ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಬುಧವಾರ, 24 ಮೇ 2023
Published 23 ಮೇ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ವ್ಯವಹಾರಿಕವಾಗಿ ಇರುವ ಹಳೆಯ ಬಾಕಿ ಮೊತ್ತ  ಕೈ ಸೇರಲಿದೆ. ಸರ್ಕಾರಿ ನೌಕರರಿಗೆ ವರ್ಗಾವಣೆಯ ಯೋಗವಿದೆ. ಲೋಹದ ಕಾರ್ಖಾನೆಯವರಿಗೆ, ಚಿನ್ನಾಭರಣ ವ್ಯಾಪಾರಿಗಳು ಉದ್ಯೋಗದಲ್ಲಿ ಅಧಿಕ ಲಾಭವನ್ನು ಹೊಂದುವಿರಿ.
ವೃಷಭ
ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ದೀರ್ಘಾಲೋಚನೆ ಮತ್ತು ಸಲಹೆ ಪಡೆದುಕೊಳ್ಳುವುದನ್ನು ಅವಶ್ಯ ಪಾಲಿಸಿ. ಪದವೀದರರಿಗೆ ಸನ್ಮಾನದಂತಹ ಗೌರವ ದೊರಕಲಿದೆ. ಸತ್ಕಾರ್ಯಗಳಲ್ಲಿ  ಆಸಕ್ತಿ ಹೆಚ್ಚುವುದರಿಂದ ಪುಣ್ಯಸಂಪಾದನೆಯಾಗಲಿದೆ.
ಮಿಥುನ
ಅಧಿಕ ತಿರುಗಾಟಗಳಿಂದ ದೇಹಾಯಾಸ ಇದ್ದರೂ ಆದಾಯಕ್ಕೆ ಕೊರತೆ ಇರುವುದಿಲ್ಲ. ತಾತ್ಕಾಲಿಕ ಹುದ್ದೆಯವರಿಗೆ ಖಾಯಂ ಆಗುವ ಸಾಧ್ಯತೆ ಇರುತ್ತದೆ. ಜಗದ್ಗುರು ಸೇವೆಯಿಂದ ಅಭೀಷ್ಟಸಿದ್ಧಿಯಾಗುವುದು.
ಕರ್ಕಾಟಕ
ಸಮಯೋಚಿತ ಕಾರ್ಯ ನಡೆಸುವಲ್ಲಿ ಆಲಸ್ಯ, ವಾದ- ವಿವಾದಗಳಲ್ಲಿ ಪರಕೀಯರೊಡನೆ ನಿಷ್ಕಾರಣ ವೈಷಮ್ಯ, ಸ್ವಕೀಯ ಪರಿವಾರದಲ್ಲಿ ಅಭಿಪ್ರಾಯ ಭೇದಗಳಿಂದ ತಾಪತ್ರಯಗಳಿಗೆ ಗುರಿಯಾಗುವಿರಿ. ತಾಳ್ಮೆ ನಿಮ್ಮ ಮಂತ್ರಗಳಾಗಿರಲಿ.
ಸಿಂಹ
ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ನಿಮ್ಮ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ. ಗುರು-ಹಿರಿಯರಅನುಗ್ರಹದಿಂದ ಹಾಗೂ ನಿಮ್ಮ ಶಾಂತಿಯುತ ಸ್ವಭಾವದಿಂದ ಹೆಚ್ಚಿನ ನೆಮ್ಮದಿ ಕಾಣುವಿರಿ. ಅವಿವಾಹಿತರಿಗೆ ಶುಭ ಫಲಗಳು ಲಭಿಸುವುದು.
ಕನ್ಯಾ
ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ನೂತನ ಮನೆ ನಿರ್ಮಾಣ ಅಥವಾ ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕವಾದ ವಾತಾವರಣ ಸ್ನೇಹಿತರಿಂದ ಸಿಗಲಿದೆ.
ತುಲಾ
ಈ ದಿನಗಳಲ್ಲಿ ಪ್ರಾರಂಭಿಸಿದ ಕಾರ್ಯಗಳು ಸೂಕ್ತ ಸಮಯದಲ್ಲಿ ಪೂರ್ಣಗೊಳ್ಳುವುದು. ವ್ಯವಹಾರದಲ್ಲಿ ಹೊರರಾಜ್ಯದ ಅತಿ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು.
ವೃಶ್ಚಿಕ
ಈ ದಿನ ವ್ಯವಹರಿಸುವಾಗ ಪ್ರದರ್ಶಿಸಿದ ಬುದ್ಧಿವಂತಿಕೆಯು ಹೆಚ್ಚಿನ ಲಾಭಕ್ಕೆ ಕಾರಣವಾಗುವುದು. ಸಮಸ್ಯೆಯ ಗೋಪುರವನ್ನು ಹೊತ್ತಿರುವ ನಿಮಗೆ ಹಂತಹಂತವಾಗಿ ಪರಿಹಾರ ದೊರಕಲಿದೆ. ಆರೋಗ್ಯದ ಬಗ್ಗೆ ನಿಗವಹಿಸುವುದು ಅಗತ್ಯ.
ಧನು
ಗ್ರಹದ ಫಲಗಳು ಅನುಕೂಲಕರವಾಗಿ ತೋರುವುದರಿಂದ ವ್ಯಾಪಾರೋದ್ಯಮಗಳು ಮನಸ್ಸಿನಂತೆ ನಡೆದು ನಿರೀಕ್ಷೆಗೂ ಮಿಕ್ಕಿ ಲಾಭದಾಯಕವಾಗುವುದು. ಮನೆಯಲ್ಲಿ ಮಂಗಳ ಕಾರ್ಯಗಳು ನೆಡೆಯುವ ಸೂಚನೆ ಕಾಣಿಸಬಹುದು.
ಮಕರ
ಆರ್ಥಿಕತೆ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ನೀವು ಈ ದಿನದಲ್ಲಿ ಅಪೇಕ್ಷಿಸಬಹುದು. ಈ ದಿನದಂದು ನೀವು ನಿಮ್ಮ ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ. ವ್ಯವಹಾರವು ಲಾಭದ ಪಥದಲ್ಲಿರುವುದು.
ಕುಂಭ
ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಸಂಜೆಯ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಡಲಿದೆ. ಈ ದಿನವು ಹೊಸ ಪರಿವರ್ತನೆಯನ್ನು ನಿಮ್ಮ ಬಾಳಲ್ಲಿ ತರಲಿದೆ.
ಮೀನ
ಚಿಂತೆಯು ನಿಮ್ಮನ್ನು ಕಾಡಲಿದೆ. ಶನೈಶ್ಚರನ ಸ್ತೋತ್ರ ಪಠಿಸುವುದರಿಂದ ಒಳಿತಾಗುತ್ತದೆ. ಕೌಟುಂಬಿಕ ವೈಮಸ್ಯಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ. ಮಾತಿನಂತೆ ನಡೆಯದ ಮಕ್ಕಳ ಮೇಲೆ ಬೇಸರವಾಗುತ್ತದೆ.