ಮಂಗಳವಾರ, 19 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ
Published 20 ಏಪ್ರಿಲ್ 2026, 23:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹೋದರರಲ್ಲಿ ಅನರ್ಥಗಳು ನಡೆಯುವ ಸಂಭವವಿದೆ. ಅದರ ಪರಿಣಾಮ ಭಿನ್ನಾಭಿಪ್ರಾಯ ಮೂಡುವುದು. ಹೊಸ ವಾಹನ ಖರೀದಿಸುವ ಅವಶ್ಯಕತೆ ಹೆಚ್ಚಾಗಲಿದೆ.
ವೃಷಭ
ಹಿರಿಯರಿಂದ ಪಡೆದ ಸಲಹೆಯು ಜೀವನಕ್ಕೆ ಹೊಸ ಬುನಾದಿಯಾಗಲಿದೆ. ಗುರಿಯನ್ನು ತಲುಪಲು ನೆರವಾಗುವುದು. ಧನಾಗಮನ ಹೆಚ್ಚಿದ್ದರೂ ಸಂಪಾದನೆಯ ಬಹುಪಾಲು ವೆಚ್ಚವಾಗಲಿದೆ.
ಮಿಥುನ
ಉದ್ಯೋಗದಲ್ಲಿ ನಿಧಾನಗತಿಯ ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಮನೆಯವರೊಂದಿಗೆ ಸುಖ ಭೋಜನ ಮಾಡುವ ಅವಕಾಶ ಸಿಗಲಿದೆ. ತಂದೆ ಮಕ್ಕಳ ಸಂಬಂಧ ಗಾಢವಾಗಿರುವುದು.
ಕರ್ಕಾಟಕ
ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ನೆಮ್ಮದಿ ಸಿಗಲಿದೆ. ಮೂರ್ಖತನದಿಂದಾಗಿ ಬಂಧು-ಬಾಂಧವರು ದೂರವಾಗುವ ಸಂಭವವಿದೆ. ತೆಂಗಿನಕಾಯಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
ಸಿಂಹ
ಕಾರ್ಯಗಳಿಗೆ ಅಡ್ಡಿ ಉಂಟಾದಲ್ಲಿ ಸರಿಯಾಗಿ ವಿಮರ್ಶಕರಲ್ಲಿ ವಿಮರ್ಶಿಸಿ ಮುಂದುವರಿಯಿರಿ. ಹೊಸ ಜಾಗದಲ್ಲಿ ಅಥವಾ ಹೊರರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸಬೇಕಾಗುವುದು. ತಂದೆಯಲ್ಲಿಟ್ಟ ಬೇಡಿಕೆಗಳು ಈಡೇರಲಿವೆ.
ಕನ್ಯಾ
ತಾಂತ್ರಿಕ ವೃತ್ತಿಯವರಿಗೆ ಕಾರ್ಯರಂಗದಲ್ಲಿ ಮತ್ತು ಕಾರ್ಯಸ್ಥಳದಲ್ಲಿ ಹಿತ ಎನಿಸುವ ಘಟನೆ ನಡೆಯಲಿದೆ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.
ತುಲಾ
ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಕುಟುಂಬಕ್ಕೆ ಮಾತ್ರವಲ್ಲದೆ, ನಿಮ್ಮ ಸುತ್ತಲಿನ ಬೇರೆ ಜನರ ಜೀವನಕ್ಕೆ ಕೂಡ ಮಾರ್ಗದರ್ಶಿಯಾಗಲಿದೆ. ಪ್ರಭಾವಿ ವ್ಯಕ್ತಿಗಳ ನಿಕಟ ಸಂಪರ್ಕವು ಕಾರ್ಯಾನುಕೂಲ ಮಾಡಿಕೊಡುವುದು.
ವೃಶ್ಚಿಕ
ಆರಂಭ ಸ್ವಲ್ಪ ಗೊಂದಲಮಯವಾದರೂ, ತಪ್ಪಿದ ಪ್ರಯಾಣದಿಂದ ವಿರಾಮಕ್ಕೆ ಅವಕಾಶವಿರುವುದು. ಸಮಯ ಕಳೆದಂತೆ ಅನಗತ್ಯ ಚಿಂತೆ, ಭಯಗಳು ದೂರಾಗಲಿವೆ.
ಧನು
ಹತ್ತಾರು ವಿಷಯಗಳಲ್ಲಿ ಗಮನ ಹರಿಸುವುದಕ್ಕಿಂತ ನಿರ್ದಿಷ್ಟವಾದ ಒಂದು ಗುರಿಯ ಕಡೆಗೆ ತಲುಪುವ ಪ್ರಯತ್ನ ಮಾಡಿ. ಪಾಲುದಾರಿಕೆ ವ್ಯವಹಾರದವರಿಗೆ ಬಂಡವಾಳದ ಅವಶ್ಯಕತೆ ಇಂದು ಬರುವುದು.
ಮಕರ
ವೃತ್ತಿ ಬದುಕಿನಲ್ಲಿ ಜವಾಬ್ದಾರಿ ಕಡಿಮೆಯಾದ ಕಾರಣ ನಿಂದನೆಗೆ ಒಳಗಾಗುವ ಸನ್ನಿವೇಶ ಎದುರಾಗಬಹುದು. ಕಾರ್ಯಾಗಾರದಲ್ಲಿ ಗುಂಪಿನ ಮುಂದಾಳತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕಾಗುವುದು.
ಕುಂಭ
ಸಂಬಂಧವಿರದ ಕೆಲಸಕ್ಕಾಗಿ ತಿರುಗಾಟವಾದರೂ ಹೊಸ ಜನರ ಪರಿಚಯ, ಹೊಸ ಅನುಭವ ನೆಮ್ಮದಿಯನ್ನು ತರುತ್ತದೆ. ಮನಃಕ್ಲೇಶವು ಸಾಮರಸ್ಯದಿಂದ ದೂರಾಗುತ್ತದೆ.
ಮೀನ
ಕೌಟುಂಬಿಕ ವಿಚಾರದಲ್ಲಿ ಇನ್ನೊಬ್ಬರ ಮಾತನ್ನು ಕೇಳಿ ಪರಾಮರ್ಶಿಸದೇ ವಿವೇಚನೆಯನ್ನು ಕಳೆದುಕೊಳ್ಳಬೇಡಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ತೋರಿಬಂದು ವಿದ್ಯಾರ್ಥಿಗಳಿಗೆ ನಿರಾಸೆ ಹಾಗು ಕೋಪ ಕಾಡಲಿದೆ.
ADVERTISEMENT
ADVERTISEMENT