗುವ ಪ್ರಕ್ರಿಯೆಯು ಬಹಳ ಮುಖ್ಯ. ಇದರಿಂದ ಮಹಿಳೆಯು ಈ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಏಳು ಮತ್ತು ಎಂಟನೇ ತಿಂಗಳುಗಳಲ್ಲಿ ಮಾಡುವ ಪ್ರಸವಪೂರ್ವ ಸಮಾಲೋಚನೆಗಳು ಹೆರಿಗೆಯ ಲಕ್ಷಣಗಳು, ಸ್ತನ್ಯಪಾನ ತಂತ್ರಗಳು ಮತ್ತು ನವಜಾತ ಶಿಶುವಿನ ಆರೈಕೆಯ ಬಗ್ಗೆ ತಿಳಿಯಲು ಸಹಕಾರಿಯಾಗಿವೆ. ಹೆರಿಗೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ, ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಲು ಮತ್ತು ಅಲ್ಲಿನ ವಾಸ್ತವ್ಯಕ್ಕೆ ಸಿದ್ಧರಾಗಬೇಕು. ಜೊತೆಗೆ ತುರ್ತು ಸಂದರ್ಭ ಎದುರಾದರೆ ಅಗತ್ಯವಿರುವ ಸಹಾಯದ ಬಗ್ಗೆಯೂ ತಿಳಿದುಕೊಂಡಿರಬೇಕು.</p><p>ಗರ್ಭಧಾರಣೆಯ ಎಂಟು ತಿಂಗಳುಗಳು ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ಸವಾಲಿನಿಂದ ಕೂಡಿರುತ್ತವೆ. ಆದ್ದರಿಂದ, ಗರ್ಭಿಣಿಯರು ಉತ್ತಮ ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಪೂರಕವಾದ ವಾತಾವರಣ ಹೊಂದಿರುವುದು ಬಹಳ ಮುಖ್ಯ. ಸಮತೋಲಿತ ಆಹಾರ, ಸಮಯಕ್ಕೆ ಸರಿಯಾದ ವೈದ್ಯಕೀಯ ಆರೈಕೆ, ದೈಹಿಕ ವ್ಯಾಯಾಮ ಮತ್ತು ಕುಟುಂಬದ ಬೆಂಬಲವು ಸಂತೋಷಕರ ಮತ್ತು ಆರೋಗ್ಯಕರ ಗರ್ಭಧಾರಣೆಗೆ ಅತ್ಯಗತ್ಯವಾಗಿದೆ. </p>.<p><strong>ಮಾಹಿತಿ:</strong> ಡಾ. ಸಪ್ನಾ ರೈನಾ, ಸೀನಿಯರ್ ಕನ್ಸಲ್ಟೆಂಟ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>