ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಬರಬೇಕಾದ ಹಣ ಕೈ ಸೇರಲು ಯತ್ನ ಅಗತ್ಯ
Published 11 ಮಾರ್ಚ್ 2026, 23:57 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯೋಚನೆ ಖರ್ಚಿಗೆ ದಾರಿಯಾದರೂ, ಅದರ ಫಲದಿಂದ ಸಂತೋಷವಿರುವುದು. ಆರೋಗ್ಯ ಸಧೃಢವಾಗಿ ಇರುವುದು. ವೃತ್ತಿಯಲ್ಲಿ ದಾಖಲೆ ತೋರಿಸಿ ಉತ್ತರಿಸುವ ಜಯ ಪ್ರಾಪ್ತಿ.
ವೃಷಭ
ಜೀವನದಲ್ಲಿದ್ದ ನಿರುತ್ಸಾಹ  ದೂರ ಮಾಡಿಕೊಂಡು  ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಿರಿ. ಹಣ್ಣು ಹೂವಿನ ಮಾರಾಟಗಾರರಿಗೆ ಸಾಧಾರಣದ ಮಾರಾಟ.  ಆಧ್ಯಾತ್ಮಿಕ ಮಾತುಕತೆಗಳಲ್ಲಿ ತೊಡಗುವಿರಿ.
ಮಿಥುನ
ತರಬೇತಿ ಹೊಂದಿದ ಮರದ ಕೆತ್ತನೆಯ ಕುಶಲಕರ್ಮಿಗಳಿಗೆ ಆದಾಯ ಮತ್ತು ಬೇಡಿಕೆ ಹೆಚ್ಚಲಿದೆ. ನಿವೃತ್ತಿ ಜೀವನದಲ್ಲಿ ನೆಲೆ ಕಂಡ ಸಂತೃಪ್ತಿ ಭಾವ ಮೂಡಲಿದೆ. ಸಿಬ್ಬಂದಿ ವರ್ಗದವರಿಂದ ಸಹಕಾರ ನಿರೀಕ್ಷಿಸಬೇಡಿ.
ಕರ್ಕಾಟಕ
ಮನೆಯಲ್ಲಿ ಕುಟುಂಬಸ್ಥರೆಲ್ಲಾ ಒಂದಾಗುವಂಥ ಸನ್ನಿವೇಶಗಳಿವೆ. ವಿದೇಶಿ ಸಂಸ್ಥೆಯೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಸೂಕ್ತ ದಿನ. ಮನಸ್ಸು ಉಲ್ಲಾಸಿತಗೊಂಡಿರುವುದು.
ಸಿಂಹ
ವಾಹನದ ಅಥವಾ ಎಲೆಕ್ಟ್ರಿಕಲ್‌ ವಸ್ತುಗಳ ರಿಪೇರಿ ಹಣವ್ಯಯಕ್ಕೆ ಕಾರಣವಾಗುತ್ತದೆ. ಧನ ಸಂಪಾದನೆಯಿಂದ ಆತ್ಮಸ್ಥೈರ್ಯ ವೃದ್ಧಿ. ಮಾತಾ-ಪಿತೃಗಳಿಂದ ಆಸೆಗಳಿಗೆ ಪ್ರೋತ್ಸಾಹ ದೊರೆಯುತ್ತದೆ.
ಕನ್ಯಾ
ಉದಾರ ಮನೋಭಾವನೆಯ ಚಿಂತನೆಯಿಂದ ಅನುಕೂಲ ಆಗುತ್ತದೆ. ಬರಬೇಕಾದ ಹಣ ಕೈ ಸೇರಲು ಯತ್ನ ಅಗತ್ಯ. ಕಲಿಕೆಯಲ್ಲಿ ಸೋಮಾರಿತನದಿಂದ ಹಿಂದುಳಿಯುವಿರಿ.
ತುಲಾ
ಕಾರ್ಖಾನೆ ವೃತ್ತಿಯವರಿಗೆ ಲಾಭ ಇಲ್ಲವಾದರೂ, ದೈನಂದಿನ ನೆಮ್ಮದಿಗಾಗಲಿ, ಸಂತೋಷಕ್ಕಾಗಲಿ  ತೊಂದರೆ ಇರಲಾರದು. ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಸಂತಸಕರ ಬೆಳವಣಿಗೆಗಳು ಕಂಡುಬರಲಿವೆ.
ವೃಶ್ಚಿಕ
ಕಚೇರಿ ಕೆಲಸಗಳನ್ನು ಸಮರ್ಪಣಾ ಭಾವನೆಯಿಂದ ನಿರ್ವಹಿಸಿ. ಮನಸ್ಸಿಗೆ ಮುದ ತರುವ ಸಂಗತಿಗಳು ಜರುಗಲಿವೆ.  ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುವುದು.
ಧನು
ಅವಕಾಶಗಳು ಅರಸಿ ಬರಲಿವೆ. ವಿವೇಚನೆಯಿಂದ ಉಪಯೋಗಿಸಿಕೊಂಡಲ್ಲಿ ಅನುಕೂಲವಾಗಲಿದೆ. ಕೆಲಸವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ.
ಮಕರ
ವ್ಯವಹಾರದಲ್ಲಿ ನಿಮ್ಮೊಡನೆ ಕೈ ಜೋಡಿಸಿದ್ದ ದಾಯಾದಿ ವರ್ಗದವರಿಂದ ಅಸೂಯೆಯ ಮಾತುಗಳಲ್ಲದೇ ತೊಂದರೆಗಳೂ ಆಗಬಹುದು. ಉನ್ನತ ಅಧಿಕಾರಿಗಳ ಸಂಪರ್ಕದಿಂದ ಕೆಲಸಗಳಿಗೆ ಪುಷ್ಟಿ.
ಕುಂಭ
ಅಧಿಕಾರಿಗಳ ಜತೆ ಸರಿ ಸಮಯದಲ್ಲಿ ಮುಕ್ತ ಚರ್ಚೆ ಮಾಡಿದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಬಹುದು. ವೈದ್ಯ ವೃತ್ತಿಯವರಿಗೆ ಹೊಸ ಅನುಭವದ ಜೊತೆಯಲ್ಲಿ ಲಾಭದ ದಿನ.
ಮೀನ
ರೇಷ್ಮೆ ವಸ್ತುಗಳ ತಯಾರಕರಿಗೆ, ಮಾರಾಟಗಾರರಿಗೆ ವ್ಯಾಪಾರವಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸು ಸಾಧಿಸಲು ಕಷ್ಟವಾಗುವುದು. ಮನೋಕಾಮನೆಗಳು ಪೂರ್ಣಗೊಂಡಾವು.
ADVERTISEMENT
ADVERTISEMENT