ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಮಾತನಾಡಿ
Published 6 ಮಾರ್ಚ್ 2026, 19:01 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಂಡು ಅದರಲ್ಲಿ ಯಶಸ್ಸನ್ನು ಪಡೆಯುವಿರಿ. ವಿಚಾರದ ಬಗೆಗಿನ ಯೋಚನೆಯಿಂದ ಉಳಿದೆಲ್ಲಾ ಕೆಲಸದಲ್ಲಿ ಮನಸ್ಸಿಲ್ಲದಂತಾಗುವುದು.
ವೃಷಭ
ಸತ್ಯನಾರಾಯಣ ಸ್ವಾಮಿ ಸೇವೆಯನ್ನು ಮಾಡುವುದರಿಂದ ಜಟಿಲ ಸಮಸ್ಯೆಗಳು ಸೌಹಾರ್ದಯುತವಾಗಿ ಬಗೆಹರಿಯಲಿವೆ. ಉನ್ನತ ವಿದ್ಯಾಭ್ಯಾಸ ಮಾಡುವ ಕನಸಿಗೆ, ಪರಿಚಿತರಿಂದ ಆರ್ಥಿಕ ಬಲ ಸಿಗಲಿದೆ.
ಮಿಥುನ
ಕೇವಲ ಕ್ಷಣಿಕ ಸುಖಗಳಿಗೆ ಗಮನ ನೀಡದೆ ಗಂಭೀರವಾಗಿ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಸ್ವಲ್ಪ-ಸ್ವಲ್ಪ ಜವಾಬ್ದಾರಿ ಹೊರುವುದಕ್ಕಿಂತ ನಿರ್ದಿಷ್ಟ ಕೆಲಸಕ್ಕೆ ಸಂಪೂರ್ಣ ಗಮನ ಕೊಡಿ.
ಕರ್ಕಾಟಕ
ದೈವಾನುಗ್ರಹದಿಂದ ಸಂತಾನ ಭಾಗ್ಯದ ಸುದ್ದಿ ಕೇಳುವಿರಿ. ಅದರ ಫಲವಾಗಿ ಮನೆಯಲ್ಲಿ ಸಡಗರದ ವಾತಾವರಣ ಸೃಷ್ಟಿಯಾಗಲಿದೆ. ಕೆಲಸಗಳು ತೀವ್ರಗತಿಯಲ್ಲಿ ಸಾಗುತ್ತಿರುವುದು ತುಸು ಸಂತಸವೆನಿಸುವುದು.
ಸಿಂಹ
ಕೆಲಸ ಕಾರ್ಯದಲ್ಲಿ ಗುಣ-ದೋಷದ ಬಗ್ಗೆ ಯೋಚನೆ ಮಾಡದೇ ಮುಂದುವರಿಯುವುದು ಸರಿಯಲ್ಲ. ಉಷ್ಣಾಧಿಕ್ಯವಾಗಿ ಆರೋಗ್ಯದಲ್ಲಿ ಏರುಪೇರಾಗಬಹುದು. ಬರಹಗಾರರಿಗೆ ಅವಕಾಶಗಳು ದೊರೆಯಲಿವೆ.
ಕನ್ಯಾ
ತರಕಾರಿ ವ್ಯಾಪಾರಿಗಳು ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿದರೆ ಹಾದಿ ಸುಗಮವಾಗಿ ಸಾಗುತ್ತದೆ. ಹಿರಿಯರು ಹೇಳಿದಂತೆ ದೂರ ದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದನ್ನು ಕಲಿಯಿರಿ.
ತುಲಾ
ಅಸೂಯೆ ಪಡುವ ಸಹೋದ್ಯೋಗಿಗಳ ನಡುವೆ ಕೆಲಸ ನಿರ್ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ವಿಚಾರದಲ್ಲಿ ಅತಿ ಪ್ರಯತ್ನ ಅತ್ಯಗತ್ಯ. ದೇಹದಲ್ಲಿ ಉಷ್ಣಾಧಿಕ್ಯ ಆಗುವ ಲಕ್ಷಣಗಳಿವೆ.
ವೃಶ್ಚಿಕ
ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ವರ್ತನೆಯಲ್ಲಿ ಸಮತೋಲನ ಹಾಗೂ ಸ್ಥಿರತೆ ಕಾಯ್ದುಕೊಳ್ಳುವುದು ಬದುಕಿಗೆ ಕಾರಣವಾಗುತ್ತದೆ. ಸರಕು ಸಾಗಾಣೆ ಮತ್ತು ಸಾರಿಗೆ ವ್ಯವಸ್ಥೆಯವರಿಗೆ ಆದಾಯ ಇರುತ್ತದೆ.
ಧನು
ದೂರ ಪ್ರಯಾಣ ಮಾಡುವ ಅನಿವಾರ್ಯತೆ ಬಂದಲ್ಲಿ ರಾಹುಕಾಲದ ನಂತರದಲ್ಲಿ ಪ್ರಯಾಣ ಬೆಳೆಸಿ. ಎಲ್ಲಾ ಕೆಲಸಗಳೂ ಉತ್ತಮ ಉದ್ದೇಶವನ್ನೇ ಹೊಂದಿರುವುದು. ಅವಿವಾಹಿತರಿಗೆ ಶುಭ ಫಲಗಳು ಲಭಿಸಲಿವೆ.
ಮಕರ
ಕೈಕೆಳಗಿನ ನೌಕರರ ನೆರವು ಅಗತ್ಯವೆನಿಸಲಿದೆ. ಶ್ರಮದ ದುಡಿಮೆಗೆ ಉತ್ತಮ ಫಲ ದೊರೆತಂತೆ ಆಗುವುದು. ವಿಮೆ ಸಲಹೆಗಾರರಿಗೆ ವೃತ್ತಿ ರಂಗದಲ್ಲಿ ಉತ್ತಮ ಪ್ರಚೋದನೆಯಿಂದ ಯಶಸ್ಸು ಕಂಡುಬರಲಿದೆ.
ಕುಂಭ
ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಮಾತುಕತೆ ನಡೆಸುವುದು ಒಳ್ಳೆಯದು. ನಿಧಾನವಾಗಿಯಾದರೂ ಸ್ವಂತ ವ್ಯವಹಾರದ ಲಾಭವು ಬಂದು ಕೈ ಸೇರಿದ ಸಂತಸ ನಿಮ್ಮದಾಗುವುದು.
ಮೀನ
ಒಳ್ಳೆಯ ಮಿತ್ರರಿಂದ ಕಂಪನಿಯ ಮುಖ್ಯ ವ್ಯಕ್ತಿಯ ಪರಿಚಯ ಹಾಗೂ ಅಭಿವೃದ್ಧಿ ಮಾಹಿತಿ ದೊರೆಯುತ್ತದೆ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವವು ಅಗತ್ಯವಾಗಿರುವುದು.
ADVERTISEMENT
ADVERTISEMENT