ಮಂಗಳವಾರ, 19 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಹಳೆಯ ಸ್ನೇಹಿತರೇ ಕಷ್ಟ ಕಾಲದಲ್ಲಿ ಕೈಹಿಡಿಯುವವರು
Published 18 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿನ ಓಡಾಟ ನಿಮಗೆ ಹೆಚ್ಚಿನ ಸ್ಥಾನಮಾನ ಜೊತೆಯಲ್ಲಿ ಸಮವಾದ ಆಯಾಸವನ್ನು ತಂದು ಕೊಡಲಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಮ್ಮ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು.
ವೃಷಭ
ನಿಮ್ಮ ಯಶಸ್ಸಿನ ಮೆಟ್ಟಿಲಿಗೆ ಶತ್ರು ಬಾಧೆ ಉಂಟಾಗಲಿದ್ದು ಇದರಿಂದಾಗಿ ಮಾನಸಿಕವಾಗಿ ಅಸಮತೋಲನದ ಅನುಭವ ಆಗಲಿದೆ. ಶ್ರಮಜೀವಿಗಳಿಗೆ ಉತ್ತಮ ಆದಾಯವಿರುವುದು. ಆರೋಗ್ಯದ ಬಗ್ಗೆ ಗಮನವಿರಲಿ.
ಮಿಥುನ
ಈ ದಿನ ನೀವು ಮಾಡುವ ಕೆಲಸಗಳಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವಂತಾಗುವುದು. ಹಿರಿಯರ ಆಶೀರ್ವಾದವು ಎಲ್ಲಾ ಕಾರ್ಯಗಳಲ್ಲೂ ಜಯವನ್ನು ತಂದುಕೊಡಲಿದೆ. ಹಣದ ವಿಷಯದಲ್ಲಿ ಜಾಗೃತರಾಗಿರಿ.
ಕರ್ಕಾಟಕ
ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಓದಿನಿಂದಾಗಿ ಬೇಸರಗೊಂಡು ಬದಲಾವಣೆಯನ್ನು ಬಯಸುವಂತಾಗಲಿದೆ. ಸೇವಕ ವರ್ಗದವರಿಂದ ಹೊಸದೊಂದು ಪಾಠ ಕಲಿಯುವ ಕಾಲ ಬರಲಿದೆ.
ಸಿಂಹ
ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲಗಳಿರುವುದಿಲ್ಲ. ಸ್ಪರ್ಧಾತ್ಮಕ ಭಾವನೆಯಲ್ಲಿರುವ ನಿಮಗೆ ಗೆಲುವಿನ ಸಿಹಿ ಸಿಗಲಿದೆ. ಇದು ನಿಮಗೇ ಅಚ್ಚರಿ ಮೂಡಿಸುತ್ತದೆ.
ಕನ್ಯಾ
ಮಾನಸಿಕ ಧೈರ್ಯ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಧ್ಯಾನ ಮಾರ್ಗದಲ್ಲಿ ಸಂಚರಿಸಿ. ಮನೆ ಕಟ್ಟುವ ಕೆಲಸಗಳು ನಿರ್ವಿಘ್ನವಾಗಿ ಮುಂದುವರೆಯುವ ಬಗ್ಗೆ ಮಹಾಗಣಪತಿಯಲ್ಲಿ ಪ್ರಾರ್ಥನೆ ಮಾಡಿ. ಸಂತಾನದ ಸುದ್ದಿ ಆನಂದ ತರಲಿದೆ.
ತುಲಾ
ಕೌಟುಂಬಿಕವಾದ ಗೌಪ್ಯತೆಯ ವಿಚಾರ ನಿಮ್ಮಿಂದ ಇನ್ನೊಬ್ಬರಿಗೆ ತಿಳಿಯದಂತೆ ಜಾಗ್ರತೆವಹಿಸಿ. ಹಳೇಯ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಅವರುಗಳೇ ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವ ವ್ಯಕ್ತಿಗಳಾಗಿರುತ್ತಾರೆ.
ವೃಶ್ಚಿಕ
ಸಾಲಗಾರರ ಕಿರುಕುಳ ಅಧಿಕವಾಗುವ ಲಕ್ಷಣಗಳಿದೆ. ಕೆಲವು ಆಕಸ್ಮಿಕ ಪ್ರಯಾಣವನ್ನು ಮಾಡಬೇಕಾಗಬಹುದು. ಬಹಳ ದಿನದ ನಂತರ ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿ ಮನಸ್ಸು ನಿರಾಳವಾಗುವುದು.
ಧನು
ಇನ್ನೊಬ್ಬರಿಗೆ ಹಿತ ಬಯಸುವುದು ನಿಮ್ಮ ಏಳಿಗೆಗೆ ಪೂರಕ ಎಂದು ಮರೆಯದಿರಿ. ಕಿಂಚಿತ್ ಕಾರ್ಯಸಿದ್ದಿಯಿಂದಲೂ ನೆಮ್ಮದಿ ಕಂಡು ಬರಲಿದೆ. ಖರ್ಚು ವೆಚ್ಚಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವ ಪ್ರಯತ್ನ ನೆಡೆಸಿ.
ಮಕರ
ಪ್ರಭಾವಿ ವ್ಯಕ್ತಿಗಳ ಸಂಪರ್ಕವು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಉಪಯೋಗವಾಗುವುದು. ದೂರ ಸಂಚಾರದಲ್ಲಿ ವಾಹನದ ಸಮಸ್ಯೆ ಎದುರಾಗಬಹುದು. ಮನೆಯಲ್ಲಿ ಶಾಂತ ವಾತಾವರಣವನ್ನು ಕಾಪಾಡಿಕೊಳ್ಳಿರಿ.
ಕುಂಭ
ವ್ಯಾಪಾರಸ್ಥರು ಉದ್ಯೋಗದಲ್ಲಿ ನಷ್ಟದಂತಹ ಸಮಸ್ಯೆ ಎದುರಾದರೂ ಸಹ ಧೃತಿಗೆಡುವ ಅಗತ್ಯವಿಲ್ಲ. ಅನಿವಾರ್ಯ ಕಾರಣದಿಂದ ಭೋಜನದ ಸಮಯ ವ್ಯತ್ಯಾಸವಾಗುವುದು. ಸಿಹಿ ತಿನಿಸು ತಯಾರಕರಿಗೆ ಬೇಡಿಕೆ ಹೆಚ್ಚಳ.
ಮೀನ
ಪ್ರಾಣಮಿತ್ರರ ಸಹಕಾರದಿಂದ ನಿಮ್ಮ ಜೀವನ ಮಟ್ಟದಲ್ಲಿ ಉನ್ನತ ಸ್ಥಾನವನ್ನು ಮುಟ್ಟುವುದಕ್ಕೆ ಸಹಾಯವಾಗುವುದು. ಗುರು ನಿಂದನೆಯಂತಹ ಪಾಪದ ಕೆಲಸ ಮಾಡಬೇಡಿ. ಕಳೆದುಕೊಂಡ ವಸ್ತು ಪುನಃ ನಿಮ್ಮ ಕೈ ಸೇರಲಿದೆ.
ADVERTISEMENT
ADVERTISEMENT