ಮಂಗಳವಾರ, 19 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಕ್ರೀಡೆಗೆ ಉತ್ತೇಜನ ಪಡೆಯುವಿರಿ
Published 25 ಏಪ್ರಿಲ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಬೇಕೆಂಬ ಮಾತಿನ ಮಹತ್ವ ನಿಮಗೆ ಅನುಭವದಿಂದಾಗಿ ತಿಳಿದು ಬರಲಿದೆ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರುವುದು ಒಳ್ಳೆಯದು. ಕ್ರೀಡೆಗೆ ಉತ್ತೇಜನ ಪಡೆಯುವಿರಿ.
ವೃಷಭ
ಉತ್ತಮವಾದ ವಾಕ್‌ ಸಾಮರ್ಥ್ಯವನ್ನು ಹೊಂದಿರುವ ನಿಮಗೆ ಜನರ ಮನಸ್ಸಿನಲ್ಲಿ ಸ್ಥಾನ ಹೊಂದುವುದು ಕಷ್ಟವಾಗದ ವಿಚಾರವಾಗಿರುತ್ತದೆ. ಮನೆಗೆ ನೂತನ ಸಾಕು ಪ್ರಾಣಿಯ ಆಗಮನ ಮಕ್ಕಳಲ್ಲಿ ಸಂತೋಷ ಮೂಡಿಸಲಿದೆ.
ಮಿಥುನ
ನಿಮ್ಮ ಬುದ್ಧಿವಂತಿಕೆಯ, ನಿಮ್ಮ ಸಾಮರ್ಥ್ಯದ ಅರಿವು ನಿಮಗಿಲ್ಲ, ಧೈರ್ಯದಿಂದ ಮುನ್ನಡೆದರೆ ಯಶಸ್ಸು ನಿಮ್ಮದು. ನಿಮ್ಮ ಉತ್ಸಾಹ ಹೆಚ್ಚಿಸಿಕೊಳ್ಳುವ ಸಮಯ. ಮಡದಿ ಜತೆಗಿನ ಮನಸ್ತಾಪಗಳೆಲ್ಲಾ ಸರಿ ಹೋಗುವುದು.
ಕರ್ಕಾಟಕ
ಪಾಲುದಾರಿಕೆಯಲ್ಲಿ ನಿರೀಕ್ಷೆಗೂ ಮೀರಿದ ಲಾಭವಾದರೂ ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಕೆಲಸದಲ್ಲಿ ವಿಘ್ನ ಎದುರಾಗಲಿದೆ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡ ಬೇಕಾಗಬಹುದು.
ಸಿಂಹ
ನಿಮ್ಮ ಉದಾತ್ತ ಚಿಂತನೆಯ ಲಾಭವನ್ನು ನಿಮ್ಮ ಸುತ್ತ ಮುತ್ತಲಿನವರು ಪಡೆವ ಸುದಿನ. ಕುಟುಂಬದಲ್ಲಿನ ಕಲಹ, ಮಾನಸಿಕ ಕ್ಷೋಭೆ, ಸಮಸ್ಯೆ ಹಂತ ಹಂತವಾಗಿ ದೂರಾಗುವುದು. ಹಿರಿಯರ ಆರೋಗ್ಯದಲ್ಲಿ ಪ್ರಗತಿ.
ಕನ್ಯಾ
ಬಹಳ ದಿನಗಳ ನಂತರ ಸೋದರನ ಆಗಮನದಿಂದಾಗಿ ಮನೆಯಲ್ಲಿ ಸಂಭ್ರಮ. ಹಣದ ವಿಚಾರದಲ್ಲಿ ತಪ್ಪು ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವಿರಿ. ಕಷ್ಟಪಟ್ಟು ದುಡಿಯುವುದರಿಂದ ಹಣ ಕೈಯಲ್ಲಿ ನಿಲ್ಲುವುದು.
ತುಲಾ
ಕರ್ತವ್ಯ ನಿಷ್ಠೆ ಬಗ್ಗೆ ನಿಮ್ಮ ಮೇಲೆ ಆರೋಪ ಬರದಂತೆ ನಿಮ್ಮ ವ್ಯವಹಾರ ಇರುವುದು ಉತ್ತಮ. ಬಟ್ಟೆ ವ್ಯಾಪಾರಿಗಳಿಗೆ ಇಂದು ಉತ್ತಮ ಮಾರಾಟ ಹಾಗೂ ಉತ್ತಮ ಲಾಭವಾಗುವುದು. ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವಿರಿ.
ವೃಶ್ಚಿಕ
ನಿಮ್ಮದೇ ಜನರನ್ನು ನೀವು ನಿಯಂತ್ರಿಸುವ ಕೆಲಸದಲ್ಲಿ ಚಾಣಾಕ್ಷತನ ತೋರಿಸುವುದು ಅನಿವಾರ್ಯವಾಗುತ್ತದೆ. ಗರ್ವ ತೋರಿಸುವ ಜನರನ್ನು ದೂರವಿಡುವಂತಹ ಉಪಾಯ ಮಾಡುವುದು ಒಳ್ಳೆಯದು.
ಧನು
ಮನೆ ನಿರ್ಮಾಣ ಕೆಲಸಗಳು ಪೂರ್ಣಗೊಂಡು ನೆಮ್ಮದಿ ಪ್ರಾಪ್ತಿ. ಸ್ನೇಹಿತ ರೊಂದಿಗಿನ ಹರಟೆ ಮನಸ್ಸನ್ನು ಹಗುರ ಗೊಳಿಸಲು ಕಾರಣ ವಾಗುವುದು. ಪರರ ಟೀಕೆ ಟಿಪ್ಪಣಿಗೆ ಕಿವಿಗೊಡುವ ಮನಸ್ಥಿತಿಯನ್ನು ಬದಲಿಸಿಕೊಳ್ಳಿರಿ.
ಮಕರ
ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದಾದ ಹಲವು ಸಮಸ್ಯೆ ಗಳನ್ನು ನಿಮ್ಮ ಮೌನದಿಂದಾಗಿ ಹೆಚ್ಚು ಮಾಡಿಕೊಳ್ಳುವಿರಿ. ಈ ದಿನ ಆತ್ಮ ಗೌರವ, ರಕ್ಷಣೆ ದೃಷ್ಟಿಯಿಂದ ತಪ್ಪುಗಳನ್ನು ಮಾಡಬೇಕಾದ ಪರಿಸ್ಥಿತಿ ಬರುವುದು.
ಕುಂಭ
ಯಾರನ್ನು ನಿರ್ಲಕ್ಷೆ ಮಾಡುತ್ತಿರುವಿರೋ ಅವರಿಂದಲೇ ನಿಮ್ಮ ಕೆಲಸ ಆಗುವ ಸಾಧ್ಯತೆಗಳಿದೆ. ಶುಭ ಕಾರ್ಯಗಳಿಗೆ ಉತ್ತಮ ಕಾಲವಾದರೂ ಬರುವ ಅವಕಾಶಗಳಿಂದ ವಂಚಿತರಾಗದಿರಿ. ಕೃಷಿ ಯಂತ್ರ, ವಾಹನ ಖರೀದಿಸಬಹುದು.
ಮೀನ
ಪ್ಲಂಬರಿಂಗ್ ವ್ಯವಹಾರದಲ್ಲಿ ಮತ್ತು ಎಲೆಕ್ಟ್ರಾನಿಕ್ ವ್ಯಾಪಾರದಲ್ಲಿ ಲಾಭ ಪಡೆಯುವಿರಿ, ಆದರೆ ಹಣ ಕೈಯಲ್ಲಿ ಉಳಿಯುವುದು ಕಷ್ಟಕರ ವಿಷಯ. ಕೆಲಸ ಬದಲಿಸುವ ಯೋಚನೆಯನ್ನು ಮಾಡುವವರಿಗೆ ಇಂದು ಸಕಾಲ.
ADVERTISEMENT
ADVERTISEMENT