<p>ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುವುದು ಸಾಮಾನ್ಯ. ತೀವ್ರವಾದ ಬಿಸಿಲಿನಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಆದ್ದರಿಂದ ಬಹುತೇಕರು ಹೆಚ್ಚು ನೀರು ಕುಡಿಯುವುದರ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಜೀರ್ಣಕ್ರಿಯೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ನೀರು ಕುಡಿಯುವುದರ ಜತೆಗೆ ಸರಿಯಾದ ಆಹಾರ ಸೇವಿಸುವುದು ಉತ್ತಮವಾಗಿದೆ.</p><p>ವಾತಾವರಣದಲ್ಲಿ ತಾಪಮಾನ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ನಿಧಾನವಾಗಬಹುದು. ಅಲ್ಲದೇ ಬೇಸಿಗೆಯಲ್ಲಿ ಆಹಾರ ಬೇಗನೆ ಕೆಡುತ್ತದೆ. ಇಂತಹ ಸಂದರ್ಭದಲ್ಲಿ ಆಹಾರ ವಿಷಯುಕ್ತವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರನ್ನು ಕಾಡುವ ಪ್ರಮುಖ ಸಮಸ್ಯೆ ಎಂದರೆ, ಅದು ಅಜೀರ್ಣವಾಗಿದೆ. ಅಜೀರ್ಣದಿಂದ ಮುಕ್ತವಾಗಲು ಈ ಆಹಾರ ಕ್ರಮಗಳನ್ನು ಅನುಸರಿಸಿ.</p><p><strong>ಹೆಚ್ಚು ನೀರು ಕುಡಿಯುವುದು</strong></p><p>ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚಿನ ನೀರು ಬೇಕು. ಶಾಖಕ್ಕೆ ದೇಹದಲ್ಲಿನ ನೀರಿನಾಂಶ ಬೆವರಿನ ಮೂಲಕ ನಷ್ಟವಾಗುತ್ತದೆ. ಆದ್ದರಿಂದ ಆಗಾಗ ನೀರನ್ನು ಕುಡಿಯಬೇಕು. ಕಡಿಮೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಡಕು ಉಂಟು ಮಾಡುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಯುವುದು ಪರಿಹಾರವಾಗಿದೆ.</p><p><strong>ದೇಹಕ್ಕೆ ತಂಪು ನೀಡುವ ಆಹಾರ ಸೇವನೆ</strong></p><p>ಸಾಮಾನ್ಯವಾಗಿ ಕೆಲ ಹಣ್ಣು ಹಾಗೂ ತರಕಾರಿಗಳು ದೇಹಕ್ಕೆ ತಂಪು ನೀಡುತ್ತವೆ. ಪ್ರಮುಖವಾಗಿ ಕಲ್ಲಂಗಡಿ, ಸೌತೆಕಾಯಿ, ಎಳನೀರು, ಹಾಗೂ ದ್ರಾಕ್ಷಿ ಹಣ್ಣನ್ನು ಸೇವಿಸಿ. ಇದರಿಂದಾಗಿ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದೆ.</p><p><strong>ಲಘು ಆಹಾರ ಸೇವನೆ</strong></p><p>ಲಘು ಆಹಾರ ಸೇವನೆ ಉತ್ತಮ. ಅಂದರೆ ಅತಿಯಾದ ಮಸಾಲೆಯುಕ್ತ ಆಹಾರ ಸೇವನೆಯಿಂದ ಅಜೀರ್ಣ ಉಂಟಾಗುವ ಸಾಧ್ಯತೆ ಇರುತ್ತದೆ. ಆಗಾಗಿ ಅನ್ನ, ಬೇಳೆ ಸಾರು, ಮೊಸರು, ಮಜ್ಜಿಗೆ ಹಾಗೂ ತುಪ್ಪದಂತಹ ಆಹಾರಗಳನ್ನು ಊಟದ ಜೊತೆಗೆ ಸೇರಿಸಿಕೊಳ್ಳಿ.</p><p><strong>ಕರಿದ ಆಹಾರಗಳನ್ನು ಸೇವಿಸಬೇಡಿ</strong></p><p>ಎಣ್ಣೆಯಲ್ಲಿ ಕರಿದ ಆಹಾರಗಳಾದ ಬೋಂಡಾ, ಬಜ್ಜಿ ಸೇರಿದಂತೆ ಇತರೆ ಬೀದಿ ಬದಿಯಲ್ಲಿ ಮಾರಾಟ ಮಾಡುವ ಆಹಾರ ಸೇವಿಸಬೇಡಿ. ಇವುಗಳ ಬದಲು ಮನೆಯಲ್ಲಿಯೇ ಹಣ್ಣುಗಳಿಂದ ಪಾನೀಯ ತಯಾರಿಸಿಕೊಂಡು ಕುಡಿಯಿರಿ.</p><p><strong>ಫೈಬರ್ ಭರಿತ ಆಹಾರ</strong></p><p>ಅಜೀರ್ಣದಿಂದ ಮಲಬದ್ಧತೆಗೆ ಅಡೆತಡೆ ಉಂಟಾಗುತ್ತದೆ. ಆದ್ದರಿಂದ ಫೈಭರ್ ಅಧಿಕವಾಗಿರುವ ದ್ವಿದಳ ಧಾನ್ಯಗಳಾದ ಓಟ್ಸ್, ಬಾರ್ಲಿ ಇತರೆ ಧಾನ್ಯಗಳಿಂದ ತಯಾರಿಸಿ ಆಹಾರವನ್ನು ಹೆಚ್ಚಾಗಿ ಸೇವಿಸಿರಿ. ಇದು ಮಲಬದ್ದತೆ ಹಾಗೂ ಜೀರ್ಣಕ್ರಿಯೆ ಎರಡಕ್ಕೂ ಸಹಕಾರಿಯಾಗಿದೆ.</p><p><strong>ಬೇಸಿಗೆಯಲ್ಲಿ ಸೇವಿಸಬೇಕಾದ ಆಹಾರಗಳಿವು</strong></p><p>ಹಣ್ಣುಗಳಾದ ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ, ಕರ್ಬೂಜ ಮತ್ತು ಮಾವಿನಹಣ್ಣು ಉತ್ತಮವಾಗಿದೆ. ಇದರ ಜೊತೆಗೆ ತರಕಾರಿಗಳಾದ ಸೌತೆಕಾಯಿ, ಪಾಲಕ, ಟೊಮೆಟೊ ಹಾಗೂ ಸೋರೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಜೊತೆಗೆ ಎಳನೀರು, ಮಜ್ಜಿಗೆ, ಸಿಟ್ರಿಕ್ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಕುಡಿಯಬಹುದು. ಜೊತೆಗೆ ಕೆನೆಭರಿತ ಮೊಸರು ಸೇವನೆ ಉತ್ತಮವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುವುದು ಸಾಮಾನ್ಯ. ತೀವ್ರವಾದ ಬಿಸಿಲಿನಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಆದ್ದರಿಂದ ಬಹುತೇಕರು ಹೆಚ್ಚು ನೀರು ಕುಡಿಯುವುದರ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಜೀರ್ಣಕ್ರಿಯೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ನೀರು ಕುಡಿಯುವುದರ ಜತೆಗೆ ಸರಿಯಾದ ಆಹಾರ ಸೇವಿಸುವುದು ಉತ್ತಮವಾಗಿದೆ.</p><p>ವಾತಾವರಣದಲ್ಲಿ ತಾಪಮಾನ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ನಿಧಾನವಾಗಬಹುದು. ಅಲ್ಲದೇ ಬೇಸಿಗೆಯಲ್ಲಿ ಆಹಾರ ಬೇಗನೆ ಕೆಡುತ್ತದೆ. ಇಂತಹ ಸಂದರ್ಭದಲ್ಲಿ ಆಹಾರ ವಿಷಯುಕ್ತವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರನ್ನು ಕಾಡುವ ಪ್ರಮುಖ ಸಮಸ್ಯೆ ಎಂದರೆ, ಅದು ಅಜೀರ್ಣವಾಗಿದೆ. ಅಜೀರ್ಣದಿಂದ ಮುಕ್ತವಾಗಲು ಈ ಆಹಾರ ಕ್ರಮಗಳನ್ನು ಅನುಸರಿಸಿ.</p><p><strong>ಹೆಚ್ಚು ನೀರು ಕುಡಿಯುವುದು</strong></p><p>ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚಿನ ನೀರು ಬೇಕು. ಶಾಖಕ್ಕೆ ದೇಹದಲ್ಲಿನ ನೀರಿನಾಂಶ ಬೆವರಿನ ಮೂಲಕ ನಷ್ಟವಾಗುತ್ತದೆ. ಆದ್ದರಿಂದ ಆಗಾಗ ನೀರನ್ನು ಕುಡಿಯಬೇಕು. ಕಡಿಮೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಡಕು ಉಂಟು ಮಾಡುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಯುವುದು ಪರಿಹಾರವಾಗಿದೆ.</p><p><strong>ದೇಹಕ್ಕೆ ತಂಪು ನೀಡುವ ಆಹಾರ ಸೇವನೆ</strong></p><p>ಸಾಮಾನ್ಯವಾಗಿ ಕೆಲ ಹಣ್ಣು ಹಾಗೂ ತರಕಾರಿಗಳು ದೇಹಕ್ಕೆ ತಂಪು ನೀಡುತ್ತವೆ. ಪ್ರಮುಖವಾಗಿ ಕಲ್ಲಂಗಡಿ, ಸೌತೆಕಾಯಿ, ಎಳನೀರು, ಹಾಗೂ ದ್ರಾಕ್ಷಿ ಹಣ್ಣನ್ನು ಸೇವಿಸಿ. ಇದರಿಂದಾಗಿ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದೆ.</p><p><strong>ಲಘು ಆಹಾರ ಸೇವನೆ</strong></p><p>ಲಘು ಆಹಾರ ಸೇವನೆ ಉತ್ತಮ. ಅಂದರೆ ಅತಿಯಾದ ಮಸಾಲೆಯುಕ್ತ ಆಹಾರ ಸೇವನೆಯಿಂದ ಅಜೀರ್ಣ ಉಂಟಾಗುವ ಸಾಧ್ಯತೆ ಇರುತ್ತದೆ. ಆಗಾಗಿ ಅನ್ನ, ಬೇಳೆ ಸಾರು, ಮೊಸರು, ಮಜ್ಜಿಗೆ ಹಾಗೂ ತುಪ್ಪದಂತಹ ಆಹಾರಗಳನ್ನು ಊಟದ ಜೊತೆಗೆ ಸೇರಿಸಿಕೊಳ್ಳಿ.</p><p><strong>ಕರಿದ ಆಹಾರಗಳನ್ನು ಸೇವಿಸಬೇಡಿ</strong></p><p>ಎಣ್ಣೆಯಲ್ಲಿ ಕರಿದ ಆಹಾರಗಳಾದ ಬೋಂಡಾ, ಬಜ್ಜಿ ಸೇರಿದಂತೆ ಇತರೆ ಬೀದಿ ಬದಿಯಲ್ಲಿ ಮಾರಾಟ ಮಾಡುವ ಆಹಾರ ಸೇವಿಸಬೇಡಿ. ಇವುಗಳ ಬದಲು ಮನೆಯಲ್ಲಿಯೇ ಹಣ್ಣುಗಳಿಂದ ಪಾನೀಯ ತಯಾರಿಸಿಕೊಂಡು ಕುಡಿಯಿರಿ.</p><p><strong>ಫೈಬರ್ ಭರಿತ ಆಹಾರ</strong></p><p>ಅಜೀರ್ಣದಿಂದ ಮಲಬದ್ಧತೆಗೆ ಅಡೆತಡೆ ಉಂಟಾಗುತ್ತದೆ. ಆದ್ದರಿಂದ ಫೈಭರ್ ಅಧಿಕವಾಗಿರುವ ದ್ವಿದಳ ಧಾನ್ಯಗಳಾದ ಓಟ್ಸ್, ಬಾರ್ಲಿ ಇತರೆ ಧಾನ್ಯಗಳಿಂದ ತಯಾರಿಸಿ ಆಹಾರವನ್ನು ಹೆಚ್ಚಾಗಿ ಸೇವಿಸಿರಿ. ಇದು ಮಲಬದ್ದತೆ ಹಾಗೂ ಜೀರ್ಣಕ್ರಿಯೆ ಎರಡಕ್ಕೂ ಸಹಕಾರಿಯಾಗಿದೆ.</p><p><strong>ಬೇಸಿಗೆಯಲ್ಲಿ ಸೇವಿಸಬೇಕಾದ ಆಹಾರಗಳಿವು</strong></p><p>ಹಣ್ಣುಗಳಾದ ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ, ಕರ್ಬೂಜ ಮತ್ತು ಮಾವಿನಹಣ್ಣು ಉತ್ತಮವಾಗಿದೆ. ಇದರ ಜೊತೆಗೆ ತರಕಾರಿಗಳಾದ ಸೌತೆಕಾಯಿ, ಪಾಲಕ, ಟೊಮೆಟೊ ಹಾಗೂ ಸೋರೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಜೊತೆಗೆ ಎಳನೀರು, ಮಜ್ಜಿಗೆ, ಸಿಟ್ರಿಕ್ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಕುಡಿಯಬಹುದು. ಜೊತೆಗೆ ಕೆನೆಭರಿತ ಮೊಸರು ಸೇವನೆ ಉತ್ತಮವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>