ಭಾನುವಾರ, 17 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ, ಆದಾಯ ಲಭಿಸುವುದು
Published 22 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆರ್ಥಿಕವಾಗಿ ಉತ್ತಮ ಪ್ರಗತಿ ಇದ್ದರೂ ಧನವ್ಯಯದಲ್ಲಿ ಆಗುತ್ತಿರುವ ಅನವಶ್ಯಕ ಖರ್ಚುಗಳನ್ನು ತಡೆಗಟ್ಟುವ ಪ್ರಯತ್ನ ಮಾಡುವುದರಿಂದ ಲಾಭ ಗಳಿಸಬಹುದು. ಸುಗಂಧ ದ್ರವ್ಯದ ಮಾರಾಟದಲ್ಲಿ ಲಾಭ ಸಿಗಲಿದೆ.
ವೃಷಭ
ಅಧಿಕಾರಿಗಳಿಗೆ ಅಪನಂಬಿಕೆ ಮೂಡುವಂತಹ ಘಟನೆಗಳು ಸಂಭವಿಸಬಹುದು. ತಾಯಿ ಆರೋಗ್ಯ ತಪಾಸಣೆ ನಡೆಸಲು ವೈದ್ಯರನ್ನು ಕಾಣುವಿರಿ. ಬಿಳಿ ಬಣ್ಣ ಅದೃಷ್ಟ ತರುವುದು.
ಮಿಥುನ
ವ್ಯವಹಾರಗಳನ್ನು ಇತರರೊಂದಿಗೆ ಹೇಳಿಕೊಂಡರೂ ಒಳಗುಟ್ಟನ್ನು ಬಿಟ್ಟುಕೊಡದಿರಿ. ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರಲಿದೆ.
ಕರ್ಕಾಟಕ
ವ್ಯಾಪಾರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ಬಲದ ಜತೆ ವ್ಯಾಪಾರದ ಉಪಾಯಗಳನ್ನು ಬಳಸಿ. ಸ್ಥಗಿತಗೊಂಡಿದ್ದ ಕಾರ್ಯಗಳಿಗೆ ಚಾಲನೆ ದೊರೆಯುವುದು. ಗೌರವಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳಿ.
ಸಿಂಹ
ವಿದ್ಯಾರ್ಥಿ ವರ್ಗಕ್ಕೆ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸೂಕ್ತ ದಿನ. ಸಂಬಂಧಿಕರ ವಲಯದಲ್ಲಿದ್ದ ತಪ್ಪು ಅಭಿಪ್ರಾಯಗಳು ದೂರಾಗಲಿವೆ.
ಕನ್ಯಾ
ಎಂತಹ ಪರಿಸ್ಥಿತಿಯನ್ನೂ ಎದುರಿಸಬಲ್ಲೆನೆಂಬ ಆತ್ಮವಿಶ್ವಾಸದಿಂದ ಜೀವನ ನಡೆಸಿ. ಅದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಿತಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಬುದ್ಧಿವಂತಿಕೆ ಉಪಯೋಗಿಸಿರಿ.
ತುಲಾ
ಮಕ್ಕಳೊಂದಿಗೆ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗಲಿದ್ದೀರಿ. ಸಂಸ್ಥೆಯಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳು ಎದುರಾದರೆ ಸದುಪಯೋಗ ಪಡಿಸಿಕೊಳ್ಳಿ.
ವೃಶ್ಚಿಕ
ದೈಹಿಕ ಮತ್ತು ಆರ್ಥಿಕ ಶಕ್ತಿಯನ್ನು ವ್ಯಯಿಸದೇ ಸಮಯಕ್ಕಾಗಿ ಕಾದು, ಕಾರ್ಯವೆಸಗುವ ಚಾಣಾಕ್ಷತನ ನಿಮ್ಮಲ್ಲಿ ಇರುವುದು. ಸಾಲ ತೀರಿಸಲು ಹೊಸದೊಂದು ಮಾರ್ಗ ಕಾಣಲಿದೆ.
ಧನು
ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯವಿದ್ದು, ಆದಾಯ ಲಭಿಸುವುದು. ಜನರಿಗೆ ಮಾರ್ಗದರ್ಶನ ಮಾಡುವ ಯೋಗವಿದೆ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆ ಮುಖ್ಯ.
ಮಕರ
ಹಲವು ಕಾರಣಗಳಿಗೆ ಸ್ನೇಹಿತರು ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸಬಹುದು. ತಾಯಿಯ ಆರೋಗ್ಯ ಅದರಲ್ಲೂ ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಕಾಳಜಿಯನ್ನು ತೆಗೆದು ಕೊಳ್ಳಬೇಕಾಗುತ್ತದೆ.
ಕುಂಭ
ಸಾಮಾಜಿಕವಾಗಿ ಜನೋಪಕಾರದಿಂದ ಪ್ರಶಂಸೆ ಹಾಗೂ ಗುರು-ಹಿರಿಯರಿಂದ ಮೆಚ್ಚುಗೆಯ ನುಡಿ ಲಭಿಸಲಿದೆ. ಕಾರ್ಯಕ್ಷೇತ್ರದ ಸಮಸ್ಯೆಯನ್ನು ಹಂತ ಹಂತವಾಗಿ ಸುಧಾರಣೆ ಮಾಡುವಿರಿ.
ಮೀನ
ದೈವಾನುಕೂಲದಿಂದ ಶುಭ ಕಾರ್ಯಗಳನ್ನು ನಿಶ್ಚಯ ಮಾಡಬಹುದು. ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಿರಿ. ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆ ನಿವಾರಣೆಯಾಗಲಿದೆ.
ADVERTISEMENT
ADVERTISEMENT