ದಿನ ಭವಿಷ್ಯ | ಈ ರಾಶಿಯವರಿಗೆ ಭೂ ವ್ಯವಹಾರಗಳು ಲಾಭದಾಯಕ
Published 19 ಅಕ್ಟೋಬರ್ 2025, 0:10 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವು ವಿಷಯಗಳು ಹೀಗಾಗಬಹುದು ಎಂಬ ಅನುಭವವಿದ್ದರೂ ಅವಘಡವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಕುಲದೇವರ ದರ್ಶನ ಮಾಡುವ ಮನಸ್ಸಾಗಬಹುದು.
19 ಅಕ್ಟೋಬರ್ 2025, 00:10 IST
ವೃಷಭ
ಅನ್ವೇಷಣೆಯ ಸ್ವಭಾವವು ವೃತ್ತಿಯ ಬದುಕಿನಲ್ಲಿ ಹೊಸ ತಿರುವು ತರಲಿದೆ. ಅಮೂಲ್ಯ ವಸ್ತುವಿನ ಪ್ರಾಪ್ತಿಯಿಂದ ಸಂತೋಷ ಹೊಂದುವಿರಿ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ.
19 ಅಕ್ಟೋಬರ್ 2025, 00:10 IST
ಮಿಥುನ
ಒಂದೇ ಬಾರಿ ಹೆಚ್ಚು ಹಣವನ್ನು ಒಂದು ಕೆಲಸಕ್ಕೆ ವಿನಿಯೋಗಿಸುವುದರ ಬದಲು ಕಂತಿನಲ್ಲಿ ತೀರಿಸುವ ಬಗ್ಗೆ ಯೋಚಿಸಿ. ನಿತ್ಯದ ಕಾರ್ಯಗಳಿಂದ ಸ್ವಲ್ಪ ಮುಕ್ತಿ ಸಿಗುವ ಅವಕಾಶವಿದೆ. ಭೂ ವ್ಯವಹಾರಗಳು ಲಾಭದಾಯಕ.
19 ಅಕ್ಟೋಬರ್ 2025, 00:10 IST
ಕರ್ಕಾಟಕ
ಅಭಿರುಚಿಗೆ ಹೊಂದುವಂಥ ಜನರೊಂದಿಗೆ ಒಡನಾಟ ಬೆಳೆಸಿ ಕೊಳ್ಳುವಿರಿ. ಮೊಮ್ಮಗನ ವಯಸ್ಸಿಗೆ ಮೀರಿದ ಕೆಲವು ಆಟೋಟಗಳನ್ನು ನೋಡಿ ಮನಸ್ಸು ಪ್ರಫುಲ್ಲವಾಗುವುದು. ವೃತ್ತಿ ಉತ್ತಮ ಸ್ಥಿತಿಯಲ್ಲಿರುವುದು.
19 ಅಕ್ಟೋಬರ್ 2025, 00:10 IST
ಸಿಂಹ
ಹಲವು ದಿನಗಳಿಂದ ಪರ ಊರಿನ ಪ್ರಯಾಣ ಆಯಾಸ ಉಂಟುಮಾಡುವುದು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಂಪಾದನೆ ಇರುತ್ತದೆ. ಆಪ್ತರೊಬ್ಬರು ನೆರವಿಗೆ ನಿಲ್ಲಲಿದ್ದಾರೆ.
19 ಅಕ್ಟೋಬರ್ 2025, 00:10 IST
ಕನ್ಯಾ
ಅಸೂಯೆಯಾಗದಂತೆ ಕಾರ್ಯಗಳನ್ನು ಸಾಧಿಸಿಕೊಳ್ಳುವ ಉತ್ತಮ ಗುಣ ನಿಮ್ಮಲ್ಲಿರುವುದರಿಂದ ಯಶಸ್ಸನ್ನು ಕಾಣುವಿರಿ. ನವಗ್ರಹ ಸ್ತೋತ್ರ ಪಠಿಸುವುದರಿಂದ ಶುಭವಾಗುತ್ತದೆ.
19 ಅಕ್ಟೋಬರ್ 2025, 00:10 IST
ತುಲಾ
ದೂರದ ಸಂಬಂಧಿಗಳು ವೈಯಕ್ತಿಕ ವಿಷಯದಲ್ಲಿ ಮೂಗುತೂರಿಸುವುದು ಮನಸ್ತಾಪಕ್ಕೆ ಕಾರಣವಾಗುತ್ತದೆ. ನಿಷ್ಠಾವಂತ ಸಂಗಾತಿಗೆ ವಿಶೇಷ ಉಡುಗೊರೆ ದೊರೆಯುವ ಸಂಭವವಿದೆ.
19 ಅಕ್ಟೋಬರ್ 2025, 00:10 IST
ವೃಶ್ಚಿಕ
ಮಿತ್ರರ ಸಹಕಾರದಿಂದ ಮತ್ತು ಅವರ ಚಾಣಾಕ್ಷ ವರ್ತನೆಯಿಂದ ವ್ಯಾಪಾರದಲ್ಲಿ ಪ್ರಗತಿ ಇರುವುದು. ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಸಂತಸವಿರುತ್ತದೆ. ಅಭಿಮಾನಿಗಳ ಅಭಿಲಾಶೆಯನ್ನು ಕಡೆಗಣಿಸದಿರಿ.
19 ಅಕ್ಟೋಬರ್ 2025, 00:10 IST
ಧನು
ಮನೆ ಖರೀದಿಯ ವಿಷಯದ ಬಗ್ಗೆ ಮನೆಯವರಿಂದ ಮಾಹಿತಿಯನ್ನು ಪಡೆಯುವಿರಿ. ರಹಸ್ಯವಾಗಿ ಸಿಗುವ ಬೆಂಬಲದಿಂದ ಕನಸುಗಳು ನನಸಾಗಲಿವೆ. ಗೃಹೋಪಕರಣದ ತಯಾರಕರಿಗೆ ಅವಕಾಶಗಳು ಸಿಗಲಿವೆ.
19 ಅಕ್ಟೋಬರ್ 2025, 00:10 IST
ಮಕರ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಬಳಸಿಕೊಳ್ಳಿ. ರಾಜಕೀಯ ವಿದ್ಯಮಾನಗಳಿಂದಾಗಿ ಓಡಾಟವಾಗುವುದು. ಮಕ್ಕಳ ಮೇಲೆ ನಿಗಾ ಇರಲಿ.
19 ಅಕ್ಟೋಬರ್ 2025, 00:10 IST
ಕುಂಭ
ಯೋಜಿತ ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಪರಿಶ್ರಮ ಅಗತ್ಯವಿದೆ. ಮಧ್ಯಾಹ್ನದ ಸಮಯದಲ್ಲಿ ಸಂತಸ ಭರಿತ ಸುದ್ದಿ ತಲುಪುತ್ತದೆ. ಸೇವಾ ಸಂಸ್ಥೆಯವರಿಗೆ ಅನುಕೂಲವಿರುವುದು.
19 ಅಕ್ಟೋಬರ್ 2025, 00:10 IST
ಮೀನ
ರಾಜಕೀಯ ವರ್ಗದವರು ಸಾರ್ವಜನಿಕರ ಮನ್ನಣೆ ಪಡೆದುಕೊಂಡು ಉತ್ತಮ ಶುಭ ಫಲಗಳನ್ನು ಅನುಭವಿಸುವ ನಿರೀಕ್ಷೆಯನ್ನು ಮಾಡಬಹುದು. ಮನಸ್ಸಿನ ದುಗುಡದ ನಿವಾರಣೆಗೆ ತಾಳ್ಮೆ ಅತ್ಯವಶ್ಯ.
19 ಅಕ್ಟೋಬರ್ 2025, 00:10 IST