ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ವಾಹನ ಖರೀದಿ ಯೋಜನೆಯನ್ನು ಮುಂದೂಡಿ
Published 7 ಮಾರ್ಚ್ 2026, 19:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದಿನ ಯೋಜನೆಗಳಿಗೆ ಮನೆಯವರಿಂದ ವಿರೋಧಭಾವ ವ್ಯಕ್ತವಾಗಬಹುದು. ಶತ್ರುಗಳು ಕಾರ್ಯವೈಖರಿಯಿಂದ ಚಕಿತಗೊಂಡು ಸನಿಹಕ್ಕೂ ಬರಲಾರರು. ವಾಹನ ಖರೀದಿಯನ್ನು ಮುಂದೂಡಿ.
ವೃಷಭ
ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ತಯಾರಿಯನ್ನು ಮಾಡಲು ಸೂಕ್ತದಿನ. ಜವಾಬ್ದಾರಿಯ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಬರಲಿದೆ. ಪಾಲುದಾರಿಕೆಯಲ್ಲಿ ಅಭಿಪ್ರಾಯ ಭೇದ ಉಂಟಾಗಬಹುದು.
ಮಿಥುನ
ತಪ್ಪುಗಳಿಗೆ ಪಶ್ಚಾತಾಪ ಪಡುತ್ತಿದ್ದರೂ ತಪ್ಪುಗಳು ಪುನರಾವರ್ತನೆ ಯಾಗುತ್ತಿವೆ. ವಿದೇಶ ಯಾತ್ರಿಗಳಿಗೆ ಪ್ರಯಾಣದಲ್ಲಿ ಸುಖ, ನಿರ್ಭಯದ ವಾತಾವರಣ ಉಂಟಾಗಲಿದೆ.
ಕರ್ಕಾಟಕ
ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಲಿವೆ. ವ್ಯವಹಾರಕ್ಕೆ ಆತಂಕದ ಪರಿಸರ ಬರಬಹುದು. ಜೀವನದಲ್ಲಿ ಅಧಿಕ ಶ್ರಮದಿಂದ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿ.
ಸಿಂಹ
ಬರಹಗಾರರಿಗೆ ಕೀರ್ತಿ ಅರಸಿ ಬರುವುದು. ಬದುಕಿನಲ್ಲಿ ಸ್ಥಿರತೆಯ ಅಭಾವ ಕಾಣಲಿದೆ. ಯಾವುದೇ ರೀತಿಯ ಖರೀದಿಯಲ್ಲಿ ಎಚ್ಚರವಿರಲಿ, ಮೋಸ ಹೋಗುವ ಸಂಭವವಿದೆ. ರೇಷ್ಮೆ ಬೆಳಗಾರರಿಗೆ ಲಾಭ ಆಗುತ್ತದೆ.
ಕನ್ಯಾ
ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವುದರಿಂದ ಯಶಸ್ವಿಯಾಗುವಿರಿ. ಋಣಬಾಧೆಯಿಂದ ಮುಕ್ತರಾಗಬಹುದು. ಎಂಜಿನಿಯರಿಂಗ್‌ ವ್ಯಾಸಂಗ ಮಾಡುವವರಿಗೆ ಉತ್ತೇಜನ ದೊರೆಯುವುದು.
ತುಲಾ
ಸ್ನೇಹಿತರಲ್ಲಿ ಮುಕ್ತವಾಗಿ ಮಾತನಾಡುವುದರಿಂದ ಮಾನಸಿಕ ಸಮಾಧಾನ ದೊರೆತು ಅನುಕೂಲ ವಾತಾವರಣದ ಅನುಭವ ದೊರಕಲಿದೆ. ಉತ್ತಮ ದೈವಾನುಗ್ರಹದಿಂದ ಕೆಲಸಗಳೆಲ್ಲವೂ ನಿರಾಳವಾಗಿ ನೆರೆವೇರುವುದು.
ವೃಶ್ಚಿಕ
ಉದ್ಯೋಗ ದೊರೆಯುವ ಸುಳಿವಿನ ಕಾರಣದಿಂದ ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆಲ್ಲಾ ದೂರಾಗಲಿವೆ. ವಿವೇಕಯುಕ್ತ ನಡವಳಿಕೆ ಪ್ರಯೋಜನ ನೀಡುತ್ತದೆ.
ಧನು
ತಾಂತ್ರಿಕ ಕ್ಷೇತ್ರದಲ್ಲಿ ಸಲಹೆ ಸೂಚನೆಗಳಿಗೆ ಅಧಿಕಾರಿ ವರ್ಗದವರಲ್ಲಿ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯದ ಪರ್ವತ ಎದುರಾಗುವುದರಿಂದ ವಿದ್ಯಾರ್ಜನೆಯಲ್ಲಿ ಸ್ವಲ್ಪ ಹಿನ್ನಡೆ.
ಮಕರ
ಕುಟುಂಬದ ಸರ್ವತೋಮುಖ ಬೆಳವಣಿಗೆಗೆ ಪಾತ್ರ ಬಹಳ ಮುಖ್ಯ ಎಂಬುದು ಕುಟುಂಬ ವರ್ಗಕ್ಕೆ ಮನದಟ್ಟಾಗುವುದು. ಪಕ್ಷದ ಧುರೀಣರ ಮಾತಿನಂತೆ ನಡೆಯುವುದರಿಂದ ಅನುಕೂಲ ಕಾಣುವಿರಿ.
ಕುಂಭ
ನಿಮ್ಮ ಹಾವಭಾವ, ಸ್ನೇಹಪರವಾದ ಸ್ವಭಾವವು ಇತರರ ಪ್ರಭಾವ ಬೀರಲಿದೆ. ನೆರೆಹೊರೆಯವರು ಸರಳತೆಯನ್ನು ದುರುಪಯೋಗ ಪಡೆಸಿಕೊಂಡಾರು ಗಮನವಿರಲಿ.
ಮೀನ
ಅಧಿಕಾರಿ ವರ್ಗದವರಲ್ಲಿ ಅವಶ್ಯಕತೆಗಿಂತ ಜಾಸ್ತಿ ಮಾತನಾಡುವುದು ಸಮಸ್ಯೆ ಕರೆದಂತಾಗುವುದು. ಬಂಧು ಮಿತ್ರರೊಡನೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಂತಾಗಲಿದೆ. ದ್ವೇಷ ಮನೋಭಾವಗಳು ಸರಿಯಾಗಲಿವೆ.
ADVERTISEMENT
ADVERTISEMENT