<p>ಬೇಸಿಗೆ ಕಾಲವು ಮಕ್ಕಳ ಆರೋಗ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆಯುರ್ವೇದದಲ್ಲಿ ಈ ಕಾಲವನ್ನು ಗ್ರೀಷ್ಮ ಋತು ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ತಾಪಮಾನ ಹೆಚ್ಚಾಗುವುದರಿಂದ ದೇಹದ ದ್ರವಾಂಶ ಕಡಿಮೆಯಾಗುತ್ತದೆ ಮತ್ತು ಪಿತ್ತ ದೋಷ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳಿಗೆ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ.</p><p><strong>ಋತು ಪ್ರಭಾವ ಮತ್ತು ಮಕ್ಕಳ ಆರೋಗ್ಯ</strong></p><p>ಬೇಸಿಗೆಯಲ್ಲಿ ದೇಹದ ಶಕ್ತಿ ನಿಧಾನವಾಗಿ ಕುಗ್ಗುತ್ತದೆ. ಹೆಚ್ಚು ಬಿಸಿಲು, ಬೆವರು ಮತ್ತು ನೀರಿನ ಕೊರತೆಯಿಂದ ಮಕ್ಕಳು ದೌರ್ಬಲ್ಯ, ದಾಹ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ಅನುಭವಿಸಬಹುದು.</p>.<p><strong>ಮಕ್ಕಳಿಗೆ ಯಾವ ರೀತಿಯ ಆಹಾರ ಕೊಡಬೇಕು?</strong></p><p><strong>ದ್ರವ ಪದಾರ್ಥಗಳು:</strong> ತೆಂಗಿನಕಾಯಿ ನೀರು, ಮಜ್ಜಿಗೆ, ಹಣ್ಣಿನ ರಸ, ರಾಗಿ ಅಂಬಲಿ. ಇವುಗಳು ಮಕ್ಕಳ ದೇಹವನ್ನು ತಂಪಾಗಿಸುತ್ತವೆ.</p><p><strong>ಹಣ್ಣುಗಳು:</strong> ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಪಪ್ಪಾಯಿ, ಬಾಳೆಹಣ್ಣು. ಇವುಗಳು ದೇಹಕ್ಕೆ ತಂಪು ನೀಡುತ್ತವೆ ಮತ್ತು ಪಿತ್ತ ಶಮನ ಮಾಡುತ್ತವೆ.</p><p><strong>ತರಕಾರಿಗಳು:</strong> ಸೌತೆಕಾಯಿ, ಸೋರೆಕಾಯಿ, ಕುಂಬಳಕಾಯಿ. ಇವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ದೇಹವನ್ನು ತಂಪಾಗಿಸುತ್ತವೆ.</p><p><strong>ಹಗುರ ಆಹಾರ:</strong> ಅನ್ನ, ಇಡ್ಲಿ, ಉಪ್ಪಿಟ್ಟು, ಮೊಸರನ್ನ. ಇವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ದೇಹಕ್ಕೆ ಅಗತ್ಯವಾದ ಶಕ್ತಿ ನೀಡುತ್ತವೆ.</p><p><strong>ಧಾನ್ಯಗಳು:</strong> ಅಕ್ಕಿ, ಗೋಧಿ, ರಾಗಿ ಸುಲಭವಾಗಿ ಜೀರ್ಣವಾಗುವ ಆಹಾರಗಳಾಗಿವೆ.</p><p><strong>ಹಾಲು ಉತ್ಪನ್ನಗಳು:</strong> ಹಾಲು, ಮಜ್ಜಿಗೆ, ತುಪ್ಪ. ಇವುಗಳು ದೇಹಕ್ಕೆ ಪೋಷಣೆ ಮತ್ತು ಶೀತಲತೆ ನೀಡುತ್ತವೆ.</p><p><strong>ಸಾತ್ವಿಕ ಆಹಾರ:</strong> ಕಿಚಡಿ, ಕಡಿಮೆ ಮಸಾಲೆಯುಕ್ತ ಆಹಾರ, ತರಕಾರಿ ಪದಾರ್ಥಗಳು ಮಕ್ಕಳಿಗೆ ಸೂಕ್ತ.</p><p><strong>ಪ್ರೋಟೀನ್ ಆಹಾರ:</strong> ಹಾಲು, ಮೊಸರು, ಮೊಟ್ಟೆ, ಹೆಸರಕಾಳು, ಕಡಲೆಕಾಳು. ಇವುಗಳು ದೇಹದ ಬೆಳವಣಿಗೆಗೆ ಸಹಕಾರಿ.</p><p><strong>ಯಾವ ಆಹಾರ ತಪ್ಪಿಸಬೇಕು?</strong></p><p>ಹೆಚ್ಚು ಕಾರ, ಮಸಾಲೆ, ಎಣ್ಣೆಯುಕ್ತ ಆಹಾರ, ಪಾನೀಯಗಳಿಂದ ದೂರವಿಡಬೇಕು. ಇವು ಪಿತ್ತವನ್ನು ಹೆಚ್ಚಿಸಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.</p>.<p><strong>ಪೋಷಕರಿಗೆ ಸಲಹೆಗಳು</strong></p><p>• ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ಹೆಚ್ಚು ಹೊತ್ತು ಆಟವಾಡಲು ಬಿಡಬೇಡಿ</p><p>• ಬೆಳಗ್ಗೆ ಮತ್ತು ಸಂಜೆ ಆಟವಾಡಲು ಪ್ರೋತ್ಸಾಹಿಸಿ </p><p>• ದಿನಪೂರ್ತಿ ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಿ</p><p>• ದಿನಕ್ಕೆ 3–4 ಬಾರಿ ಲಘು ಆಹಾರ ನೀಡಿರಿ </p><p>ಒಟ್ಟಾರೆಯಾಗಿ ಸರಿಯಾದ ಆಹಾರ ಮತ್ತು ಜೀವನ ಶೈಲಿಯಿಂದ ಬೇಸಿಗೆಯಲ್ಲಿ ಮಕ್ಕಳ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು. ಆಯುರ್ವೇದದ ಸರಳ ನಿಯಮಗಳನ್ನು ಅನುಸರಿಸುವುದು ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿ. ಆರೋಗ್ಯವೇ ಸಂಪತ್ತು. ಮಕ್ಕಳಿಗೆ ಸೂಕ್ತ ಆಹಾರ ನೀಡುವುದು ಪೋಷಕರ ಜವಾಬ್ದಾರಿ.</p>.<p><em><strong>(ಲೇಖಕರು: ಡಾ. ವಿಜಯಲಕ್ಷ್ಮಿ ಎಸ್. ಮಲ್ಲಣ್ಣವರ, ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರು, ಆಯುರ್ವೇದ ಮಕ್ಕಳ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇಸಿಗೆ ಕಾಲವು ಮಕ್ಕಳ ಆರೋಗ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆಯುರ್ವೇದದಲ್ಲಿ ಈ ಕಾಲವನ್ನು ಗ್ರೀಷ್ಮ ಋತು ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ತಾಪಮಾನ ಹೆಚ್ಚಾಗುವುದರಿಂದ ದೇಹದ ದ್ರವಾಂಶ ಕಡಿಮೆಯಾಗುತ್ತದೆ ಮತ್ತು ಪಿತ್ತ ದೋಷ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳಿಗೆ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ.</p><p><strong>ಋತು ಪ್ರಭಾವ ಮತ್ತು ಮಕ್ಕಳ ಆರೋಗ್ಯ</strong></p><p>ಬೇಸಿಗೆಯಲ್ಲಿ ದೇಹದ ಶಕ್ತಿ ನಿಧಾನವಾಗಿ ಕುಗ್ಗುತ್ತದೆ. ಹೆಚ್ಚು ಬಿಸಿಲು, ಬೆವರು ಮತ್ತು ನೀರಿನ ಕೊರತೆಯಿಂದ ಮಕ್ಕಳು ದೌರ್ಬಲ್ಯ, ದಾಹ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ಅನುಭವಿಸಬಹುದು.</p>.<p><strong>ಮಕ್ಕಳಿಗೆ ಯಾವ ರೀತಿಯ ಆಹಾರ ಕೊಡಬೇಕು?</strong></p><p><strong>ದ್ರವ ಪದಾರ್ಥಗಳು:</strong> ತೆಂಗಿನಕಾಯಿ ನೀರು, ಮಜ್ಜಿಗೆ, ಹಣ್ಣಿನ ರಸ, ರಾಗಿ ಅಂಬಲಿ. ಇವುಗಳು ಮಕ್ಕಳ ದೇಹವನ್ನು ತಂಪಾಗಿಸುತ್ತವೆ.</p><p><strong>ಹಣ್ಣುಗಳು:</strong> ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಪಪ್ಪಾಯಿ, ಬಾಳೆಹಣ್ಣು. ಇವುಗಳು ದೇಹಕ್ಕೆ ತಂಪು ನೀಡುತ್ತವೆ ಮತ್ತು ಪಿತ್ತ ಶಮನ ಮಾಡುತ್ತವೆ.</p><p><strong>ತರಕಾರಿಗಳು:</strong> ಸೌತೆಕಾಯಿ, ಸೋರೆಕಾಯಿ, ಕುಂಬಳಕಾಯಿ. ಇವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ದೇಹವನ್ನು ತಂಪಾಗಿಸುತ್ತವೆ.</p><p><strong>ಹಗುರ ಆಹಾರ:</strong> ಅನ್ನ, ಇಡ್ಲಿ, ಉಪ್ಪಿಟ್ಟು, ಮೊಸರನ್ನ. ಇವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ದೇಹಕ್ಕೆ ಅಗತ್ಯವಾದ ಶಕ್ತಿ ನೀಡುತ್ತವೆ.</p><p><strong>ಧಾನ್ಯಗಳು:</strong> ಅಕ್ಕಿ, ಗೋಧಿ, ರಾಗಿ ಸುಲಭವಾಗಿ ಜೀರ್ಣವಾಗುವ ಆಹಾರಗಳಾಗಿವೆ.</p><p><strong>ಹಾಲು ಉತ್ಪನ್ನಗಳು:</strong> ಹಾಲು, ಮಜ್ಜಿಗೆ, ತುಪ್ಪ. ಇವುಗಳು ದೇಹಕ್ಕೆ ಪೋಷಣೆ ಮತ್ತು ಶೀತಲತೆ ನೀಡುತ್ತವೆ.</p><p><strong>ಸಾತ್ವಿಕ ಆಹಾರ:</strong> ಕಿಚಡಿ, ಕಡಿಮೆ ಮಸಾಲೆಯುಕ್ತ ಆಹಾರ, ತರಕಾರಿ ಪದಾರ್ಥಗಳು ಮಕ್ಕಳಿಗೆ ಸೂಕ್ತ.</p><p><strong>ಪ್ರೋಟೀನ್ ಆಹಾರ:</strong> ಹಾಲು, ಮೊಸರು, ಮೊಟ್ಟೆ, ಹೆಸರಕಾಳು, ಕಡಲೆಕಾಳು. ಇವುಗಳು ದೇಹದ ಬೆಳವಣಿಗೆಗೆ ಸಹಕಾರಿ.</p><p><strong>ಯಾವ ಆಹಾರ ತಪ್ಪಿಸಬೇಕು?</strong></p><p>ಹೆಚ್ಚು ಕಾರ, ಮಸಾಲೆ, ಎಣ್ಣೆಯುಕ್ತ ಆಹಾರ, ಪಾನೀಯಗಳಿಂದ ದೂರವಿಡಬೇಕು. ಇವು ಪಿತ್ತವನ್ನು ಹೆಚ್ಚಿಸಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.</p>.<p><strong>ಪೋಷಕರಿಗೆ ಸಲಹೆಗಳು</strong></p><p>• ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ಹೆಚ್ಚು ಹೊತ್ತು ಆಟವಾಡಲು ಬಿಡಬೇಡಿ</p><p>• ಬೆಳಗ್ಗೆ ಮತ್ತು ಸಂಜೆ ಆಟವಾಡಲು ಪ್ರೋತ್ಸಾಹಿಸಿ </p><p>• ದಿನಪೂರ್ತಿ ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಿ</p><p>• ದಿನಕ್ಕೆ 3–4 ಬಾರಿ ಲಘು ಆಹಾರ ನೀಡಿರಿ </p><p>ಒಟ್ಟಾರೆಯಾಗಿ ಸರಿಯಾದ ಆಹಾರ ಮತ್ತು ಜೀವನ ಶೈಲಿಯಿಂದ ಬೇಸಿಗೆಯಲ್ಲಿ ಮಕ್ಕಳ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು. ಆಯುರ್ವೇದದ ಸರಳ ನಿಯಮಗಳನ್ನು ಅನುಸರಿಸುವುದು ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿ. ಆರೋಗ್ಯವೇ ಸಂಪತ್ತು. ಮಕ್ಕಳಿಗೆ ಸೂಕ್ತ ಆಹಾರ ನೀಡುವುದು ಪೋಷಕರ ಜವಾಬ್ದಾರಿ.</p>.<p><em><strong>(ಲೇಖಕರು: ಡಾ. ವಿಜಯಲಕ್ಷ್ಮಿ ಎಸ್. ಮಲ್ಲಣ್ಣವರ, ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರು, ಆಯುರ್ವೇದ ಮಕ್ಕಳ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>