ಶುಕ್ರವಾರ, 17 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮೋಸವಾಗುವ ಪಾಲುದಾರಿಕೆಯಿಂದ ಹೊರಬರುವ ಚಿಂತನೆ ಸೂಕ್ತ
Published 4 ಮಾರ್ಚ್ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನರರೋಗ ತಜ್ಞರಿಗೆ ಹೊಸ ಅನುಭವಗಳೊಂದಿಗೆ ವಿದೇಶ ಪ್ರಯಾಣದ ಸಾಧ್ಯತೆಗಳು ಮತ್ತು ವೃತ್ತಿ ನಡೆಸಲು ಅವಕಾಶ ಸಿಗಲಿವೆ. ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ.
ವೃಷಭ
ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಯಶಸ್ಸು ಹುಡುಕಿಕೊಂಡು ಬರುವುದರಿಂದ ಸಂತಸವಾಗಲಿದೆ. ಸರಕು ಸಾಗಾಟದಿಂದ ಲಾಭ ಬರುವುದು.
ಮಿಥುನ
ಬಹಳ ದಿನಗಳ ನಂತರ ಮನೆಗೆ ಹಿರಿಯ ಸಹೋದರರ ಆಗಮನ ಸಂತೋಷ ಉಂಟುಮಾಡುವುದು. ಸ್ವಲ್ಪ ಪ್ರಯತ್ನಕ್ಕೂ ಹೆಚ್ಚಿನ ಉಪಯೋಗ ಪ್ರಾಪ್ತಿಯಾಗಲಿದೆ.
ಕರ್ಕಾಟಕ
ಸಂಗೀತಗಾರರಿಗೆ ಪ್ರತಿಭೆ ಹೊರಹಾಕಲು ಹಾಗೂ ಜನಪ್ರಿಯ ರಾಗಲು ವೇದಿಕೆ ಸಿಗಲಿದೆ. ಮಹಿಳೆಯರಿಗೆ ಸ್ವತಂತ್ರ ಉದ್ಯಮದ ಹಾದಿ ಸುಗಮ ವಾಗುವುದು. ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
ಸಿಂಹ
ಒರಟು ವ್ಯಕ್ತಿತ್ವದಿಂದ ಅಥವಾ ಕಹಿಯ ಮಾತುಗಳಿಂದ ಸಹಭಾಗಿಗೆ ಅಥವಾ ಮಕ್ಕಳಿಗೆ ನೋವಾಗಬಹುದು. ಮೋಸಗಳು ನಡೆಯಬಹುದಾದ ಪಾಲುದಾರಿಕೆಯಿಂದ ಹೊರಬರುವ ಚಿಂತನೆ ಸೂಕ್ತವಾದುದು.
ಕನ್ಯಾ
ವ್ಯವಹಾರಿಕವಾಗಿ ಮಾತನಾಡುವಾಗ ದಾಕ್ಷಿಣ್ಯಗಳಿಗೆ ಒಳಗಾಗುವುದು ಸರಿಯಲ್ಲ. ಕೌಟುಂಬಿಕವಾಗಿ ನೆಲೆ ನಿಂತದ್ದರಿಂದ ಮನಸ್ಸಿಗೆ ಸಮಾಧಾನವಾಗುವುದು. ಬಂಧುಗಳೊಡನೆ ಸುಖ ಭೋಜನ ನಡೆಯಬಹುದು.
ತುಲಾ
ಯಾವುದೇ ವಿಷಯದಲ್ಲಿ ಜವಾಬ್ದಾರಿಯನ್ನು ಹೊರುವ ಮೊದಲು ಅದರ ಬಗೆಗಿನ ಸಾಮಾನ್ಯ ಜ್ಞಾನ, ಲಾಭ-ನಷ್ಟ, ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಗಮನವಿರಲಿ. ವೃತ್ತಿಯಲ್ಲಿ ಗಮನವಿರಲಿ.
ವೃಶ್ಚಿಕ
ಉದ್ಯೋಗಕಾಂಕ್ಷಿಗಳು ಸಂದರ್ಶನ ಎದುರಿಸಲು ಬೇಕಾದ ತಯಾರಿಯನ್ನು ನಡೆಸಿಕೊಳ್ಳಿ. ಮಕ್ಕಳಿಂದ ಅಹಿತಕರ ಕಾರ್ಯಗಳು ನಡೆದು ಮಾನಸಿಕ ಚಿಂತೆ ಉಂಟಾಗಬಹುದು. ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ.
ಧನು
ಜವಾಬ್ದಾರಿಯುತ ಹುದ್ದೆ ನಿಮ್ಮ ಪಾಲಿಗೆ ಬರಲಿದೆ. ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಗಮನಹರಿಸಿ. ಕುಟುಂಬದ ಹಿಂದಿನ ವಿಚಾರ ತಿಳಿಯಲು ದಾಯಾದಿಗಳಿಂದ ಅನುಕೂಲವಾಗಲಿದೆ.
ಮಕರ
ವೃತ್ತಿಪರ ಗೊತ್ತಿಲ್ಲದ ವಿಚಾರ ಕೇಳಿ ತಿಳಿದುಕೊಳ್ಳುವ ಮೂಲಕ ಕೆಲಸಗಳು ಸುಗಮವಾಗಲಿವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡಬೇಕಾಗಬಹುದು. ದಾಂಪತ್ಯದಲ್ಲಿ ಸಂಶಯದ ವಾತಾವರಣ ಇರಲಿದೆ.
ಕುಂಭ
ಗೆಳೆಯನೊಬ್ಬನ ಭೇಟಿಯಿಂದಾಗಿ ಜೀವನ ಮಹತ್ವದ ತಿರುವೊಂದನ್ನು ಪಡೆದುಕೊಳ್ಳಲಿದೆ. ಅವಿವಾಹಿತರಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಪ್ರಾಪ್ತಿಯಾಗುತ್ತವೆ. ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಮೂಡುವುದು.
ಮೀನ
ದೇವರ ಮತ್ತು ಹಿರಿಯರ ಅನುಗ್ರಹ ಸಂಪಾದಿಸುವುದರಿಂದ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹ ಮೂಡುವುದು. ಚಿಲ್ಲರೆ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
ADVERTISEMENT
ADVERTISEMENT