ಮಂಗಳವಾರ, 12 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಾಲ ದೂರವಾಗಿ ಆರ್ಥಿಕವಾಗಿ ವೃದ್ಧಿ ಕಾಣುವರು
Published 23 ಮಾರ್ಚ್ 2026, 23:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಹಾರ ಪದ್ಧತಿಯಿಂದ ರಕ್ತದೊತ್ತಡ ಸಮಸ್ಥಿತಿಗೆ ಬರುವಂತೆ ಮಾಡಿಕೊಳ್ಳಿ. ವಿದೇಶದಿಂದ ಸ್ನೇಹಿತರ ಆಗಮನ ಸಂತೋಷ ತರಲಿದೆ. ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.
ವೃಷಭ
ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ ಉಂಟಾಗಲಿದೆ. ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ.
ಮಿಥುನ
ಸ್ನೇಹಿತರಿಗೆ ಸ್ವಯಂಪ್ರೇರಣೆಯಿಂದ ವ್ಯವಹಾರಕ್ಕೆ ಸಂಬಂಧಪಟ್ಟ ಸಲಹೆ ಕೊಡುವುದು ಸರಿಯಲ್ಲ. ಜ್ವರ ಅಥವಾ ಅಲರ್ಜಿ ಉಂಟಾಗಬಹುದು. ಮನಃಶಾಸ್ತ್ರಜ್ಞರಿಗೆ ಬೇಡಿಕೆ ಹೆಚ್ಚಲಿದೆ.
ಕರ್ಕಾಟಕ
ವಿಷಜಂತುಗಳ ಅಥವಾ ಕಾಡುಪ್ರಾಣಿಗಳಿಂದ ತೊಂದರೆ ಆಗಬಹುದು. ಯಾವುದೇ ವಿಷಯದಲ್ಲಿ ಆಲಸ್ಯ ಮಾಡುವುದು ಸರಿಯಲ್ಲ. ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿ.
ಸಿಂಹ
ನಿವೇಶನ ಮಾರಾಟದಿಂದ ಲಾಭ ಕಾಣುವಿರಿ. ಹಣಕಾಸಿನ ಚಿಂತೆಗಳು, ಸಾಲ ದೂರವಾಗಿ ಆರ್ಥಿಕವಾಗಿ ವೃದ್ಧಿ ಕಾಣಲಿದ್ದೀರಿ. ಮಕ್ಕಳ ವರ್ತನೆ ಮನಸ್ಸಿಗೆ ಸಂತೋಷ ತಂದುಕೊಡಲಿದೆ.
ಕನ್ಯಾ
ಕೆಲಸ ಕಾರ್ಯಗಳಿಗೆ ದೇವತಾ ಅನುಗ್ರಹ ಕಡಿಮೆ ಇರುವುದರಿಂದ ಕಾರ್ಯ ಸಾಧನೆಗೆ ಪರಿಶ್ರಮ ಬೇಕಾಗುತ್ತದೆ. ಅನಿರೀಕ್ಷಿತವಾಗಿ ನಡೆಯುವ ಕೆಲಸಗಳಿಂದ ಸಂತಸ ಹೆಚ್ಚುವುದು.
ತುಲಾ
ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ಎಂಥ ಪರಿಸ್ಥಿತಿಯನ್ನಾದರೂ ನಿಭಾಯಿಸುವ ಸಾಮರ್ಥ್ಯ ದುರ್ಗಾ ಪರಮೇಶ್ವರಿ ಆರಾಧನೆ ಮಾಡುವುದರಿಂದ ಪ್ರಾಪ್ತಿ.
ವೃಶ್ಚಿಕ
ತಾಂತ್ರಿಕ ವಿದ್ಯೆಯನ್ನು ವ್ಯಾಸಂಗ ಮಾಡುವವರಿಗೆ ಫಲಿತಾಂಶ ಲಭಿಸಿ ಸಂತೋಷವಾಗುವುದು. ಬಹುಜನರಲ್ಲಿ ಮಾಡಿದ ಸಾಲಗಳು ತೀರಿದ್ದರಿಂದ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ.
ಧನು
ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶುಭ ಸಮಯವಾಗಿದ್ದು ಅವರು ಪಟ್ಟ ಶ್ರಮಕ್ಕೆ ಹೆಚ್ಚಿನ ಅಂಕ ಪಡೆದು ತಮ್ಮ ಗುರಿ ಮುಟ್ಟುವ ಸಾಧ್ಯತೆಗಳಿವೆ. ಸುಖ-ದುಃಖ, ನೋವು, ಅನಾರೋಗ್ಯ, ಲಾಭ-ನಷ್ಟಗಳ ಮಿಶ್ರಣಫಲ ಇರುತ್ತದೆ.
ಮಕರ
ನೂತನ ಮನೆ ನಿರ್ಮಾಣ ಅಥವಾ ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕ ವಾತಾವರಣ ಸ್ನೇಹಿತರಿಂದ ಸಿಗಲಿದೆ. ಆರೋಗ್ಯದಲ್ಲಿ ಏರುಪೇರಾದರೂ ಆರ್ಥಿಕ ಬೆಳವಣಿಗೆ ಖಂಡಿತ ಸಾಧ್ಯವಿದೆ.
ಕುಂಭ
ಮಿತ್ರ ವೃಂದದಲ್ಲಿ ಕಂಡು ಬರುವ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಡುವುದರಲ್ಲಿ ಯಶಸ್ವಿಯಾಗುವಿರಿ. ಸಕಾರಾತ್ಮಕ ಮನೋಭಾವದಿಂದ ಮತ್ತು ಮಾತುಗಾರಿಕೆಯಿಂದ ಎಲ್ಲರ ಮನಸ್ಸು ಗೆಲ್ಲುವಿರಿ.
ಮೀನ
ರಾಜಕೀಯ ವ್ಯಕ್ತಿತ್ವವನ್ನು ಹೊಂದಿರುವ ನಿಮಗೆ ಜನರ ಭಾವನೆಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದು ಚೆನ್ನಾಗಿ ತಿಳಿದಿದೆ. ಗುರಿ ಮುಟ್ಟುವ ಬಗ್ಗೆ ನಿಮ್ಮ ಶ್ರಮವಿರಲಿ.
ADVERTISEMENT
ADVERTISEMENT