<p>ಬೇಸಿಗೆ ಕಾಲವು ಕಿಡ್ನಿಗಳಿಗೆ ಸವಾಲಿನ ಸಮಯ. ಪರಿಸರದಲ್ಲಿನ ಅಧಿಕ ಉಷ್ಣಾಂಶದಿಂದ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ದ್ರವ ಹೊರಹೋಗುವ ಸಾಧ್ಯತೆ ಇರುತ್ತದೆ. ಪರಿಣಾಮವಾಗಿ ನಿರ್ಜಲೀಕರಣ ಅಥವಾ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಬೇಸಿಗೆಯಲ್ಲಿ ಹೆಚ್ಚು ಬೆವರುವುದು ಸಹಜ. ಈ ಸಂದರ್ಭದಲ್ಲಿ ದೇಹವು ಕೇವಲ ನೀರನ್ನಷ್ಟೇ ಅಲ್ಲ, ಉಪ್ಪನ್ನೂ ಕಳೆದುಕೊಳ್ಳುತ್ತದೆ. ಇದರಿಂದ ಕಿಡ್ನಿಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.</p><p>ಇದಲ್ಲದೆ, ಈಗಾಗಲೇ ಕಿಡ್ನಿ ಸಮಸ್ಯೆ ಹೊಂದಿರುವವರಲ್ಲಿ ನಿರ್ಜಲೀಕರಣದ ಪರಿಣಾಮಗಳು ಇನ್ನಷ್ಟು ಗಂಭೀರವಾಗಬಹುದು. ಇದರಿಂದ ರಕ್ತದಲ್ಲಿನ ಸ್ನಾಯುಗಳ ಚಯಾಪಚಯ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಕಿಡ್ನಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು. ಇನ್ನೊಂದೆಡೆ, ಇತರ ಆರೋಗ್ಯ ಸಮಸ್ಯೆಗಳಿಗಾಗಿ ನಿಯಮಿತವಾಗಿ ಕೆಲವು ಔಷಧಿಗಳನ್ನು ಸೇವಿಸುವವರು ಕೂಡ ನಿರ್ಜಲೀಕರಣದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಕೆಲವು ಔಷಧಿಗಳು ಮತ್ತು ಆಹಾರ ಪದಾರ್ಥಗಳು ನಿರ್ಜಲೀಕರಣದ ಸಂದರ್ಭದಲ್ಲಿ ಕಿಡ್ನಿಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುವುದಷ್ಟೇ ಅಲ್ಲದೆ, ಅವುಗಳ ಆರೋಗ್ಯ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಯೂ ಇದೆ.</p>.<p><strong>ಕೇವಲ ನೀರು ಕುಡಿಯುವುದೇ ಸಾಕೇ?</strong></p><p>ಸಾಕಷ್ಟು ನೀರು ಕುಡಿಯುವುದರಿಂದ ಕಿಡ್ನಿಗಳ ಮೇಲಿನ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಮೂತ್ರವು ಹೆಚ್ಚು ಗಟ್ಟಿಯಾಗುವುದನ್ನು ತಡೆಯುವ ಮೂಲಕ ಕಿಡ್ನಿ ಕಲ್ಲುಗಳ ಅಪಾಯವೂ ಕಡಿಮೆಯಾಗುತ್ತದೆ. ಆದರೆ ಕಿಡ್ನಿ ಆರೋಗ್ಯ ಕಾಪಾಡಲು ಕೇವಲ ನೀರು ಕುಡಿಯುವುದೇ ಸಾಕಾಗುವುದಿಲ್ಲ. ಇದರ ಜೊತೆಗೆ ಕೆಳಗಿನ ಅಂಶಗಳತ್ತವೂ ಗಮನ ಹರಿಸಬೇಕು.</p><p>• ರಕ್ತದ ಸಕ್ಕರೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದು.</p><p>• ಪೇನ್ಕಿಲ್ಲರ್ಗಳು ಹಾಗೂ ಕಿಡ್ನಿಗಳಿಗೆ ಹಾನಿಕಾರಕವಾಗಬಹುದಾದ ಔಷಧಿಗಳನ್ನು ಅತಿಯಾಗಿ ಬಳಸುವುದನ್ನು ತಪ್ಪಿಸುವುದು.</p><p>• ಆರೋಗ್ಯಕರ ಜೀವನಶೈಲಿ ಪಾಲಿಸುವುದು. ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು.</p>.<p><strong>ಕಿಡ್ನಿಗಳನ್ನು ರಕ್ಷಿಸುವ ಜೀವನಶೈಲಿ</strong></p><p>• ವೈದ್ಯರ ಸಲಹೆಯಂತೆ ಉಪ್ಪಿನ ಸೇವನೆಯನ್ನು ನಿಯಂತ್ರಿಸುವುದು ಮುಖ್ಯ. ಹೆಚ್ಚು ಕ್ಯಾಲೊರಿಯ ಆಹಾರಗಳನ್ನು ಕಡಿಮೆ ಮಾಡುವುದು ಮತ್ತು ಪ್ರತಿದಿನ ವ್ಯಾಯಾಮವನ್ನು ದಿನಚರಿಯ ಭಾಗವಾಗಿಸಿಕೊಳ್ಳುವುದು ಸ್ಥೂಲಕಾಯತೆಯನ್ನು ತಪ್ಪಿಸಲು ಸಹಕಾರಿ.</p><p>• ಇದರ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದೂ ಅಗತ್ಯ. ಇದರಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳು ಆರಂಭಿಕ ಹಂತದಲ್ಲೇ ಪತ್ತೆಯಾಗುವ ಸಾಧ್ಯತೆ ಹೆಚ್ಚುತ್ತದೆ.</p>.<p><strong>ಕಿಡ್ನಿ ಕಲ್ಲುಗಳನ್ನು ತಡೆಗಟ್ಟುವುದು</strong></p><p>• ಕಿಡ್ನಿ ಕಲ್ಲುಗಳನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯುವುದು ಅತ್ಯಂತ ಮುಖ್ಯ. ಸಾಮಾನ್ಯವಾಗಿ 24 ಗಂಟೆಗಳಲ್ಲಿ ಕನಿಷ್ಠ ಎರಡು ಲೀಟರ್ ಮೂತ್ರ ಉತ್ಪಾದನೆ ಆಗುವಂತೆ ನೋಡಿಕೊಳ್ಳಲು ಹೆಚ್ಚಿನವರು ದಿನಕ್ಕೆ ಸುಮಾರು ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದು ಒಳಿತು.</p><p>• ವಯೋವೃದ್ಧರು ಅಥವಾ ಕೆಲವು ಔಷಧಿಗಳನ್ನು ಸೇವಿಸುತ್ತಿರುವವರು ಅತಿಯಾಗಿ ನೀರು ಕುಡಿಯುವುದನ್ನು ತಪ್ಪಿಸುವುದು ಉತ್ತಮ.</p><p>• ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಯೂರಿಕ್ ಆಮ್ಲ ಅಥವಾ ಆಕ್ಸಲೇಟ್ಗಳು ಹೆಚ್ಚಿರುವ ಆಹಾರಗಳನ್ನು ನಿಯಂತ್ರಿಸುವುದು ಕಿಡ್ನಿ ಕಲ್ಲುಗಳ ಅಪಾಯವನ್ನು ಇನ್ನಷ್ಟು ಕಡಿಮೆ ಮಾಡಲು ಸಹಾಯಕ.</p><p>ಸರಳ ಜೀವನಶೈಲಿ ಬದಲಾವಣೆಗಳು ಮತ್ತು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ, ವಿಶೇಷವಾಗಿ ಬೇಸಿಗೆ ತಿಂಗಳಲ್ಲಿ, ಕಿಡ್ನಿ ಆರೋಗ್ಯವನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಳ್ಳಬಹುದು. ಸಮರ್ಪಕ ನೀರಿನ ಸೇವನೆ, ಸಮತೋಲನಯುತ ಆಹಾರ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಈ ದಿಸೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.</p>.<p><em><strong>(ಲೇಖಕರು: ವಿಷ್ಣುವರ್ಧನ್ ಬಿ.ಆರ್., ಕನ್ಸಲ್ಟೆಂಟ್, ನೆಫ್ರಾಲಜಿ, ಮಣಿಪಾಲ್ ಆಸ್ಪತ್ರೆ ವೈಟ್ಫೀಲ್ಡ್)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇಸಿಗೆ ಕಾಲವು ಕಿಡ್ನಿಗಳಿಗೆ ಸವಾಲಿನ ಸಮಯ. ಪರಿಸರದಲ್ಲಿನ ಅಧಿಕ ಉಷ್ಣಾಂಶದಿಂದ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ದ್ರವ ಹೊರಹೋಗುವ ಸಾಧ್ಯತೆ ಇರುತ್ತದೆ. ಪರಿಣಾಮವಾಗಿ ನಿರ್ಜಲೀಕರಣ ಅಥವಾ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಬೇಸಿಗೆಯಲ್ಲಿ ಹೆಚ್ಚು ಬೆವರುವುದು ಸಹಜ. ಈ ಸಂದರ್ಭದಲ್ಲಿ ದೇಹವು ಕೇವಲ ನೀರನ್ನಷ್ಟೇ ಅಲ್ಲ, ಉಪ್ಪನ್ನೂ ಕಳೆದುಕೊಳ್ಳುತ್ತದೆ. ಇದರಿಂದ ಕಿಡ್ನಿಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.</p><p>ಇದಲ್ಲದೆ, ಈಗಾಗಲೇ ಕಿಡ್ನಿ ಸಮಸ್ಯೆ ಹೊಂದಿರುವವರಲ್ಲಿ ನಿರ್ಜಲೀಕರಣದ ಪರಿಣಾಮಗಳು ಇನ್ನಷ್ಟು ಗಂಭೀರವಾಗಬಹುದು. ಇದರಿಂದ ರಕ್ತದಲ್ಲಿನ ಸ್ನಾಯುಗಳ ಚಯಾಪಚಯ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಕಿಡ್ನಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು. ಇನ್ನೊಂದೆಡೆ, ಇತರ ಆರೋಗ್ಯ ಸಮಸ್ಯೆಗಳಿಗಾಗಿ ನಿಯಮಿತವಾಗಿ ಕೆಲವು ಔಷಧಿಗಳನ್ನು ಸೇವಿಸುವವರು ಕೂಡ ನಿರ್ಜಲೀಕರಣದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಕೆಲವು ಔಷಧಿಗಳು ಮತ್ತು ಆಹಾರ ಪದಾರ್ಥಗಳು ನಿರ್ಜಲೀಕರಣದ ಸಂದರ್ಭದಲ್ಲಿ ಕಿಡ್ನಿಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುವುದಷ್ಟೇ ಅಲ್ಲದೆ, ಅವುಗಳ ಆರೋಗ್ಯ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಯೂ ಇದೆ.</p>.<p><strong>ಕೇವಲ ನೀರು ಕುಡಿಯುವುದೇ ಸಾಕೇ?</strong></p><p>ಸಾಕಷ್ಟು ನೀರು ಕುಡಿಯುವುದರಿಂದ ಕಿಡ್ನಿಗಳ ಮೇಲಿನ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಮೂತ್ರವು ಹೆಚ್ಚು ಗಟ್ಟಿಯಾಗುವುದನ್ನು ತಡೆಯುವ ಮೂಲಕ ಕಿಡ್ನಿ ಕಲ್ಲುಗಳ ಅಪಾಯವೂ ಕಡಿಮೆಯಾಗುತ್ತದೆ. ಆದರೆ ಕಿಡ್ನಿ ಆರೋಗ್ಯ ಕಾಪಾಡಲು ಕೇವಲ ನೀರು ಕುಡಿಯುವುದೇ ಸಾಕಾಗುವುದಿಲ್ಲ. ಇದರ ಜೊತೆಗೆ ಕೆಳಗಿನ ಅಂಶಗಳತ್ತವೂ ಗಮನ ಹರಿಸಬೇಕು.</p><p>• ರಕ್ತದ ಸಕ್ಕರೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದು.</p><p>• ಪೇನ್ಕಿಲ್ಲರ್ಗಳು ಹಾಗೂ ಕಿಡ್ನಿಗಳಿಗೆ ಹಾನಿಕಾರಕವಾಗಬಹುದಾದ ಔಷಧಿಗಳನ್ನು ಅತಿಯಾಗಿ ಬಳಸುವುದನ್ನು ತಪ್ಪಿಸುವುದು.</p><p>• ಆರೋಗ್ಯಕರ ಜೀವನಶೈಲಿ ಪಾಲಿಸುವುದು. ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು.</p>.<p><strong>ಕಿಡ್ನಿಗಳನ್ನು ರಕ್ಷಿಸುವ ಜೀವನಶೈಲಿ</strong></p><p>• ವೈದ್ಯರ ಸಲಹೆಯಂತೆ ಉಪ್ಪಿನ ಸೇವನೆಯನ್ನು ನಿಯಂತ್ರಿಸುವುದು ಮುಖ್ಯ. ಹೆಚ್ಚು ಕ್ಯಾಲೊರಿಯ ಆಹಾರಗಳನ್ನು ಕಡಿಮೆ ಮಾಡುವುದು ಮತ್ತು ಪ್ರತಿದಿನ ವ್ಯಾಯಾಮವನ್ನು ದಿನಚರಿಯ ಭಾಗವಾಗಿಸಿಕೊಳ್ಳುವುದು ಸ್ಥೂಲಕಾಯತೆಯನ್ನು ತಪ್ಪಿಸಲು ಸಹಕಾರಿ.</p><p>• ಇದರ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದೂ ಅಗತ್ಯ. ಇದರಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳು ಆರಂಭಿಕ ಹಂತದಲ್ಲೇ ಪತ್ತೆಯಾಗುವ ಸಾಧ್ಯತೆ ಹೆಚ್ಚುತ್ತದೆ.</p>.<p><strong>ಕಿಡ್ನಿ ಕಲ್ಲುಗಳನ್ನು ತಡೆಗಟ್ಟುವುದು</strong></p><p>• ಕಿಡ್ನಿ ಕಲ್ಲುಗಳನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯುವುದು ಅತ್ಯಂತ ಮುಖ್ಯ. ಸಾಮಾನ್ಯವಾಗಿ 24 ಗಂಟೆಗಳಲ್ಲಿ ಕನಿಷ್ಠ ಎರಡು ಲೀಟರ್ ಮೂತ್ರ ಉತ್ಪಾದನೆ ಆಗುವಂತೆ ನೋಡಿಕೊಳ್ಳಲು ಹೆಚ್ಚಿನವರು ದಿನಕ್ಕೆ ಸುಮಾರು ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದು ಒಳಿತು.</p><p>• ವಯೋವೃದ್ಧರು ಅಥವಾ ಕೆಲವು ಔಷಧಿಗಳನ್ನು ಸೇವಿಸುತ್ತಿರುವವರು ಅತಿಯಾಗಿ ನೀರು ಕುಡಿಯುವುದನ್ನು ತಪ್ಪಿಸುವುದು ಉತ್ತಮ.</p><p>• ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಯೂರಿಕ್ ಆಮ್ಲ ಅಥವಾ ಆಕ್ಸಲೇಟ್ಗಳು ಹೆಚ್ಚಿರುವ ಆಹಾರಗಳನ್ನು ನಿಯಂತ್ರಿಸುವುದು ಕಿಡ್ನಿ ಕಲ್ಲುಗಳ ಅಪಾಯವನ್ನು ಇನ್ನಷ್ಟು ಕಡಿಮೆ ಮಾಡಲು ಸಹಾಯಕ.</p><p>ಸರಳ ಜೀವನಶೈಲಿ ಬದಲಾವಣೆಗಳು ಮತ್ತು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ, ವಿಶೇಷವಾಗಿ ಬೇಸಿಗೆ ತಿಂಗಳಲ್ಲಿ, ಕಿಡ್ನಿ ಆರೋಗ್ಯವನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಳ್ಳಬಹುದು. ಸಮರ್ಪಕ ನೀರಿನ ಸೇವನೆ, ಸಮತೋಲನಯುತ ಆಹಾರ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಈ ದಿಸೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.</p>.<p><em><strong>(ಲೇಖಕರು: ವಿಷ್ಣುವರ್ಧನ್ ಬಿ.ಆರ್., ಕನ್ಸಲ್ಟೆಂಟ್, ನೆಫ್ರಾಲಜಿ, ಮಣಿಪಾಲ್ ಆಸ್ಪತ್ರೆ ವೈಟ್ಫೀಲ್ಡ್)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>