ದಿನ ಭವಿಷ್ಯ: ವೃತ್ತಿಯಲ್ಲಿ ಎಚ್ಚರವಹಿಸುವುದು ಲೇಸು
Published 8 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾವುದೇ ವಾದ ವಿವಾದಗಳು ನಡೆದರೂ ಕಾರ್ಯಸಾಧನೆಗೆ ಅಡ್ಡಿಯಾಗಲಾರದು. ದ್ವಂದ್ವ ರೀತಿಯ ಆಲೋಚನೆಗಳಿಂದ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವು ಮುಂದುವರಿಯುವುದು.
08 ಮಾರ್ಚ್ 2026, 23:30 IST
ವೃಷಭ
ದೂರ ದೃಷ್ಟಿ ಇಟ್ಟುಕೊಂಡು ಪ್ರಪಂಚದ ಓಟಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗುವುದು ಉತ್ತಮ. ಸಾಲದ ರೂಪದಲ್ಲಿ ಯಾರಿಗೂ ಹಣ ನೀಡಬೇಡಿ. ಅತಿಥಿಗಳ ಆಗಮನ ಸಂತಸ ತಂದೀತು.
08 ಮಾರ್ಚ್ 2026, 23:30 IST
ಮಿಥುನ
ಹೊಸ ಹೂಡಿಕೆ ಮತ್ತು ಒಪ್ಪಂದ ನಿಶ್ಚಿತ ಹಂತ ತಲುಪಿದ್ದಕ್ಕೆ ಸಂತೃಪ್ತಿಯ ಭಾವವಿರುವುದು. ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು. ಅತಿಥಿ ಸತ್ಕಾರದಂಥ ಕಾರ್ಯವನ್ನು ಕೈಗೊಳ್ಳಬಹುದು.
08 ಮಾರ್ಚ್ 2026, 23:30 IST
ಕರ್ಕಾಟಕ
ವಿಜಯ ನಿಮ್ಮದೇ ಆದ್ದರಿಂದ ನೂತನ ಚರ ಅಥವಾ ಸ್ಥಿರ ಆಸ್ತಿ ಸಂಪಾದಿಸುವ ಬಗ್ಗೆ ಪ್ರಯತ್ನವಿರಲಿ.ವಿದ್ಯುತ್ ಇಲಾಖೆ ಸಿಬ್ಬಂದಿಗೆ ತುರ್ತು ಕೆಲಸಗಳ ನಿರ್ವಹಣೆ ಹೆಚ್ಚಾಗಲಿದೆ.
08 ಮಾರ್ಚ್ 2026, 23:30 IST
ಸಿಂಹ
ನೂತನವಾಗಿ ಪರಿಚಯವಾದ ರಾಜಕೀಯ ವ್ಯಕ್ತಿಯೊಂದಿಗೆ ಸಂಬಂಧವು ಉತ್ತಮಗೊಳ್ಳುವುದು. ಗುರುಗಳ ಮಾರ್ಗದರ್ಶನದ ಮಹತ್ವ ತಿಳಿಯುವುದು. ಒದಗಿಬರುವ ಅವಕಾಶಗಳು ಅನುಕೂಲವಾಗಿರುವುದು.
08 ಮಾರ್ಚ್ 2026, 23:30 IST
ಕನ್ಯಾ
ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಉದ್ಯೋಗದ ಬಗ್ಗೆ ಆಸಕ್ತಿ ಹೆಚ್ಚುವುದು, ಆದರೆ ವಿದ್ಯಾಭ್ಯಾಸ ನಿಲ್ಲಿಸುವುದು ಸರಿಯಲ್ಲ. ವೃತ್ತಿಯಲ್ಲಿ ಸಮಸ್ಯೆಗಳು ಬಂದರೂ ಧೈರ್ಯದಿಂದ ಎದುರಿಸಲು ಹಿಂಜರಿಕೆ ಬೇಡ.
08 ಮಾರ್ಚ್ 2026, 23:30 IST
ತುಲಾ
ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಲು ಅವಕಾಶ ಇದ್ದರೂ ಸಾಮರ್ಥ್ಯದ ಕೊರತೆ ಕಾಣುವುದು. ಉದ್ಯೋಗದ ಕಾರಣ ಪರಸ್ಥಳದಲ್ಲಿ ವಾಸ ಮಾಡುವ ಅನಿವಾರ್ಯತೆ ಬರಬಹುದು.
08 ಮಾರ್ಚ್ 2026, 23:30 IST
ವೃಶ್ಚಿಕ
ಹಣದ ವಿಚಾರದಲ್ಲಿ ಸರಿಯಾಗಿ ಲೆಕ್ಕ ಪತ್ರವನ್ನು ಕಾಪಾಡುವುದು ಅಗತ್ಯ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಂದರ್ಶನಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿರಿ. ವೃತ್ತಿಯಲ್ಲಿ ಎಚ್ಚರವಹಿಸುವುದು ಲೇಸು.
08 ಮಾರ್ಚ್ 2026, 23:30 IST
ಧನು
ಜೀವನದಲ್ಲಿ ಉನ್ನತವಾದ ಸ್ಥಾನ ಅಲಂಕರಿಸಬೇಕು ಎಂಬ ಉತ್ಕಟ ಅಭಿಲಾಷೆ ಕಾಣುವುದು. ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮದ ಸುಧಾರಣೆಗೆ ಸಾಕಷ್ಟು ಅವಕಾಶಗಳು ಒದಗಿ ಬರಲಿವೆ.
08 ಮಾರ್ಚ್ 2026, 23:30 IST
ಮಕರ
ಸ್ವಾರ್ಥದ ಕೆಲವು ನಿರ್ಧಾರದ ಫಲವಾಗಿ ಆತ್ಮೀಯರು ದೂರಾಗಲಿದ್ದಾರೆ. ಮನರಂಜನೆಗಾಗಿ ಹಣ ವ್ಯಯ ಮಾಡುವುದು ಸರಿಯಲ್ಲ. ಮನಸ್ಸಿನ ಅಸ್ಥಿರತೆ ಅಧ್ಯಾತ್ಮ ಚಿಂತನೆಗೆ ತೊಂದರೆ ಮಾಡಲಿದೆ.
08 ಮಾರ್ಚ್ 2026, 23:30 IST
ಕುಂಭ
ನೆಮ್ಮದಿಗಾಗಿ ಜಗವನ್ನು ಬೆಳಗುವ ಸೂರ್ಯನಾರಾಯಣನನ್ನು ನಮಸ್ಕರಿಸಿ, ಪ್ರಾರ್ಥಿಸಿ. ಕಾನೂನು ಕಾಯಿದೆ ವಿಚಾರದಲ್ಲಿ ಹೋರಾಟ ನಡೆಸಿದರೆ ಜಯ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ತೋರಿ.
08 ಮಾರ್ಚ್ 2026, 23:30 IST
ಮೀನ
ದಾಂಪತ್ಯದಲ್ಲಿ ವಿಚಾರಗಳನ್ನು ಹಂಚಿಕೊಳ್ಳುವುದು ಸಮಸ್ಯೆ ಬಾರದಂತೆ ಕಾಪಾಡುತ್ತದೆ. ಕುಟುಂಬದಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಹೆಂಡತಿಯ ಮಾತುಗಳಿಗೆ ಆದ್ಯತೆ ನೀಡಿರಿ.
08 ಮಾರ್ಚ್ 2026, 23:30 IST