ಮಂಗಳವಾರ, 19 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಬಾಲ್ಯದ ಕನಸು ಈಡೇರುವ ದಿನ
Published 17 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾಧ್ಯಮ ಮಿತ್ರರಿಂದ ತಪ್ಪು ಮಾಹಿತಿ ರವಾನೆಯಾಗಬಹುದು. ಹಾಗಾಗಿ ಜಾಗ್ರತೆ ವಹಿಸಿ. ದೈವಾರಾಧನೆಯಿಂದ ರೈತರಿಗೆ ಅನುಕೂಲ. ಬಾಲ್ಯದ ಕನಸು ಈಡೇರುವ ದಿನವಾಗಿದೆ.
ವೃಷಭ
ದಾಸ್ತಾನನ್ನು ಅಚ್ಚುಕಟ್ಟುಗೊಳಿಸುವ ಸಲುವಾಗಿ ರಿಯಾಯಿತಿಯ ದರದ ಮಾರಾಟವನ್ನು ಮಾಡುವ ಯೋಚನೆ ಮಾಡುವಿರಿ.  ಅಮೂಲ್ಯ ವಸ್ತು ಬಹಳ ದಿನದ ನಂತರ  ಕೈ ಸೇರಲಿದೆ.
ಮಿಥುನ
ಕೆಲವೊಂದು ಅನಿರೀಕ್ಷಿತ ಹಾಗೂ ಉತ್ತಮ ಘಟನೆಗಳು  ಜರುಗಲಿವೆ. ಕುಡಿಯುವ ನೀರಿನ ಶುದ್ಧತೆಯ ಬಗ್ಗೆ  ಗಮನಿಸಿ. ಎಲ್ಲರ ಪ್ರೀತಿ ವಿಶ್ವಾಸವನ್ನು ಗೆಲ್ಲುವಂತಾಗುತ್ತದೆ.
ಕರ್ಕಾಟಕ
ಮಾಡದೇ ಇರುವ ಕೆಲಸಗಳನ್ನು ಪೂರೈಸುವ ಬಗ್ಗೆ ಗಮನಹರಿಸಿ. ಇನ್ನೊಬ್ಬರಿಗೆ ಗೌರವವನ್ನು ಕೊಟ್ಟು ನಂತರದಲ್ಲಿ ನೀವು ಗೌರವವನ್ನುಅಪೇಕ್ಷಿಸಬಹುದು. ದೂರ ಪ್ರಯಾಣದ ಸಾಧ್ಯತೆಗಳು ಹೆಚ್ಚಿವೆ.
ಸಿಂಹ
ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರಿಶ್ರಮದ ಜತೆ ದೇವರ ಕೃಪೆಗೆ ಪಾತ್ರರಾಗಬೇಕು. ಮಗಳ ಮದುವೆಯ ನಿಶ್ಚಯ ಸಂತೋಷವನ್ನು ಉಂಟುಮಾಡುತ್ತದೆ.  
ಕನ್ಯಾ
ರೇಷ್ಮೆ ವ್ಯವಹಾರದಲ್ಲಿ  ಆದಾಯವಿದ್ದು , ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುವಿರಿ. ಸಹೋದ್ಯೋಗಿಗಳ ಎಲ್ಲಾ ಸಲಹೆಗಳನ್ನು ನಿರಾಕರಣೆ ಮಾಡುವುದು ನಷ್ಟಕ್ಕೆ ಕಾರಣವಾಗುವುದು.
ತುಲಾ
ಕಾರ್ಯಕ್ಷೇತ್ರದಲ್ಲಿನ ಒತ್ತಡಗಳನ್ನು ಅನುಭವಿಸಲು ಕಷ್ಟವಾಗಬಹುದು. ಮನರಂಜನೆಗೂ ಸಾಕಷ್ಟು ಸಮಯವನ್ನು ಮೀಸಲಿಟ್ಟು ಮಡದಿ ಮಕ್ಕಳೊಂದಿಗೆ ಸಂತಸದಿಂದ ಇರುವಿರಿ. 
ವೃಶ್ಚಿಕ
ಧಾರ್ಮಿಕ ಮುಖಂಡರ ಸಾಮಾಜಿಕ ಕಳಕಳಿಯ ಮಾತುಗಳು ಆಕರ್ಷಿ ಸಲಿವೆ. ಇಂದಿನಿಂದ ಸಾಮಾಜಿಕ ಸೇವೆ ಮಾಡುವ ನಿರ್ಧಾರ ಕೈಗೊಳ್ಳುವಿರಿ. ವೈಯಕ್ತಿಕ ಪ್ರಗತಿ, ಅಭಿವೃದ್ಧಿಯಿಂದ ಮನಸ್ಸಿಗೆ ಸಂತೋಷವಿರುವುದು.
ಧನು
ಅಡೆತಡೆಗಳು ಮನಸ್ಸನ್ನು ಚಂಚಲಗೊಳಿಸದಂತೆ ಜಾಗ್ರತೆ ವಹಿಸಿ. ಹೀಗೆ ಮಾಡಿದಲ್ಲಿ ಕೆಲಸದ ಗುಣಮಟ್ಟ, ಕರ್ತವ್ಯ ನಿಷ್ಠೆಯು ಮೇಲಧಿಕಾರಿಗಳ ಗಮನಕ್ಕೆ ಬಂದು ಬಡ್ತಿಗೆ ಮೂಲ ಕಾರಣವಾಗುತ್ತದೆ.
ಮಕರ
ಕೆಟ್ಟ ಪರಿಸ್ಥಿತಿಯಿಂದ ಹೊರಗೆ ಬರಲು ಕೆಲವು ಸಮಯದ ತನಕ ಮೌನವಾಗಿರಬೇಕು. ಹಾಡು ಹರಟೆಗಳಲ್ಲಿ ಕಾಲ ಕಳೆಯುವುದು ಬಿಡಿ.ಸೌಂದರ್ಯಪ್ರಜ್ಞೆಯು ಇತರರಿಗೂ ಮುದವನ್ನು ಕೊಡುವಂತಿರಲಿ.
ಕುಂಭ
ತಪ್ಪಿ ಹೋದ ಸ್ವಂತ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಪುನಃ ನಿಮ್ಮ ಕೈ ಸೇರಲು ಪ್ರಯತ್ನ, ತಂತ್ರಗಾರಿಕೆ ಮುಖ್ಯವಾಗುತ್ತದೆ.  ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡುವಿರಿ.
ಮೀನ
ಕಾರ್ಯ ರಂಗದಲ್ಲಿ ಸತತ ಪ್ರಯತ್ನ ಮತ್ತು ಅನುಭವಸ್ಥರ ಸಹಯೋಗದಿಂದ ಪ್ರಗತಿಯನ್ನು ನೋಡಬಹುದು. ಯಾವುದೇ ವಿಚಾರದ ಬಗ್ಗೆ ದೀರ್ಘವಾಗಿ ಆಲೋಚಿಸಿ ತೀರ್ಮಾನಿಸಿದಲ್ಲಿ ಜಯವಾಗುವುದು.
ADVERTISEMENT
ADVERTISEMENT